“!!!!ಪಾಯ್ಸನ್ ದಾಂಪತ್ಯ….ಕೊಲೆಯಲ್ಲಿ ಅಂತ್ಯ.????”
1 min read
ಬೆಂಗಳೂರಿನಲ್ಲಿ ವಾಸವಿದ್ದ ದರ್ಶನ್ ಹಾಗೂ ಶ್ವೇತಾ ದಂಪತಿಗಳಿಬ್ಬರು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ,ದೇವವೃಂದ ಬಳಿಯ ಅಕ್ಕಿವೃದ್ಧಿ ಗ್ರಾಮದಲ್ಲಿರುವ ತಮ್ಮ ಮನೆಗೆ ಬಂದಿದ್ದ ಸಂದರ್ಭದಲ್ಲಿ ದರ್ಶನ್ ಹಾಗೂ ಅವರ ಮನೆಯವರು ನನ್ನ ಸಹೋದರಿ ಶ್ವೇತಾ ಅವರಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಶ್ವೇತಾ ಅವರ ಸಹೋದರ ಚೆನ್ನೋಜಿ ರಾವ್ ದಿನಾಂಕ 12/12/2023 ಮಂಗಳವಾರ ಗೋಣಿಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.
ಏನಿದು ಘಟನೆ?.
ತನ್ನ ಅಕ್ಕ ಶ್ವೇತಾಳಿಗೆ ದರ್ಶನ್ ಪೂಜಾರಿ ಎಂಬುವರೊಂದಿಗೆ 7 ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು.ಈ ದಂಪತಿಗೆ 4 ವರ್ಷದ ಗೃಹಿತ್ ಎಂಬ ಗಂಡು ಮಗನಿದ್ದಾನೆ.ಇವರಿಬ್ಬರು ಬೆಂಗಳೂರಿನಲ್ಲಿ ವಾಸವಿದ್ದು ಡಿಸೆಂಬರ್ 6ರಂದು ದರ್ಶನ್ ಮನೆಯಿರುವ ಅಕ್ಕಿವೃದ್ಧಿ ಗ್ರಾಮಕ್ಕೆ ತೆರಳಿದ್ದರು. ದರ್ಶನ್ ಪೂಜಾರಿಯವರಿಗೆ ಬೇರೋಬ್ಬಳೊಂದಿಗೆ ಅಕ್ರಮ ಸಂಬಂಧವಿದ್ದು,ಈ ಕಾರಣಕ್ಕೆ ನನ್ನ ಅಕ್ಕ ಶ್ವೇತಾಳಿಗೆ ವಿಚ್ಛೇದನ ನೀಡುವಂತೆ ಚಿತ್ರ ಹಿಂಸೆ ನೀಡಿ ಪೀಡಿಸುತ್ತಿದ್ದ ಬಗ್ಗೆ ನನ್ನೊಂದಿಗೆ ಅಕ್ಕ ಶ್ವೇತಾ ಹೇಳಿಕೊಂಡಿದ್ದಳು. ಇತ್ತೀಚೆಗೆ ನನ್ನ ಅಕ್ಕ ದೀಪಾವಳಿಗೆಂದು ನಮ್ಮ ಮನೆಗೆ ಬಂದಾಗ ದರ್ಶನ್ ಹಾಗೂ ಅವರ ಮನೆಯವರು ನಿತ್ಯ ಹೊಡೆದು ಚಿತ್ರ ಹಿಂಸೆ ಕೊಟ್ಟು ಸಾಯಿಸುತ್ತಾರೆಂದು ಹೇಳಿಕೊಂಡಿದ್ದಳು.
ದಿನಾಂಕ 11/11/2023ರ ಸೋಮವಾರದಂದು ಬೆಳಿಗ್ಗೆ 5:24 ಸಮಯದಲ್ಲಿ ದರ್ಶನ್ ಅವರ ಅಣ್ಣ ದೀಪಕ್ ಅವರು ನನಗೆ ಕರೆ ಮಾಡಿ ನಿನ್ನ ಅಕ್ಕನಿಗೆ ಎದೆ ನೋವು ಕಾಣಿಸಿಕೊಂಡಿದೆ,ನಿನ್ನ ಭಾವ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆಂದು ತಿಳಿಸಿದರು.ಇದಾದ ಸ್ವಲ್ಪ ಸಮಯದಲ್ಲೇ ಅಂದರೆ 6:12 ಸಮಯದಲ್ಲಿ ಗಂಟೆಗೆ ಕರೆ ಮಾಡಿ ನಿನ್ನ ಅಕ್ಕ ತೀರಿ ಹೋದಳು ಎಂದು ತಿಳಿಸಿದರು. ನಾನು ಕೂಡಲೇ ಅವರ ಮನೆಗೆ ತೆರಳಿ ನೋಡಿದಾಗ ನನ್ನ ಅಕ್ಕ ಶ್ವೇತಾ ಕೊಲೆ ಆಗಿರುವ ಸ್ಥಿತಿಯಲ್ಲಿ ಕಂಡು ಬಂದಿರುತ್ತಾಳೆ.ಅಲ್ಲದೇ ನನ್ನ ಅಕ್ಕನ ಶವದ ಬಳಿ ಕೆಲವು ಇಂಜಕ್ಷನ್ ಟ್ಯೂಬ್ಗಳು ಸಹ ಕಂಡು ಬಂದಿತು.ದರ್ಶನ್ ಅವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಕಾರಣ ಯಾವುದಾದರೂ ವಿಷಪೂರಿತ ಔಷಧಿ ಬಳಸಿ ಅಥವಾ ಇನ್ನಾವುದೋ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ಅಲ್ಲದೇ ನನ್ನ ಅಕ್ಕನ ಮೊಬೈಲ್ನಲ್ಲಿದ್ದ ಎಲ್ಲಾ ದಾಖಲೆಗಳು ಅಳಿಸಿ ಹೋಗಿದೆ ಎಂದು ದೂರಿನಲ್ಲಿ ಮೃತ ಶ್ವೇತಾ ಅವರ ಸಹೋದರ ಚೆನ್ನೋಜಿ ರಾವ್ ತಿಳಿಸಿದ್ದಾರೆ. ಘಟನೆ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.