ನರೇಗ ಕಾಮಗಾರಿಯಲ್ಲಿ ಅವ್ಯವಹಾರ; ಗ್ರಾಮ ಪಂಚಾಯಿತಿ ಪಿಡಿಒ ಸಸ್ಪೆಂಡ್..
1 min read
ನರೇಗ ಕಾಮಗಾರಿಯಲ್ಲಿ ಅವ್ಯವಹಾರ; ಗ್ರಾಮ ಪಂಚಾಯಿತಿ ಪಿಡಿಒ ಸಸ್ಪೆಂಡ್..
ಕಡೂರು : ನರೇಗ ಕಾಮಗಾರಿಯಲ್ಲಿ ಅವ್ಯವಹಾರ; ಗ್ರಾಮ ಪಂಚಾಯಿತಿ ಪಿಡಿಒ ಸಸ್ಪೆಂಡ್, 11 ಲಕ್ಷ ದಂಡ ವಸೂಲಿಗೆ ಆದೇಶ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ನರೇಗ ಕಾಮಗಾರಿಯಲ್ಲಿ ಕಡೂರು ತಾಲೂಕಿನ ಬಳ್ಳಿನೂರು ಗ್ರಾಮ ಪಂಚಾಯತ್ ಪಿಡಿಒ ಶಿವಕುಮಾರ್ ನನ್ನುಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಎಸ್. ಕೀರ್ತನಾ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಳ್ಳಿನೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಶಿವಕುಮಾರ್ ಸರ್ಕಾರದ ಲಕ್ಷಾಂತರ ಹಣವನ್ನು ದುರ್ಬಳಕೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದ ಬಗ್ಗೆ ಗ್ರಾಮದ ಶಶಿಧರ್ ಎಂಬವರು ದೂರು ನೀಡಿದ್ದರು.
ತನಿಖೆಯಲ್ಲಿ ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ ಪಿಡಿಒ ಶಿವಕುಮಾರ್ ಗೆ 11 ಲಕ್ಷ ಹಣವನ್ನು ದಂಡದ ರೂಪದಲ್ಲಿ ಹಿಂದಿರುಗಿಸುವಂತೆ ಜಿಲ್ಲಾ ಪಂಚಾಯತ್ ಓಂಬುಡ್ಸ್ ಮನ್ ಆದೇಶಿಸಿದ್ದರು. ಇದೀಗ ಓಂಬುಡ್ಸ್ ಮನ್ ವರದಿಯ ಆಧಾರದ ಮೇಲೆ ಪಿಡಿಒ ಶಿವಕುಮಾರ್ ನನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಪಿಡಿಓ ಅಲ್ಲದೇ ಗ್ರಾಮ ಪಂಚಾಯತಿ ಅಧ್ಯಕ್ಷರು, ಇಂಜಿನಿಯರ್ ಅವರಿಗೂ ಸಹ ದಂಡ ವಿಧಿಸಲಾಗಿದೆ.