लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಚಿವರಾದ ಸೌ.ಶಶಿಕಲಾ ಜೊಲ್ಲೆಜಿ ಅವರ 51ನೇ ಹುಟ್ಟು ಹಬ್ಬದ ಶಾಖೆ ಢವಳೇಶ್ವರ 52ನೇ ನೂತನ ಶಾಖೆಯ ಉದ್ಘಾಟನೆ avintvcom

1 min read
Featured Video Play Icon

ಢವಳೇಶ್ವರ
ಇಂದು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರ 51ನೇ ಹುಟ್ಟು ಹಬ್ಬದ ನಿಮಿತ್ತ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಢವಳೇಶ್ವರ 52ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮ ಮಹಾಲಿಂಗಪುರದ ಶ್ರೀ ಸಹಜಾನಂದ ಮಹಾಸ್ವಾಮಿಗಳು ಹಾಗೂ ಆಶ್ರಮ ರನ್ನ ಬೆಳಗಲಿಯ ಶ್ರೀ ಸದಾನಂದ ಗುರೂಜಿಯವರ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಮಹಾಲಿಂಗಪೂರ ಪುರಸಭೆ ಅಧ್ಯಕ್ಷರಾದ ಶ್ರೀ ಶಿವು ಅಂಗಡಿ, ಶ್ರೀ ಶಂಕರಗೌಡ ಪಾಟೀಲ, ಶ್ರೀ ಬಸವರಾಜ ಪಾಟೀಲ, ಶ್ರೀ ಮಹಾಲಿಂಗಪ್ಪ ಶಿವಾಪೂರ, ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಕಲ್ಲಪ್ಪ ಜಾಧವ, ಶ್ರೀ ಕೃಷ್ಣಪ್ಪ ಪೂಜಾರಿ, ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ढवळेश्वर
आज बागलकोट जिल्हा रबकवी-बनहट्टी तालुक्यातील ढवळेश्वर गावात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या 51व्या वाढदिवसा निमित्ताने जोल्ले उद्योग समूह संस्थेच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा. शाखा ढवळेश्वर 52व्या नवीन शाखेचे उद्घाटन व पूजा कार्यक्रम सिद्धारूढ ब्रह्मविद्याश्रम महालिंगपूरच्या श्री सहजानंद महास्वामिजी आणि ऋषि आश्रम रन्न बेळगलीच्या श्री सदानंद गुरुजींच्या दिव्य सानिध्यात श्रींच्या अमृत हस्ते आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले यांनी उद्घाटन केले.
यावेळी तालुका पंचायत सदस्य श्री श्रीशैल पट्टणशेट्टी, महालिंगपूर नगरपरिषदेचे अध्यक्ष श्री शिवु अंगडी, श्री शंकरगौड पाटील, श्री बसवराज पाटील, श्री महालिंगप्प शिवापूर, ज्योती संस्थेचे संचालक श्री कल्लप्प जाधव, श्री कृष्णप्प पूजारी,संस्थेचे पदाधिकारी, ग्रामस्थ व कर्मचारी उपस्थित होते.

About Author