ಕೇಂದ್ರ ಸರ್ಕಾರ ವೈಫಲ್ಯದ ವಿರುಧ್ದ ಮೂಡಿಗೆರೆ ಲಯನ್ ಸರ್ಕಲ್ ನಲ್ಲಿ ಪ್ರತಿಭಟನೆ…
1 min read
ಕೇಂದ್ರ ಸರ್ಕಾರ ವೈಫಲ್ಯದ ವಿರುಧ್ದ ಮೂಡಿಗೆರೆ ಲಯನ್ ಸರ್ಕಲ್ ನಲ್ಲಿ ಪ್ರತಿಭಟನೆ...
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಹಾಗೂ ಕೇಂದ್ರ ಸರ್ಕಾರ ವೈಫಲ್ಯದ ವಿರುಧ್ದ ಮೂಡಿಗೆರೆ ಲಯನ್ ಸರ್ಕಲ್ ನಲ್ಲಿ
ಮುಂಬತ್ತಿ ನಡಿಗೆ ಮತ್ತು ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಮೂಡಿಗೆರೆ ಕಸಬಾ ಹೋಬಳಿಯ ಅಧ್ಯಕ್ಷರಾದ ಸಿ.ಬಿ ಶಂಕರ್, ಮೂಡಿಗೆರೆ ಕಸಬಾ ಹೋಬಳಿ ಪ್ರಧಾನ ಕಾರ್ಯದರ್ಶಿಯಾದ ಕುನ್ನಳ್ಳಿ ರವಿ. ಕಸಬಾ ಹೋಬಳಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಯಾಕೊಬ್ ರವರು, ಪರಿಶಿಷ್ಟ ಪಂಗಡದ ಬ್ಲಾಕ್ ಅಧ್ಯಕ್ಷರಾದ ಹರೀಶ್ ಸಬ್ಬೆನಹಳ್ಳಿ.ಹಿಂದುಳಿದ ವರ್ಗದ ಬ್ಲಾಕ್ ಅಧ್ಯಕ್ಷರಾ ಷಣ್ಮುಗ, ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾದ ಬಾವುಬಿಳಗೊಳ. ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಇಮ್ರಾನ್. ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀನಿವಾಸ್ , ಯುವ ಕಾಂಗ್ರೆಸ್ ಮುಖಂಡರಾದ ಅನಿಲ್ ಛತ್ರಮೈದಾನ, ಆಶಿಕ್ ಬಿಜುವಳ್ಳಿ, ಭಾಗವಹಿಸಿದ್ದರು