लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವರದಿ ತಿರಸ್ಕರಿಸದಿದ್ದರೆ ಸರ್ಕಾರ ಪತನವಾಗುವವರೆಗೂ ಪ್ರತಿಭಟನೆ….

1 min read

ವರದಿ ತಿರಸ್ಕರಿಸದಿದ್ದರೆ ಸರ್ಕಾರ ಪತನವಾಗುವವರೆಗೂ ಪ್ರತಿಭಟನೆ

ಅಕ್ಷರತೋರಣ ವಾರ್ತೆ, ಚಿಕ್ಕಮಗಳೂರು:
ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಿರಸ್ಕರಿಸದಿದ್ದರೆ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ,ವೀರಶೈವ ಸಮಾಜವೂ ಸೇರಿದಂತೆ ಅನ್ಯಾಯಕ್ಕೊಳಗಾಗಿರುವ ವಿವಿಧ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸರ್ಕಾರವನ್ನು ಪತನಗೊಳಿಸುವವರೆಗೂ ವಿಶ್ರಮಿಸದೆ ಹೋರಾಟ ನಡೆಸುವುದಾಗಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

ನಗರದಲ್ಲಿಂದು ಕರೆದಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಿರಸ್ಕರಿಸಿ ಆಧುನಿಕ ತಂತ್ರಜ್ಞಾನ ಮತ್ತು ಆಧಾರ್ ಕಾರ್ಡ ಬಳಸಿ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಸಲಹೆ ನೀಡಿದ ಅವರು ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿಕೊಳ್ಳುವಂತೆ ಎಚ್ಚರಿಸುತ್ತಿದ್ದು, ಇದೇ ಧೋರಣೆ ಮುಂದುವರೆದರೆ ಹೋರಾಟ ಅನಿವಾರ್ಯ ಎಂದರು.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲುಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಮುಂಚೂಣಿಗೆ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರ ನಡೆಸುತ್ತಿದೆ. ರಾಜ್ಯದ ಜನರ ಸೌಹಾರ್ಧವನ್ನು ಕೆಡಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಹರಿ ಹಾಯ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಆಧರಿಸಿ ನೀಡಿರುವ ಅಂಕಿ ಅಂಶಗಳನ್ನು ಗಮನಿಸಿದಾಗ ಸರ್ಕಾರ 10 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯನ್ನು ಆತುರವಾಗಿ ಆವೈಜ್ಞಾನಿಕವಾಗಿ ಮತ್ತು ಒಂದು
ವರ್ಗದವರನ್ನು ಒಲೈಸಲು ಮಾಡಿರುವ ಹುನ್ನಾರದ ಭಾಗ ಎಂಬುದು ನಿಚ್ಚಳವಾಗಿ ಗೋಚರಿಸುತ್ತಿದೆ ಎಂದರು.

ಒಕ್ಕಲಿಗ, ವೀರಶೈವ ಸೇರಿದಂತೆ ವಿವಿಧ ಸಮುದಾಯಗಳನ್ನು ಒಳಪಂಗಡಗಳ ಆಧಾರದಲ್ಲಿ ವಿಂಗಡಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಸರ್ಕಾರ ಮುಸಲ್ಮಾನರು ಮತ್ತು ಕ್ರೈಸ್ತರ ಒಳ ಪಂಗಡಗಳನ್ನು ವಿಂಗಡಿಸದೆ ದೊಡ್ಡ ಸಂಖ್ಯೆಯನ್ನು ತೋರಿಸುವ ಮೂಲಕ ಅವರನ್ನು ಓಲೈಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಒಕ್ಕಲಿಗ ಜನಾಂಗ ಉಪ ಪಂಗಡಗಳು ಸೇರಿದಂತೆ ರಾಜ್ಯದಲ್ಲಿ ಅಂದಾಜು ಒಟ್ಟು 1 ಕೋಟಿ 20 ಲಕ್ಷ ಆಸುಪಾಸಿನಲ್ಲಿ ಜನಸಂಖ್ಯೆ ಇರುವುದಾಗಿ ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಾಹಿತಿಯಿದೆ. ಯಾವುದೇ ಸಮೀಕ್ಷೆ ನಡೆಸದೆ ಒಕ್ಕಲಿಗರ ಜನಾಂಗದ 117 ಕ್ಕೂ
ಮೇಲ್ಪಟ್ಟು ಉಪಜಾತಿಗಳು ಸೇರಿದಂತೆ ಸಂಖ್ಯೆಯಲ್ಲಿ ಇಳಿಕೆ ಮಾಡಿ ತೋರಿಸುವ ಮೂಲಕ ರಾಜ್ಯದ ಒಕ್ಕಲಿಗರಿಗೆ ಮತ್ತು ಲಿಂಗಾಯಿತ ಜನಾಂಗದ ಜನರನ್ನು ಎಲ್ಲಾ ತರಹದ ಸೌಲಭ್ಯಗಳಿಂದ ದೂರ ಇಡಲು ಮಾಡಿರುವ ಹುನ್ನಾರ ಎಂದು ಕಿಡಿಕಾರಿದರು.

ರಾಜ್ಯದ ಒಟ್ಟು ಜನಸಂಖ್ಯೆ 6.35 ಕೋಟಿ ಇದ್ದು, ಆಯೋಗದ ವರದಿಯೆಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು ಉಳಿದ 37 ಲಕ್ಷ ಜನಸಂಖ್ಯೆ ಬಗ್ಗೆ ಸ್ಪಷ್ಟತೆಯಿರುವುದಿಲ್ಲ. 1,34,319 ವ್ಯಕ್ತಿಗಳು ತಾವು ಯಾವುದೇ ಜಾತಿಗೆ ಸೇರಿದವರಲ್ಲವೆಂದು ಮತ್ತು 2.53,954 ಜನರು ತಮ್ಮ ಜಾತಿಯನ್ನು ಬಹಿರಂಗ ಪಡಿಸಲು ನಿರಾಕರಿಸುತ್ತಾರೆಂದು ಹೇಳಿದ್ದಾರೆ.
ಹೀಗಿದ್ದಾಗ ಕರಾರುವಕ್ಕಾಗಿ ಜಾತಿಯ ಬಗ್ಗೆ ಅಂಕಿ ಅಂಶಗಳನ್ನು ನೀಡಲು ಹೇಗೆ ಸಾಧ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 1 ಕೋಟಿ 52 ಲಕ್ಷ, ಮುಸ್ಲಿಮರು 75 ಲಕ್ಷ, ಲಿಂಗಾಯಿತರು 66 ಲಕ್ಷ, ಒಕ್ಕಲಿಗರು 61 ಲಕ್ಷ ಈ ರೀತಿ ವಿವಿಧ ಜಾತಿಯ ಲೆಕ್ಕಾಚಾರವನ್ನು ತೋರಿಸಿರುತ್ತಾರೆ ಎಂದು ದೂರಿ ದರು.

ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಗಣತಿ ಸರಿ ಇದ್ದಿದ್ದರೆ ಶ್ರೀ ಕಾಂತರಾಜ್ ರವರ ವರದಿಯನ್ನು ಸಮಿಕ್ಷೆ ನಡೆಸಿದ ಸಂಧರ್ಭದಲ್ಲಿ ಏಕೆ ಪ್ರಚುರ ಪಡಿಸಿರುವುದಿಲ್ಲ. ಇದು ಅನುಮಾನಕ್ಕೆ ಆಸ್ಪದ ನೀಡಿರುತ್ತದೆ. ಈ ಜಾತಿ ಗಣತಿಯನ್ನು ಅನುಷ್ಠಾನಗೊಳಿಸಿದರೆ ಜಾತಿ ಜಾತಿಗಳ ಮಧ್ಯೆ ಆಂತರಿಕ ಬಿಕ್ಕಟ್ಟು ಎದುರಾಗಲಿದೆ ಆ ಹಿನ್ನಲೆಯಲ್ಲಿ ಕೂಡಲೆ ವರದಿ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಗೋಷ್ಟಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಮುಖಂಡರಾದ ಹ ರಿಣಾಕ್ಷಿ ನಾಗರಾಜ್.. ಮಾಡ್ಲಾ ಪ್ರಕಾಶ್, ಕುಳ್ಳೆಗೌಡ. ರತೀಶ್,..ಟಿ.ಡಿ ಮಲ್ಲೇಶ್, ಮುಗ್ರಹಳ್ಳಿಪ್ರದೀಪ್. ಅಶೋಕ್ ಇದ್ದರು.

About Author

Leave a Reply

Your email address will not be published. Required fields are marked *