लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೈತ ಭವನದಲ್ಲಿ ಮದುವೆ ಜಾಂ ಜೂಂ.
ಮುಖ್ಯ ರಸ್ತೆ ಜಾಂ.ಜಕ್ಕಂ

ಮೂಡಿಗೆರೆ ಪಟ್ಟಣದಲ್ಲಿ ಹಾದು ಹೋಗಿರುವ 173.ನೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರೈತ ಭವನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಸರಿಯಾದ ಸ್ಥಿತಿ ಇಲ್ಲವಾಗಿದೆ..

ಇಂದು ನಡೆದ ಮದುವೆ ಕಾರ್ಯಕ್ರಮ ಒಂದರಲ್ಲಿ ವಾಹನ ಚಾಲಕರಿಗೆ ಸರಿಯಾದ ಮಾಹಿತಿ ಇಲ್ಲದೆ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರದಾಡುವಂತಾಯಿತು.
ರೈತ ಭವನದ ಒಳಗೆ ಹೋದ ವಾಹನಗಳು ಹೊರಗೆ ಬರದೆ, ಹೊರಗಿನಿಂದ ವಾಹನಗಳು ಒಳಗೆ ಹೊಗದಂತೆ ಸಮಸ್ಯೆಯಾಯಿತು.
ರೈತ ಭವನದ ಒಳಗಡೆ ವಾಹನ ನಿಲ್ಲಿಸಲು ಸಾಕಷ್ಟು ಜಾಗ ಇದ್ದರೂ ಇಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರದಾಡುವಂತಾಗಿದೆ.
ರೈತ ಭವನದಲ್ಲಿ ವರ್ಷಕ್ಕೆ ಅನೇಕ ಬಾರಿ ಈ ರೀತಿಯ ಅವಘಡಗಳು ನಡೆಯುತ್ತಾ ಇರುತ್ತವೆ.
ಅವಿನ್ ಟಿವಿಯಿಂದ ಪೊಲೀಸಿಗೆ ಕರೆ ಹೋದ ನಂತರ ಪೊಲೀಸ್ ಬರುತ್ತದೆ.ಅಷ್ಟರಲ್ಲಿ ಟ್ರಾಫ಼ಿಕ್ ಜಾಮ್ ಅಗಿರುತ್ತೆ.ಇಂದು ರೈತ ಭವನದಿಂದ ಮೂಡಿಗೆರೆ ಎಂ.ಜಿ.ಎಂ ವರೆಗೆ.ಇನ್ನೊಂದು ಕಡೆ ಬಸ್ ಡಿಪೊವರೆಗೆ ವಾಹನಗಳು ಜಾಂ ಅಗಿದ್ದವು.ರಸ್ತೆಯಲ್ಲಿರುವ ವಾಹನಗಳನ್ನು ಸರಿ ಮಾಡುವುದರೊಳಗೆ ರೈತಭವನದ ಒಳಗೆ ಇದ್ದ ವಾಹನಗಳು 2.ಗಂಟೆ ನಿಂತಲ್ಲೆ ಬಾಕಿಯಾಗಿದ್ದವು.ಸರಿಯಾದ ಸಮಯಕ್ಕೆ ಮದುವೆ ಮುಗಿಸಿ ಹೊಗೊಣವೆಂದು ಬಂದಿದ್ದ ಉಜಿರೆಯ ಸಂಪತ್ ಸ್ನೇಹಿತರು ಮೂಡಿಗೆರೆಯ ಟ್ರಾಫ಼ಿಕ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರೈತ ಭವನ ಬುಕ್ ಮಾಡುವಾಗ ಆಡಳಿತ ಮಂಡಳಿಯವರು ಸೇರುವ ಜನ ಸಂಖ್ಯೆಯನ್ನು ದೃಡಪಡಿಸಿಕೊಂಡು ಟ್ರಾಫಿಕ್ ಸಮಸ್ಯೆ ಬಗ್ಗೆ ಪೊಲೀಸಿಗೆ ಮಾಹಿತಿ ನೀಡುವುದು.ಪೊಲೀಸರಿಂದ ಸಹಕಾರ ಸಿಗಲಿದ್ದರೆ ಸೆಕ್ಯೂರಿಟಿ ಗಾರ್ಡನ್ನು ಟ್ರಾಫ಼ಿಕ್ ಜಾಂ ಅಗುವ ಮೊದಲೆ ನಿಯೋಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಅಗದಂತೆ ನೋಡಿಕೊಳ್ಳ ಬೇಕು.
ಮೂಡಿಗೆರೆಗೆ ಉತ್ತಮ ಕಲ್ಯಾಣ ಮಂಟಪ ರೈತ ಭವನ ಇದೆ.ಇನ್ನಾದರು ಸರಿಯಾದ ಪಾರ್ಕಿಂಗ್ ವ್ಯವಸ್ಥೆಗೆ ರೈತ ಭವನ ಆಡಳಿತ ಮುಂದಾಗಲಿ.
ಈಗಾಗಲೆ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮುಂದಿನ ದಿನಗಳಲ್ಲಿ ಇಂತಹ ಅವಘಡ ಸಂಬವಿಸದಂತೆ ರೈತ ಭವನದ ಆಡಳಿತ ಮಂಡಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
****ಈ ಹಿಂದೆ ರೈತ ಭವನದಲ್ಲಿ ಕುಡಿಯಲು ಪ್ಲಾಸ್ಟಿಕ್ ಬಾಟಲಿ ಬಳಸಬಾರದೆಂದು ಅವಿನ್ ಟಿವಿ ಅನೇಕ ಬಾರಿ ಮನವಿ ಮಾಡಿದರೂ ಆಡಳಿತ ಮಂಡಳಿ ಉಡಾಫ಼ೆ ಉತ್ತರ ನೀಡುತಿತ್ತು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದು ಅರ್ಜಿ ಸಲ್ಲಿಸಿತ್ತು.
ಇಲಾಖೆ ನೋಟಿಸ್ ನೀಡಿದ ನಂತರ ಇಂದು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿಲ್ಲಾ***
ಇನ್ನಾದರೂ ರೈತ ಭವನದ ಆಡಳಿತ ಮಂಡಳಿಯವರು ಟ್ರಾಫ಼ಿಕ್ಕ್ ಸಮಸ್ಯೆಗೆ ಸೂಕ್ತ ಪರಿಹಾರ ಓದಗಿಸಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯವಾಗಿದೆ

About Author

Leave a Reply

Your email address will not be published. Required fields are marked *