“ಕನ್ನಡವು ಇತರೆ ಭಾಷೆಗಳಿಗಿಂತ ಅತ್ಯಂತ ಶ್ರೀಮಂತ ಭಾಷೆ : ಪ್ರಸನ್ನ ಗೌಡ ದಾರದಹಳ್ಳಿ.”
1 min read
ಯಾವುದೇ ಸ್ಥಳದಲ್ಲಾದರೂ ಕನ್ನಡ ಮಾತನಾಡಲು ಕೀಳರಿಮೆ ಇರಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಜಿಲ್ಲಾಧ್ಯಕ್ಷ ಪ್ರಸನ್ನ ಗೌಡ ದಾರದಹಳ್ಳಿ ಅವರು ಮೂಡಿಗೆರೆ ಪಟ್ಟಣದ ಬಿಳಗುಳದಲ್ಲಿರುವ ಕರವೇ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಿನಾಂಕ 01/11/2023ರ ಬುಧವಾರದಂದು ಮಾತನಾಡಿದರು.
ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಕನ್ನಡವು ಸ್ಥಾನ ಪಡೆದಿರುವುದು ಹಿರಿಮೆಯಾಗಿದೆ ನಾಡಿನ ರಕ್ಷಣೆಗೆ ಮತ್ತು ಕನ್ನಡಿಗರಿಗೆ ಅನ್ಯಾಯವಾದರೆ ಕನ್ನಡಿಗರೆಲ್ಲರೂ ಪಕ್ಷ ಭೇದ ಮರೆತು ಹೋರಾಡಬೇಕು ಎಂದರು. ಕರವೇ ತಾಲ್ಲೂಕು ಮಹಿಳಾ ಅಧ್ಯಕ್ಷೆ ವಾಣಿ ಮಾತನಾಡಿ ಉನ್ನತ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಕನ್ನಡ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕೆಂದೂ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲೂ ರಾಜ್ಯದ ಜನರಿಗೆ ಉದ್ಯೋಗಾವಕಾಶ ದೊರೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸುರೇಶ್ ಕರವೇ ಬಣಕಲ್ ಹೋಬಳಿ ಅಧ್ಯಕ್ಷ ಯಾಕೂಬ್, ತಾಲೂಕು ಕಾರ್ಯದರ್ಶಿ ಶಿವಾನಂದ್ ಉಪಾಧ್ಯಕ್ಷ ನಾರಾಯಣಗೌಡ ಪದಾಧಿಕಾರಿಗಳಾದ ಮುಗ್ರಹಳ್ಳಿ ರಮೇಶ್ ಆನಂದಾಚಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.