ಇಂಡಿ ತಾಲೂಕ ಅಧ್ಯಕ್ಷರಾಗಿ ಶಿವಾನಂದ ಹರಿಜನ.ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ್ ದಶವಂತ ನೇಮಕ.avintvcom
1 min read
ಕಾರ್ಮಿಕ ಒಕ್ಕೂಟದ ಇಂಡಿ ತಾಲೂಕ ಅಧ್ಯಕ್ಷರಾಗಿ ಶಿವಾನಂದ ಹರಿಜನ.ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ್ ದಶವಂತ ನೇಮಕ.
ವರದಿ ಬಿ ಎಸ್ ಹೊಸೂರ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಒಕ್ಕೂಟದ ವತಿಯಿಂದ ತಾಲೂಕಾ ಅಧ್ಯಕ್ಷರ ಆಯ್ಕೆ ಮಾಡಲಾಯಿತು ಇಂಡಿ ತಾಲೂಕಿನ ಅಧ್ಯಕ್ಷರಾಗಿ ಶಿವಾನಂದ ಹರಿಜನ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ್ ದಶವಂತ ಹಾಗೂ ಚಡಚಣ ತಾಲೂಕ ಅಧ್ಯಕ್ಷರಾಗಿ ಗೊಪಾಲ ತಳವಾರ.ಇವರನ್ನು ಕೋರ ಕಮಿಟಿಯಲ್ಲಿ ಆಯ್ಕೆ ಮಾಡಿ ಪೆಂಡ್ರೆಶನ್ ರಾಜ್ಯ ಅಧ್ಯಕ್ಷ ಶಾಮಣ್ಣ ರೆಡ್ಡಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು ಆದೇಶ ಪತ್ರವನ್ನು ಪರಸನಗೌಡ ಪಾಟೀಲ ನೀಡಿದರು.ನಂತರ ನೂತನ ಇಂಡಿ ತಾಲೂಕ ಅಧ್ಯಕ್ಷ ಶಿವಾನಂದ ಹರಿಜನ ಮಾತನಾಡಿ.ಕೆಲವು ಇಲಾಖೆಗಳಲ್ಲಿ ಕಾರ್ಮಿಕ ವರ್ಗದ ಜನರು ಹಲವು ಕಡೆ ತಮ್ಮ ಕೆಲಸದ ದುಡಿಮೆಯಲ್ಲಿ ಅನ್ಯಾಯವನ್ನು ಅನುಭವಿಸುತ್ತಿದ್ದಾರೆ ಅದನ್ನು ಹೊಗಲಾಡಿಸಿ ನ್ಯಾಯಪರವಾದ ಕಾರ್ಯಗಳ ಕಡೆ ಹೆಚ್ಚು ಗಮನಿಸಲಾಗುವುದು ಅಷ್ಟೇ ಅಲ್ಲದೇ ಕೂಲಿ ಕಾರ್ಮಿಕರಿಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೇರವಾಗಿ ಕೂಲಿ ಕಾರ್ಮಿಕರಿಗೆ ತಲುಪುವ ಹಾಗೆ ಮಾಡಲಾಗುವುದೆಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ. ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಪರಸನಗೌಡ ಪಾಟೀಲ.ಬೆಳಗಾವಿ ಬಾಗಲಕೊಟ ವಿಜಯಪೂರ ಜಿಲ್ಲಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ ರಜಪೂತ. ವಿಜಯಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಿ ಎಸ್ ಹೊಸೂರ.ಚಂದ್ರಶೇಖರ ಮೇಲಿನಮನಿ. ಮೊಹನ ಬರಟಗಿ.ದತ್ತಾ ಬಂಡೆನವರ.ಉತ್ತಮ ಕಟ್ಟಿಮನಿ.ಶಿವಯೊಗಿ ಹೊಸಮನಿ.ಸತೀಶ ಬೊಳೆಗಾಂವ. ವೆಂಕಟೇಶ ಭೈರಾಮಡಗಿ.ವಿಜಯಕುಮಾರ.ನಡುವಿನಕೇರಿ.ಮಿರಾ ವಾಘ್ಮೊರೆ ಅಶೋಕ ಶಿವಶರಣ.ನಿತ್ಯಾನಂದ ಕಾಂಬಳೆ.ಮದಗೊಂಡ ಕೊಳಿ.ಅಪ್ಪಾಶ ಕಾಂಬಳೆ. ಇಮಾಮ ಬಾಗಯಾತ.ಗುರಪ್ಪ ಬೂದಿಹಾಳ. ಪ್ರಕಾಶ ಅಂಜುಟಗಿ.ಗೊಪಾಲ ಪಾಟೀಲ.ನರಸು ಪೂಜಾರಿ.ಬಸು ಕೆಂಗಾರ.ಅಪ್ಪರಾಯ.ಕ್ಷತ್ರಿ.ಉಮೇಶ.ವಾಲಿಕಾರ.ಚಂದ್ರಕಾಂತ ಕೊಳಿ.ಸಚಿನ ತಳವಾರ ಮತ್ತಿತರರು ಉಪಸ್ಥಿತರಿದ್ದರು.