ಮರಬಿದ್ದು ಕಾರ್ಮಿಕ ದುರ್ಮರಣ*…..
1 min read*ಮರಬಿದ್ದು ಕಾರ್ಮಿಕ ದುರ್ಮರಣ*
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಮರ ಬಿದ್ದ ಪರಿಣಾಮ ಆತ ಸ್ಥದಲ್ಲಿಯೇ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ. ಚೆಟ್ಟಳ್ಳಿ ಕಾಫಿ ಬೋರ್ಡ್ ಸಮೀಪದಲ್ಲಿರುವ ಕೊಂಗೇಟಿರ ತೋಟದಲ್ಲಿ ಇಂದು ಮಧ್ಯಾಹ್ನ ಈ ದುರಂತ ಸಂಭವಿಸಿದ್ದು ಮೈಸೂರು ಜಿಲ್ಲೆ ನಂಜನಗೂಡುವಿನ ಕಾರ್ಮಿಕ ಮಣಿ ಎಂಬಾತ ದಾರುಣವಾಗಿ ಅಂತ್ಯಕಂಡವರಾಗಿದ್ದಾರೆ. ಇವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ಕಾರ್ಮಿಕರು ಕಾಟಾವು ಮಾಡುತ್ತಿದ್ದ ಮರ ತುಂಡರಿಸಿ ಬಿದ್ದಿದ್ದು, ಅದರ ಹೊಡೆತ ಕ್ಕೆ ಸಿಲುಕಿ ಮಣಿ ಅಸು ನೀಗಿದ್ದಾರೆ.