ಇಸ್ಲಾಮಿಕ್ ಸಂಪ್ರದಾಯಕ್ಕೂ, ಹಿಂದೂ ಧರ್ಮದ ಆಧ್ಯಾತ್ಮಿಕ ಶುದ್ಧತೆಗೂ ಅವಮಾನವಾಗಿದೆ….
1 min read
ಗುಲರ್ ಕಾ ಝಾಡ್ (ಅತ್ತಿ ಮರ) ಅನ್ನು ಔದುಂಬರ ವೃಕ್ಷ ಎಂದು ಪ್ರಚಾರ ಮಾಡುವುದು ಇತಿಹಾಸವನ್ನು ಮರೆಮಾಚುವ ಪ್ರಯತ್ನವಾಗಿದೆ. ಈ ಸ್ಥಳವು ಖಬ್ರಸ್ತಾನ್, ಅಂದರೆ ಸಮಾಧಿಗಳ ಪ್ರದೇಶವಾಗಿದ್ದು, ಪವಿತ್ರ ಚೌಕಂಡಿಯೊಳಗೆ ಅನೇಕ ಸೂಫಿ ಸಂತರ ಸಮಾಧಿಗಳನ್ನು ಹೊಂದಿದೆ.
ಈ ಚೌಕಂಡಿಯಲ್ಲಿವೆ ಹಜ್ರತ್ ಸಯ್ಯದ್ ಹುಸೇನ್ ಶಾ ಖಾದ್ರಿ ಮತ್ತು ಹಜ್ರತ್ ಸಯ್ಯದ್ ಬುದನ್ ಶಾ ಖಾದ್ರಿ ಯವರ ಗೋರಿಗಳು. ಇವರು ಸೂಫಿ ಸಂತರಾದ ಹಜ್ರತ್ ಬಾಬಾ ಬುದನ್ ಅವರ ನಿಕಟ ಸಂಬಂಧಿಕರೂ ವಾರಸುದಾರರೂ ಆಗಿದ್ದಾರೆ. ಅವರ ಸಮಾಧಿಗಳು ಈ ಸ್ಥಳದ ಸೂಫಿ ಪಂಥದ ಧಾರ್ಮಿಕ ಮಹತ್ವವನ್ನು ಪುಷ್ಟಪಡಿಸುತ್ತವೆ.
ನಿಜವಾದ ಸನಾತನ ಧರ್ಮ ಸತ್ಯಮೇವ ಜಯತೆ ಎಂಬ ತತ್ವವನ್ನು ಬೆಂಬಲಿಸುತ್ತದೆ. ಸಮಾಧಿ ಪ್ರದೇಶಗಳನ್ನು ಹಿಂದೂ ದೇವಾಲಯವೆಂದು ಘೋಷಿಸಿ ರಾಜಕೀಯ ಲಾಭಕ್ಕಾಗಿ ಕತೆಗಳನ್ನು ಸೃಷ್ಟಿಸುವುದು ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ. ಇದು ಇಸ್ಲಾಮಿಕ್ ಸಂಪ್ರದಾಯಕ್ಕೂ, ಹಿಂದೂ ಧರ್ಮದ ಆಧ್ಯಾತ್ಮಿಕ ಶುದ್ಧತೆಗೂ ಅವಮಾನವಾಗಿದೆ.
ನಾವು ಸತ್ಯವನ್ನು ಕಾಪಾಡೋಣ, ಪೂಜ್ಯ ಪೂರ್ವಜರ ತ್ಯಾಗವನ್ನು ಗೌರವಿಸೋಣ ಮತ್ತು ಸಂಯುಕ್ತ ಇತಿಹಾಸವನ್ನು ಸಮ್ಮಾನದಿಂದ ಉಳಿಸೋಣ.
ಸೈಯದ್ ಫಕ್ರುದ್ದೀನ್ ಶಾ ಖಾದ್ರಿ