ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಅಜ್ಜಂಪುರ ಎಸ್.ಶೃತಿ ನೇಮಕ.
1 min read
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಅಜ್ಜಂಪುರ ಎಸ್.ಶೃತಿ ನೇಮಕ.
ಚಿಕ್ಕಮಗಳೂರು: ಕರ್ನಾಟಕ ಲೇಖಕಿಯರ
ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಸಾಹಿತಿ, ಸಂಘಟಕಿ, ಉಪನ್ಯಾಸಕಿ, ನಿರೂಪಕಿ, ಲೇಖಕಿ, ಚಲನಚಿತ್ರ ನಟಿ, ಅಜ್ಜಂಪುರ ಎಸ್.ಶೃತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ತಿಳಿಸಿದರು.
ಜಿಲ್ಲೆಯ ಲೇಖಕಿಯರನ್ನು ಒಟ್ಟುಗೂಡಿಸಿಕೊಂಡು ಕಾವ್ಯ ಕಮ್ಮಟ, ಕಥಾ ಕಮ್ಮಟಗಳನ್ನು ಆಯೋಜಿಸುವ ಮೂಲಕ ಕವನಗಳ ರಚನೆ, ಸಣ್ಣ ಕತೆಗಳು, ಹಾಗೂ ಲೇಖನಗಳ ಬರವಣಿಗೆಗೆ ಉತ್ತೇಜನ ನೀಡುವುದು.
ಪ್ರತಿ ತಾಲ್ಲೂಕುಗಳಲ್ಲಿ ಕರ್ನಾಟಕ ಲೇಖಕಿಯರ ಸಂಘದ ಶಾಖೆಗಳನ್ನು ತೆರೆದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಅವಕಾಶ ಒದಗಿದರೆ ರಾಜ್ಯಮಟ್ಟದ ಕರ್ನಾಟಕ ಲೇಖಕಿಯರ ಸಂಘದಿಂದ ಸಮ್ಮೇಳನ ಆಯೋಜನೆ ಮಾಡಲಾಗುವುದು. ಎಂದು ನೂತನ ಅಧ್ಯಕ್ಷರಾದ ಅಜ್ಜಂಪುರ ಎಸ್.ಶೃತಿ ತಿಳಿಸಿದರು.