ಉದುಸೆ ಸುಗ್ಗಿ ಹಬ್ಬಕ್ಕೆ ವೈಭವದ ತೆರೆ*
1 min read
*ಉದುಸೆ ಸುಗ್ಗಿ ಹಬ್ಬಕ್ಕೆ ವೈಭವದ ತೆರೆ*
*************************************
ಮೂಡಿಗೆರೆ :ಹಚ್ಚ ಹಸುರನ್ನೆ ಚಾಚಿ ಪ್ರಕೃತಿ ಮಡಿಲಲ್ಲಿರುವ ಕಾಫಿ ನಾಡಿನ ಮೂಡಿಗೆರೆಯ ಉದುಸೆ ಗ್ರಾಮದಲ್ಲಿ ಎರೆಡು ಸಾವಿರಕ್ಕು ಅಧಿಕ ಭಕ್ತ ಮಹಾಶಯರು ಗುರುವಾರ ಸಂಜೆ ವೈಭವದ ಸುಗ್ಗಿ ಹಬ್ಬಕ್ಕೆ ತೆರೆ ಎಳೆದರು.
ಮಲೆನಾಡಿನ ಬಹುತೇಕ ಬಾಗಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಸುಗ್ಗಿಯೋ ಸುಗ್ಗಿ ಸಂಪ್ರದಾಯದಂತೆ ಇ ವರ್ಷವು ಏಪ್ರಿಲ್ 7 ನೇ ತಾರೀಕು ಉದುಸೆ, ಹೆಗ್ಗರವಳ್ಳಿ, ಚಕ್ಕುಡಿಗೆ ಗ್ರಾಮಗಳ ಸುಗ್ಗಿ ಹಬ್ಬವನ್ನು ನಿರ್ವಹಣಾ ಮಠಕ್ಕೆ ಹೋಗುವ ಮೂಲಕ 12 ದಿನಗಳ ಕಾಲ ನೆಡೆಯುವ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಬ್ಬ ಪ್ರಾರಂಭವದ ಎರಡನೆ ದಿವಸ ಮೂರು ಗ್ರಾಮಸ್ಥರು ಸೇರಿ ಓಣಿ ಮಾರಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬುದುವಾರ ಮದ್ಯಹ್ನ 2 ಗಂಟೆಗೆ ಮೂರು ಗ್ರಾಮಕ್ಕು ಸಾರು ಬರುವದು ಇಲ್ಲಿಂದಲೆ ಕಟ್ಟು ನಿಟ್ಟಿನ ಸಾಂಪ್ರದಾಯಿಕ ಸುಗ್ಗಿ ಹಬ್ಬಕೆ ಚಾಲನೆ ದೊರಕುವದು.ಸಾರು ಸಾರುವಾಗ ಹೊರಗಿದ್ದವರು ಹೊರಗೆ ಒಳಗಿದ್ದವರು ಒಳಗೆ ಎಂದು ಸಾರುತ್ತಾರೆ. ಅಂದಿನಿಂದಲೆ ಮೂರು ಗ್ರಾಮದವರು ಮಡಿಯಿಂದ ಸಾಂಪ್ರದಾಯಿಕ ಹಬ್ಬಕ್ಕೆ ಅಣಿಯಾಗುತ್ತಾರೆ. ಪ್ರತಿ ಮನೆಯಲ್ಲೂ ಮಾಂಸ ಆಹಾರ ನಿಷೇದ, ಸೌದೆ ಕಡಿಯುವದು, ಒಡೆಯುವದು, ಹಂಚಿನ ಮೇಲೆ ರೊಟ್ಟಿ, ಚಪಾತಿ, ಮಾಡುವದು ನಿಷೇದ, ಸಾಂಬಾರು ಪದಾರ್ಥಕ್ಕೆ ಒಗ್ಗರಣೆ ಹಾಕುವದು ನೆಂಟರಿಷ್ಟರ ಮನೆಗೆ ಪ್ರಯಾಣ ಬೆಳೆಸುವದು, ಮಣೆ ಮತ್ತು ಕುರ್ಚಿಗಳಲ್ಲಿ ಕುರುವದು, ಮಂಚದ ಮೆಲೆ ಮಲಗುವದು ಸಂಪೂರ್ಣ ನಿಷೇದ ವಾಗಿರುತ್ತದೆ.
ಸುಗ್ಗಿ ಹಬ್ಬವನ್ನು ಎಲ್ಲ ವರ್ಗದವರು ಸೇರಿ ಆಚರಿಸುವ ಹಬ್ಬ ಹತ್ತಾರು ಊರುಗಳಿಂದ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಸಾರು ಹಾಕಿದ ನಂತರದ ದಿನ ಗುರುವಾರದಂದು ಬಂಬರ ಬನದಲ್ಲಿ ಬೆಳಿಗ್ಗೆ 7 ಗಂಟೆಗೆ ಮಡೆ ಪೂಜೆ ಇದೆ ದಿನ ಸಂಜೆ ಗುಡಿ ತೋಪಿನ ಹೊಲದಲ್ಲಿ ದೇವರ ಗಂಧ ಪ್ರಸಾದ ಶುಕ್ರವಾರ ಮತ್ತೆ ಸಾಸಿವೆ ಬನದಲ್ಲಿ ಮಡೆ ಪೂಜೆ ರಾತ್ರಿ ದೀಪದ ಮಲ್ಲಿ ಉತ್ಸವ ಮಾರಿಕಟ್ಟೆಯಲ್ಲಿ ನೆರವೇರಿತು. ಶನಿವಾರ ಕಲಿಕಾ ಮಂದಿರದಲ್ಲಿ ದೊಡ್ಡಮ್ಮನವರ ಉತ್ಸವ ಭಾನುವಾರ 3 ಗಂಟೆಗೆ ದೊಡ್ಡಮ್ಮನವರ ಹಗಲು ಸುಗ್ಗಿ ಕೋಲಾಟ, ಹಣ್ಣು ಕಾಯಿ ಮಾಡಿ ದೇವರ ಉಯ್ಯಾಲೆ ಮಾಡಿ ದೊಡ್ಡಮ್ಮನವರ ಸುಗ್ಗಿ ಮುಕ್ತಾಯವಾಗುವದು.
ನಂತರ ಶುರುವಾಗುವದು ಚಿಕ್ಕಮ್ಮನರ ಸುಗ್ಗಿ ಭಕ್ತಾದಿಗಳು ದೂರದ ಊರಿಂದ ಓಡೋಡಿ ಬರುತ್ತಾರೆ ಗ್ರಾಮದ ಯಾರೆ ಹೊರಗೆ ಇದ್ದಲ್ಲಿ ಸಾರು ಬರುವ ಮುನ್ನ ಊರಲ್ಲಿರುತ್ತಾರೆ. ಸಾರಿನ ಸಂಜೆ ದೊಡ್ಡ ಪೆಟ್ಟಿಗೆಯಲ್ಲಿ ಚಿಕ್ಕಮ್ಮನವರ ಮೊದಲ ಸುಗ್ಗಿ ಮಂಗಳವಾರ ಚೌತಿ ಅದೆ ದಿನ ರಾತ್ರಿ ಚಿಕ್ಕಮ್ಮನವ ಇರುಳು ಸುಗ್ಗಿ ಅಂದು ಹೆಗ್ಗರವಳ್ಳಿ ಗ್ರಾಮದ ವೀರಭದ್ರ ದೇವರು ಉದುಸೆಗೆ ಆಗಮಿಸುತ್ತೆ. ವೀರಭದ್ರನನ್ನು ಬರಮಾಡಿಕೊಳ್ಳಲು ಚಿಕ್ಕಮ್ಮನವರು ರಾತ್ರಿ ಯಾವುದೆ ಶಬ್ದವಿಲ್ಲದ ಓಣಿ ಗಂಡಿಯಲ್ಲಿ ಕದ್ದು ಬರುವದು ನೋಡುವದು ಒಂದು ವಿಶೇಷ.ಬುದುವಾರ ಬೆಳಿಗ್ಗೆ ಕೆಂಡೋತ್ಸವ. ಸಂಜೆ ಹನುಮನ ಕಾಡು ಮರಳಿನಲ್ಲಿ ಹೆಗ್ಗರವಳ್ಳಿ ವೀರಭದ್ರ ದೇವರು ಮತ್ತು ಚಿಕ್ಕಮ್ಮನವರು ಹೇಮಾವತಿ ನದಿ ತಿರದಲ್ಲಿ ಹಣ್ಣು ತುಪ್ಪ ಒಪ್ಪಿಸಿ ಚಿಕ್ಕಮ್ಮನವರು ತಾನು ತವರಿಗೆ ಹೋಗುವ ಸಂದರ್ಭದಲ್ಲಿ ಕಳೆದುಕೊಂಡ ಮೂಗುತಿಯನ್ನು ಹುಡುಕುವದು ವಿಶೇಷವಾಗಿರುತ್ತದೆ.
ಸುಗ್ಗಿ ಹಬ್ಬದ ಕೊನೆಯ ದಿನವಾದ ಗುರುವಾರ ಸಾವಿರಕ್ಕೂ ಅಧಿಕ ಬಕ್ತಾದಿಗಳು ಇಡಿ ಗೊನೆ ಒಪ್ಪಿಸಿ ಚಿಕ್ಕಮ್ಮನವರು ಮತ್ತು ವೀರಭದ್ರ ದೇವರ ಸುಗ್ಗಿಯನ್ನು ಕಣ್ಣ್ ತುಂಬಿಕೊಂಡು ಉದುಸೆ ದೋಣುಗುಡಿನಿಂದ ಆಗಮಿಸಿದ ಕೆಂಚರಯ ದೇವರ ಉತ್ಸವ ನೋಡುವದೇ ಆನಂದವಾಗಿರುತ್ತದೆ. ಸುಗ್ಗಿ ಮುಗಿದು ರಾತ್ರಿ ದೇವರ ಉಯ್ಯಾಲೆ ಮುಗಿಸಿಕೊಂಡು ರಾತ್ರಿ ಮೂಲ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿ ಸುಗ್ಗಿ ಉತ್ಸವಕ್ಕೆ ತೆರೆ ಎಳೆಯಲಾಗುವದು.
ವರದಿ
ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ