2019-20ನೇ ಸಾಲಿನ ಆರ್.ಐ.ಡಿ.ಎಫ್.ಟ್ರ್ಯಾಂಚ್ 24ರ ಅಡಿಯಲ್ಲಿ ಮಂಜೂರಾದ 39 ಲಕ್ಷ ರೂ avintvcom
1 min read
ನಿಪ್ಪಾಣಿ“ದೇಶದ ಬೆನ್ನೆಲುಬಾದ ಅನ್ನದಾತನ ಬದುಕಿನ ಆಧಾರಸ್ತಂಭ ಗೋವು”
ಇಂದು ನಿಪ್ಪಾಣಿಯಲ್ಲಿ, ಜಿಲ್ಲಾ ಪಂಚಾಯತ್ ಬೆಳಗಾವಿ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ಇದರ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಆರ್.ಐ.ಡಿ.ಎಫ್.ಟ್ರ್ಯಾಂಚ್ 24ರ ಅಡಿಯಲ್ಲಿ ಮಂಜೂರಾದ 39 ಲಕ್ಷ ರೂ. ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಂಜೂರಾದ 21.12 ಲಕ್ಷ ರೂ. ಗಳ ಮೊತ್ತದಲ್ಲಿ ಪಶು ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆ ಸಮಾರಂಭವನ್ನು ಪಶುಸಂಗೋಪನಾ ಇಲಾಖೆಯ ಸಚಿವರಾದ ಶ್ರೀ ಪ್ರಭು ಚವ್ಹಾಣ ಜಿ, ಅವರ ಜೊತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನೆರವೇರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಪ್ಪಾಣಿ ಸಮಾಧಿ ಮಠದ ಶ್ರೀ ಪ್ರಾಣಲಿಂಗ ಮಹಾಸ್ವಾಮೀಜಿ ವಹಿಸಿದ್ದರು. ರೈತ ನಮ್ಮ ದೇಶದ ಬೆನ್ನೆಲುಬು. ಅನ್ನದಾತನ ಬದುಕಿನ ಆಧಾರಸ್ತಂಭ ಗೋವು. ಬಿಜೆಪಿ ಸರ್ಕಾರ ಪಶುಸಂಗೋಪನೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ರೈತರಿಗೆ ಪಶುಸಂಗೋಪನೆ ಬಗ್ಗೆ ತರಬೇತಿ ನೀಡಲು ಸರ್ಕಾರ ಸುಮಾರು 21.12 ಲಕ್ಷ ರೂ. ಮಂಜೂರು ಮಾಡಿದೆ. ಇದನ್ನು ನಿಪ್ಪಾಣಿಯಲ್ಲಿ ಉತ್ತಮವಾಗಿ ಕಾರ್ಯಗತಕ್ಕೆ ತಂದು ಅನ್ನದಾತರ ಏಳಿಗೆಗೆ ಶ್ರಮಿಸಲಾಗುವುದು. ನಿಪ್ಪಾಣಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ನೀಡಿದ ಸಹಕಾರ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ಜಿ ಹಾಗೂ ಎಪಿಎಂಸಿ ವತಿಯಿಂದ 1 ಎಕರೆ ಜಮೀನು ನೀಡಿದ ಅಧ್ಯಕ್ಷರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು ತಿಳಿಸಿದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಜಿ.ಪಂ ಸದಸ್ಯರು, ನಗರಸಭೆ ಸದಸ್ಯರು, ಎಪಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ಊರಿನ ಗಣ್ಯರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
“देशाच्या कणा असलेल्या अन्नदातांच्या जीवनाचा आधारस्तंभ गो माता आहे “आज निपाणी येथे जिल्हा पंचायत बेळगावी, पशुसंवर्धन व पशुवैद्यकीय सेवा विभाग बेळगावी यांच्या संयुक्त विद्यमाने 2019-20च्या सन आर.आय.डी.एफ ट्र्यांच 24व्या अंतर्गत मंजूर झालेल्या 39 लाख रुपये आणि राष्ट्रीय कृषी विकास कार्यक्रमांतर्गत मंजुर झालेल्या 21.12 लाख रुपयांचा निधीतून पशुवैद्यकीय रुग्णालय इमारतीच्या पायाखुदाई सोहळा कार्यक्रम पशुसंवर्धन मंत्री श्री प्रभु चव्हाण जी, यांच्या बरोबर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले. या कार्यक्रमाच्या पावन सानिध्यात निपाणी समाधी मठाच्या श्री प्राणलिंग महास्वामीजी यांनी उपस्थित होते. शेतकरी हा आपल्या देशाचा कणा आहे. अन्नदातांच्या जीवनाचा आधारस्तंभ गो माता आहे. भाजपा सरकार पशुसंवर्धन विकासाला प्राधान्य देत आहे. शेतकऱ्यांना पशुसंवर्धनावर प्रशिक्षण देण्यासाठी 21.12 लाख रुपये मंजूर केले आहेत. निपाणीमध्ये याची चांगली अंमलबजावणी करून अन्नदातांच्या उन्नतीसाठी प्रयत्न केला जाईल. निपाणी येथील पशुवैद्यकीय रुग्णालय बांधण्यासाठी जमीन दिलेले सहकारमंत्री श्री एस.टी. सोमशेखर जी आणि एपीएमसीच्यावतीने 1एकर जमीन दिलेल्या अध्यक्षांना व त्यांच्या सहकाऱ्यांना अभिनंदन व्यक्त केले.
यावेळी पशुसंवर्धन विभागाचे अधिकारी, जिल्हा पंचायत सदस्य, नगरसेवक, एपीएमसी सदस्य, लोकप्रतिनिधी, शहरातील मान्यवर व स्थानिक नागरिक उपस्थित होते.