ಒಂದ್ ಕಣ್ ಸುಂದ್ರಿ …..ಕರೆಂಟ್ ಉಳಿಸಿ..! ಮೂಡಿಗೆರೆ ಬೆಳಸಿ..!!
1 min read
ಒಂದ್ ಕಣ್ ಸುಂದ್ರಿ …..ಕರೆಂಟ್ ಉಳಿಸಿ..! ಮೂಡಿಗೆರೆ ಬೆಳಸಿ..!!
ಮೂಡಿಗೆರೆ ತಾಲೂಕು..ಹ್ಯಾಂಡ್ ಪೊಸ್ಟ್ ಬಳಿಯ ರಸ್ತೆ ವೃತ್ತದಲ್ಲಿ ಕಡೂರು ಮೂಡಿಗೆರೆ ಮತ್ತು ವಿಲ್ಲುಪುರಂ ಮಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಐದು ಲಕ್ಷ ರೂಗಳನ್ನು ಖರ್ಚು ಮಾಡಿ ಮಾಡಿದ ಹೈಮಾಸ್ಕ್ ದೀಪ ಇಂದು ಹಗಲಲ್ಲಿ ಬ್ಯಾಟರಿ ಹಾಕಿ ಹುಡುಕುವಂತಾಗಿದೆ.
ಇದರ ನಿರ್ವಾಹಣೆ ಮಾಡುವ ಜವಬ್ದಾರಿ ಯಾರದೆಂದು ನಾಗರಿಕರಲ್ಲಿ ಗೊಂದಲ ಉಂಂಟಾಗಿದೆ.
ಹಳೆಮೂಡಿಗೆರೆ ಗ್ರಾಮ ಪಂಚಾಯತಿಯ ಜವಬ್ದಾರಿಯಾಗಿದ್ದರೆ ಅವರೆನು ಮಾಡುತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತಿದ್ದಾರೆ.
ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮದ್ ಜುಬೇರಾರವರು ತಮ್ಮ ಅಸಾಯಕತೆ ತೋರಿಸಿದ್ದಾರೆ.
ಹಗಲಲ್ಲೆ ವಾರಕ್ಕೆ ಹತ್ತರಿಂದ ಇಪ್ಪತ್ತು ಅಪಘಾತಗಳು ನಡೆಯುತ್ತಿದೆ.ರಾತ್ರಿ ಬೆಳಕಿಲ್ಲದ ಈ ವೃತ್ತದಲ್ಲಿ ಚಾಲಕರಿಗೆ ಚಾಲನೆ ಮಾಡಲು ತುಂಬಾ ತೊಂದರೆ ಅಗುತ್ತಿದೆ.
ಕೂಡಲೆ ಸಂಬಂಧಿಸಿದ ಅದಿಕಾರಿಗಳು ಕೂಡಲೆ ಸ್ಥಳಕ್ಕೆ ಆಗಮಿಸಿ ಸರಿಪಡಿಸ ಬೇಕೆಂದು ಅಗ್ರಹಿಸಿದ್ದಾರೆ.