ಸಾಮಾಜಿಕ ಬದ್ಧತೆ ಬೆಳೆಸುವ ಸ್ಕೌಟಿಂಗ್ ಕಡ್ಡಾಯವಾಗಬೇಕು…
1 min read
ಸಾಮಾಜಿಕ ಬದ್ಧತೆ ಬೆಳೆಸುವ ಸ್ಕೌಟಿಂಗ್ ಕಡ್ಡಾಯವಾಗಬೇಕು..
ಜಿಲ್ಲಾ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಪುರಸ್ಕಾರ ಪ್ರಸಸ್ತಿ ಪತ್ರ ವಿತರಣಾ ಸಮಾರಂಭ
ಚಿಕ್ಕಮಗಳೂರು: ಶಿಸ್ತು, ಸಮಯ ಪ್ರಜ್ಞೆ ಹೊರಾಂಗಣ ಚಟುವಟಿಕೆ. ನೈತಿಕ ಕಟ್ಟುಪಾಡು, ಸಾಮಾಜಿಕ ಕಳಕಳಿ ಹೀಗೆ ಹತ್ತು ಹಲವು ಆದರ್ಶಗಳ ಮೂಲಕ ಜವಾಬ್ದಾ ರಿಯುತ ಯುವಕ ಯುವತಿಯರನ್ನು ರೂಪಿಸಲು ಶ್ರಮಿಸುತ್ತಿರುವ ಸ್ಕೌಟ್ ಮತ್ತು ಗೈಡ್ ಚಳುವಳಿ ಎಲ್ಲ ಶಾಲೆಗಳಲ್ಲೂ ಖಡ್ಡಾಯವಾಗುವುದು ಸೂಕ್ತ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಅಭಿವೃದ್ಧಿ) ಕೆ.ಎಂ. ಸುನಿತಾ ನುಡಿದರು.
ಅವರು ಜಿಲ್ಲಾ ಮೈದಾನದಲ್ಲಿರುವ ಜಿಲ್ಲಾ ಭಾರತ್ ಸೈಟ್ ಮತ್ತು ಗೈಡ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಪುರಸ್ಕಾರ ಪ್ರಸಸ್ತಿ ಪತ್ರ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿ ಕೇವಲ ಪರೀಕ್ಷೆ, ಅಂಕಗಳಿಸುವುದು ಮಾತ್ರ ವಿದ್ಯಾರ್ಥಿಗಳ ಸುತ್ತಲೂ ಏನು ವಿದ್ಯುಮಾನಗಳು ನಡೆಯುತ್ತಿವೆ ಎಂದು ಭಾಸವಾಗಬೇಕು ಎಂದರು. ಮೊಬೈಲ್ ಮತ್ತಿತರ ಮಾಧ್ಯಮಗಳಿಂದ ದೂರವಿದ್ದು ಜ್ಞಾನಾರ್ಜನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದರು.
ರಾಜ್ಯ ಸಂಸ್ಥೆ ಉಪಾಧ್ಯಕ್ಷರಾದ ಎ.ಎನ್. ಮಹೇಶ್ ಮಾತನಾಡಿ, ಮಕ್ಕಳು ಪ್ರಶಸ್ತಿ ಪತ್ರ ಸ್ವೀಕರಿಸುವುದನ್ನು ವೀಕ್ಷಿಸಲು ಪೋಷಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದನ್ನು ಕಂಡು ಅತ್ಯಂತ ಸಂತಸ ವ್ಯಕ್ತಪಡಿಸುತ್ತಾ, ಇತ್ತೀಚಿನ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥೆ ಚಿಕ್ಕಮಗಳೂರ
ರಾಜ್ಯ ಪ್ರರಸ್ಕಾರ ಪ್ರಶಸ್ತಿ
ಅತ್ಯಂತ ಸೂಕ್ಷ್ಮ ಮನಸ್ಥಿತಿಯವರಾಗಿದ್ದು, ಕ್ಷುಲ್ಲಕ ಕಾರಣಗಳಿಗೆ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಮಕ್ಕಳಿಗೆ ಸೋಲನ್ನು ಸ್ವೀಕರಿಸುವುದನ್ನೂ ಕಲಿಸುವ ಅವಶ್ಯಕತೆಯಿದೆ. ಚೇತೋಹಾರಿ ಹಾಗೂ ದೈಹಿಕ ಚೆಟುವಟಿ ಕೆಗಳಲ್ಲಿ ಭಾಗವಹಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿ ಸಮಾಜಕ್ಕೆ ಉಪಯೋಗಕಾರಿ ಪ್ರಜೆಗಳಾಗುತ್ತಾರೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಕ್ಷರಿ ಮಾತನಾಡಿ, ಬದುಕಲು ಬೇಕಾದ ಕಲೆಗಳನ್ನು ಕಲಿಸುವುದರ ಜೊತೆಗೆ ಸ್ವಲ್ಪ ಗಟ್ಟಿತನವನ್ನೂ ಕೂಡಾ ಕಲಿಸಲು, ಪೋಷಕರು ಕೂಡಾ ನಮ್ಮ ಕೈಜೋಡಿಸಬೇಕು ಎಂದರು. ವರ್ಜಿನ್ ಎರ್ ಲೈನ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸ್ನ್ರ ತಾಯಿ ಹೇಗೆ ಭಾನುವಾರದ ದಿನ ಬಾಲ್ಯದಲ್ಲಿ 10 ಡಾಲರ್ ನೀಡಿ ಕತ್ತಲಾಗುವ ತನಕ ಮನೆಗೆ ಬರಬೇಡ ಎಂದು ಹೇಳಿದರು. ಕಷ್ಟ ಸಹಿಷ್ಣುತೆ, ತನ್ನನ್ನು ತಾನು ಹೇಗೆ ನೋಡಿಕೊಳ್ಳುವುದನ್ನು ಕಲಿಸುವ ದೊಡ್ಡ ಜೀವನದ ಪಾಠ ಎಂಬುವುದನ್ನೂ ಉಲ್ಲೇಖಿಸುತ್ತಾ, ಮಕ್ಕಳನ್ನು ಅನುಭವಿಸಿ ಕಲಿಯಲು ಅವಕಾಶ ಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳನ್ನು ಕೇವಲ ಜವಬ್ದಾರಿಯುತ ಪ್ರಜೆಗಳಾಗಿ ಮಾಡಿದರೆ ಸಾಲದು. ಅವರನ್ನು ಕ್ರಿಯಾಶೀಲ ಪ್ರಜೆಗಳಾಗಿ ರೂಪಿಸುವುದು ಸ್ಕೌಟ್ ಚಳುವಳಿಯ ಉದ್ದೇಶ ಎಂದರು.
ರಾಜ್ಯ ಪುರಸ್ಕಾರ, ಚತುರ್ತ ಚರಣ್ ಪುರಸ್ಕಾರ ಪತ್ರಗಳನ್ನು ಮುಖ್ಯ ಅತಿಥಿ ಕೆ.ಎಂ ಸುನೀತಾ ವಿತರಿಸಿದರು. ಮಕ್ಕಳನ್ನು ಈ ಪ್ರಶಸ್ತಿಗಳಿಗೆ ಸಿದ್ದಗೊಳಿಸಿದ ದಳ ನಾಯಕರುಗಳಿಗೆ ಮೆಂಟರ್” ಅಭಿನಂದನಾ ಪತ್ರ ನೀಡಲಾಯಿತು. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಆಗಮಿಸಿದ್ದ ಸುಮಾರು 250 ಮಕ್ಕಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ನೀಲಕಂಠಾಚಾರ್ ಸ್ವಾಗತಿಸಿ, ಜಿಲ್ಲಾ ತರಬೇತಿ ಆಯುಕ್ತ ಸಂಧ್ಯಾರಾಣಿ ವಂದಿಸಿದರು. ಜಿಲ್ಲಾ ಸ್ಕೌಟ್ ಆಯುಕ್ತ ಟಿ ಫಣಿರಾಜ್, ಗೈಡ್ ಆಯುಕ್ತ ಮಮತಾ, ಜಿಲ್ಲಾ ಸಂಘಟಕ ಕಿರೇಶ್ ಕುಮಾರ್, ರಾದಾ, ಸಿಕ್ಕೇರಾ, ದಳ ನಾಯಕರುಗಳು ಮತ್ತಿತರರು ಹಾಜರಿದ್ದರು