ಕೂಡಲೇ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ: ಪತ್ರಕರ್ತ ಬಸವರಾಜು ಆಗ್ರಹ avintvcom
1 min read
ರಾತ್ರಿ ವೇಳೆ ಹಂಪಿಯಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಗೋಳು ಕೇಳುವವರ್ಯಾರು? ಕೂಡಲೇ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ
ಸ್ಥಳ: ಹಂಪಿ
ಹೌದು ಕರ್ನಾಟಕ ರಾಜ್ಯದ ಐತಿಹಾಸಿಕ ಗತವೈಭವವನ್ನು ಸುವರ್ಣಯುಗದಲ್ಲಿ ಅಚ್ಚಳಿಯದೆ ಉಳಿದಿರುವುದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಿಜಯನಗರ ಅರಸರ ಕಾಲದ ರಾಜಧಾನಿ ಹಂಪೆ. ಸಾಕಷ್ಟು ಗತ ಇತಿಹಾಸವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಈ ಹಂಪೆಯ ಪ್ರಸ್ತುತ ಪರಿಸ್ಥಿತಿ ನೋಡಿದ್ರೆ ಸಾಕಷ್ಟು ಬೇಜಾರು ಆಗುತ್ತೆ ಕಣ್ರೀ. ಇನ್ನೂ ರಾತ್ರಿವೇಳೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ತಂಗಲು ಯಾತ್ರಿ ನಿವಾಸವಿಲ್ಲದೆ ವಿರೂಪಾಕ್ಷಶೇಶ್ವರ ದೇವಸ್ತಾದ ಆವರಣದಲ್ಲಿ ಮಲಗುತ್ತಾರೆ. ಹಾಗೂ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹಲವಾರು ಸಮಸ್ಯೆಗಳಿಂದ ಪರದಾಡುವಂತಾಗಿದೆ. ಇದರ ಜೊತೆಗೆ ಇವರ ವಸ್ತುಗಳಿಗೆ ಯಾವುದೇ ಸೂಕ್ತ ಭದ್ರತೆ ಇಲ್ಲದೇ ಕಳ್ಳತನಗಳು ಜಾಸ್ತಿ ಆಗಿವೆ. ಆದ್ದರಿಂದ ನಿನ್ನೆ ರಾತ್ರಿ ಪತ್ರಕರ್ತ ಬಸವರಾಜು ಭೇಟಿ ಕೊಟ್ಟು ಹಂಪಿಯಲ್ಲಿ ರಾತ್ರಿವೇಳೆಯಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಪರಿಸ್ಥಿತಿಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿದರು. ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು ಹಾಗೂ ಹೋರಾಟಗಾರರು. ವೀರಾಪುರ.