ಇವರುಗಳು 1)ಗುತ್ತಿಗೆದಾರರಲ್ಲ, 2)ರಿಯಲ್ ಎಸ್ಟೇಟಿಗರಲ್ಲ, 3)ಮೆಡಿಕಲ್ ಕಾಲೇಜಿನವರಲ್ಲ, 4)ಇಂಜಿನಿಯರಿಂಗ್ ಕಾಲೇಜಿನವರಲ್ಲ,
1 min read
ಇವರುಗಳು
1)ಗುತ್ತಿಗೆದಾರರಲ್ಲ,
2)ರಿಯಲ್ ಎಸ್ಟೇಟಿಗರಲ್ಲ,
3)ಮೆಡಿಕಲ್ ಕಾಲೇಜಿನವರಲ್ಲ,
4)ಇಂಜಿನಿಯರಿಂಗ್ ಕಾಲೇಜಿನವರಲ್ಲ,
5)ಸೋಲಾರ್ ಪ್ಲಾಂಟುದಾರರಲ್ಲ,
6)ಕಲ್ಲು ಕ್ವಾರಿದಾರರಲ್ಲ,
7)ಗ್ರಾನೈಟ್ ವ್ಯವಹಾರದವರಲ್ಲ,
8)ಗಣಿ ಮಾಫಿಯದವರಲ್ಲ,
9)ಸರಾಯಿ- ಮದ್ಯೋದ್ಯಮಿಗಳಲ್ಲ,
10ಹೋಮ್ ಸ್ಟೇಗಳಿಲ್ಲ,
11)ರೆಸಾರ್ಟ್ ಮಾಲಿಕರಲ್ಲ,
12)ಫಿಲ್ಮ್ ಪ್ರಡ್ಯೂಸರ್ ಗಳಲ್ಲ,
13)ಪಿಲ್ಮ್ ಡಿಸ್ಟ್ರೀಬ್ಯೂಟರ್ ಗಳಲ್ಲ,
14)ಖಾಸಗಿ ನರ್ಸಿಂಗ್ ಹೋಮ್ ಗಳಿಲ್ಲ,
15)ಖಾಸಗಿ ಶಾಲಾ ಕಾಲೇಜ್ ಗಳಿಲ್ಲ,
16)ಖಾಸಗಿ ಬ್ಯಾಂಕುಗಳ ಮಾಲಿಕರಲ್ಲ
17)ಕೈಗಾರಿಕೋದ್ಯಮಿಗಳಲ್ಲ,
18)ಮಾದ್ಯಮೋದ್ಯಮಿಗಳಲ್ಲ,
19)ಟ್ರಾನ್ಸ್ ಪೋರ್ಟ್ ಮಾಲಿಕರಲ್ಲ,
20)ಹೋಟೆಲ್ ಉದ್ದಿಮೆದಾರರಲ್ಲ,
21)ಹಡಗೋದ್ಯಮಿಗಳಲ್ಲ,
22)ಪಿಶರಿಂಗ್ ಉದ್ಯಮಿಗಳಲ್ಲ,
23)ಕ್ಯಾಸಿನೊ ಕ್ಲಬ್ ಗಳ ಮಾಲಿಕರಲ್ಲ,
24)ವ್ಯಾಪಾರೋದ್ಯಮಿಗಳಲ್ಲ,
25)ವಾಣಿಜ್ಯೋದ್ಯಮಿಗಳಲ್ಲ,
26)ಕೇಬಲ್ ಮಾಲಿಕರಲ್ಲ,
27)ಧಾರ್ಮಿಕ ಟ್ರಸ್ಟಿಗಳಲ್ಲ,
28)ಶಾಸಕ, ಸಂಸತ್ತಿನ ಸದಸ್ಯತ್ವವನ್ನು ಮಾರಿಕೊಂಡವರಲ್ಲ,
29)ಗೋಲ್ಡ್ ಷೋರೂಮ್ ಇಲ್ಲ,
30)ವಜ್ರದ ವ್ಯಾಪಾರಿಗಳೂ ಅಲ್ಲ,
31)ರಾಜ ವಂಶಸ್ಥರ ಸದಸ್ಯರೂ ಅಲ್ಲ,
32)ಮುಖ್ಯಮಂತ್ರಿಗಳ ಮಕ್ಕಳಲ್ಲ,
33)ಪ್ರಧಾನ ಮಂತ್ರಿಗಳಂತ ತಂದೆಗಳಿಲ್ಲ,
34)ಹೆಣ್ಣು ಬಾಕ ಮತ್ತು ಹೆಣ್ಣು ಬೇಕಾ ದಂಧೆಯವರಲ್ಲ
35) ಅಂಡರ್ ವರ್ಲ್ಡ್ ಲಿಂಕಿನವರಲ್ಲ,
36) 2g, 3g 4g 5g ಸ್ಪೆಕ್ಟ್ರಂ, ಮೊಬೈಲ್, ಸಿಮ್, ಕರೆನ್ಸಿ ಉದ್ಯಮಿಗಳಲ್ಲ,
38)ಕಲ್ಲಿದ್ದಲಿನ ವ್ಯವಹಾರದವರಲ್ಲ,
39)ಡಿ-ನೋಟಿಫಿಕೇಶ್ ಕಡೆಯವರಲ್ಲ
40) ಷೇರು ದಳ್ಳಾಳಿಗಳಲ್ಲ,
41)ಸಿನಿಮಾ ತಾರೆಯವರಲ್ಲ,
42) ಕ್ರೀಡಾ ದಿಗ್ಗಜರೂ ಅಲ್ಲ,
43)ಕ್ರೀಡಾ ಬೆಟ್ಟಿಂಗ್ ಮಾಫಿಯದವರಲ್ಲ,
44)ಹವಾಲ ದಂಧೆಯವರಲ್ಲ,
45)ಟಿಂಬರ್ ಮಾಫಿಯಾದವರಲ್ಲ,
46)ಪುಡ್ ಮಾಫಿಯದವರಲ್ಲ, (ಮೇವು ಹಗರಣ)
47)ಮಾಂಸೋದ್ಯಮಿಗಳಲ್ಲ
48)ಅನಿಲೋದ್ಯಮಿಗಳಲ್ಲ,
49)ಕೋಮು ದಂಗೆಯವರಲ್ಲ
50) ಭಯೋತ್ಪಾದಿಸುವವರಲ್ಲ,
51)ಮಠೋದ್ಯಮಿಗಳ ಸಂಬಂಧಿಗಳಲ್ಲ…
ಈ ಮೇಲಿನ ಐವತ್ತೊಂದು ಪ್ರಮುಖ ಉದ್ಯಮ ಆಲಿಯಾಸ್ ದಂದೆ, ಆಲಿಯಾಸ್ ಮಾಫಿಯದಲ್ಲಿ ತಮ್ಮಗಳಿಗೆ ಒಂದು ಕ್ಷಣದ ಸಂಬಂಧವೂ ಇಲ್ಲದೇ ಇದ್ದರೂ ಈ ಕೆಳಗಿನ ಪೋಟೋದಲ್ಲಿರುವ ಶ್ರೀ ಚಂದ್ರಶೇಖರ್ ಭಾರತದ ಪ್ರಧಾನಿಗಳಾದರು.
ಶ್ರೀ ಬಿ.ಎಲ್.ಶಂಕರ್ ವಿಧಾನ ಪರಿಷತ್ತಿನ ಸದಸ್ಯರಾಗಿ,ಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ, ಸಂಸದರಾದರು.
ಶ್ರೀ ಎಂ.ಪಿ.ಪ್ರಕಾಶ್ ಅವರು ಸಹ ಶಾಸಕ ಸಂಸದ ಉಪಮುಖ್ಯಮಂತ್ರಿ ಆದರು.. ಈ ಮೂರು ಜನರ ಕಾಲಘಟ್ಟದಲ್ಲಿ ಇವರಷ್ಟೇ ಪ್ರಮಾಣದ ಪ್ರಾಮಾಣಿಕತೆ ಇದ್ದ ಅನೇಕ ರಾಜಕೀಯ ನಾಯಕರು ಎಲ್ಲಾ ಪಕ್ಷದಲ್ಲೂ ಇದ್ದರು, ಅವಕಾಶ ಸಿಕ್ಕಾಗಲೆಲ್ಲಾ ಅವರನ್ನೂ ಪರಿಚಯಿಸೋಣ.
ಆದರೆ ಈಗ ಕಾಲ, ಜನ, ಮನ ಎಲ್ಲವು ಬದಲಾಗಿದೆ.
ಈಗ ವಿಧಾನ ಸೌಧಗಳ, ಲೋಕಸೌಧದ ನೆತ್ತಿಯ ಮೇಲೆ ಹತ್ತು ಹಲವಾರು ಮಾಫಿಯಾದ ಕತ್ತಿಗಳು ಸುತ್ತುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ ಮೇಲಿನ ಐವತ್ತು ದಂಧೆ-ಮಾಫಿಯಗಳ ಪೈಕಿ ಕನಿಷ್ಠ ಒಂದಾದರು ಅವರ ವೃತ್ತಿ ಆಗಿದ್ದರೆ ಮಾತ್ರ ಅವರು ಯಾವ ಪಕ್ಷದಲ್ಲಾದರೂ ಸರಿ MLA, MP, MINISTER, CM, PM ಆಗಲು ಸಾಧ್ಯ ಎಂಬ ಪರಿಸ್ಥಿತಿಗೆ ದೇಶದ ರಾಜಕಾರಣ ತಲುಪಿದೆ..
ನಾವು ಇವತ್ತಿನ ಯುವಕರಿಗೆ ಈ ಕೆಳಗಿನ ಪೋಟೋದಲ್ಲಿರುವ ಮತ್ತು ಇತರೆ ಅನೇಕ ಇಂತಹ ಪ್ರಾಮಾಣಿಕ ನಾಯಕರನ್ನು ಪರಿಚಯಿಸಿದರೆ ಮಾತ್ರ ಇವತ್ತಿನ ಮಾಫಿಯ ರಾಜಕಾರಣ ಇಂದಿನ ಯುವ ಪೀಳಿಗೆಗೆ ಅರ್ಥವಾಗುವುದು.
ತಿಳಿದಂತವರು ಇಂದಿನ ಯುವಕರನ್ನು ಎಚ್ಚರಿಸದಿದ್ದರೆ, ಯುವಕರಿಗೆ ಉತ್ತಮ ನಾಯಕತ್ವವನ್ನು ಪರಿಚಯಿಸದಿದ್ದರೆ, ಭಾರತವನ್ನು ನುಂಗಲು ಹಸಿದು ಕುಳಿತಿರುವ ಮಾಫಿಯಾಗಳು ಭಾರತವನ್ನು ನುಂಗಲಿವೆ..
ಭಾರತವನ್ನು ನುಂಗುವುದೆಂದರೆ ನನ್ನನ್ನು, ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ಸೇರಿ ನುಂಗುವುದೆಂದೇ ಅರ್ಥ…
ನಿಮ್ಮನ್ನೂ ಕೂಡ…
ಬನ್ನಿ ಅವಕಾಶ ಸಿಕ್ಕಾಗ ಒಮ್ಮೆ ಇಂತಹ ಪ್ರಾಮಾಣಿಕತೆಗಳ ಮುಖವನ್ನು ಮತ್ತು ಮನವನ್ನು ನೋಡೋಣ…
ಬರಹ…..
ಮನಸುಳಿ ಮೋಹನ್ ತರೀಕೆರೆ