लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳೆದ ತಿಂಗಳು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉಸ್ತುವರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಸಭೆ ಕಾಟಾಚಾರಕ್ಕೆ ನಡೆಸಲಾಗಿದೆ. ಈ ಕಾರ್ಯಕ್ರಮದಿಂದ ಜನರಿಗೆ ಯಾವುದೇ ನ್ಯಾಯ ಸಿಗುವುದಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥಗೌಡ ಆರೋಪಿಸಿದರು.

ಅವರು ದಿನಾಂಕ 14/10/2023ರ ಶನಿವಾರದಂದು  ವಾಹಿನಿಯೊಂದಿಗೆ ಮಾತನಾಡಿ, ಜನತಾ ದರ್ಶನವೆಂಬ ಸರಕಾರದ ಕಾರ್ಯಕ್ರಮ ಕಳೆದ ತಿಂಗಳು ಚಿಕ್ಕಮಗಳೂರಿನಲ್ಲಿ ನಡೆದಾಗ ಉಸ್ತುವಾರಿ ಸಚಿವರು, ಕಂದಾಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಸಭೆಗೆ 1 ಗಂಟೆ ತಡವಾಗಿ ಬಂದರು. ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರು ಕೇವಲ 1 ಗಂಟೆ ಸಭೆಯಲ್ಲಿ ಕುಳಿತು ಅನಾರೋಗ್ಯದ ನೆಪ ಹೇಳಿ ಸಭೆಯಿಂದ ತೆರಳಿದರು. ಅಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಗದಂತಾಯಿತು. 6 ತಿಂಗಳಲ್ಲಿ ಭೂಮಿ ಸಮಸ್ಯೆ ಬಗೆಹರಿಸುವ ಬಗ್ಗೆ ಕಂದಾಯ ಕಾರ್ಯದರ್ಶಿಗಳೇ ಹೊರಡಿಸಿರುವ ಸುತ್ತೋಲೆಯನ್ನು ಅವರ ಗಮನಕ್ಕೆ ತಂದಾಗ ಅದಕ್ಕೆ ಸೂಕ್ತ ಉತ್ತರ ಕೊಡದೇ ಸಮಜಾಯಿಸಿ ನೀಡಿದ್ದಾರೆಂದು ದೂರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆ ಮನವಿಯನ್ನು ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ಕಳಿಸಿದ್ದು, ತಹಸೀಲ್ದಾರ್ ಅವರು ಮನವಿಯಲ್ಲಿನ ಅಂಶಗಳು ಕದಾಯ ಸಚಿವರು,ಪ್ರಾದೇಶಿಕ ಆಯುಕ್ತರು,ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದು ಎಂಬ ಉತ್ತರ ನೀಡಿದ್ದಾರೆ. ಹಾಗಾದರೆ ನಮ್ಮ ಪ್ರಶ್ನೆಗೆ ಉತ್ತರ ನೀಡುವವರು ಯಾರೆಂದು ಪ್ರಶ್ನಿಸಿದ ಅವರು, ಜನರ ಉಪಯೋಗಕ್ಕೆ ಬಾರದ ಹಾಗೂ ಜನರ ತೆರಿಗೆ ಹಣದಲ್ಲಿ ಕಾಟಾಚಾರಕ್ಕೆ ನಡೆಸುವ ಜನತಾ ದರ್ಶನ ಕಾರ್ಯಕ್ರಮ ಅವಶ್ಯಕತೆಯಿಲ್ಲ. ಇಂತಹ ಕಾರ್ಯಕ್ರಮ ನಡೆಸಿದರೆ ನಮ್ಮ ಸಂಘದಿಂದ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಕಾರ್ಯದರ್ಶಿ ಚಂದ್ರೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಜನ ಜೀವ ಕಳೆದುಕೊಳ್ಳುವ ಜೊತೆಗೆ ಬೆಳೆ ನಾಶವಾಗುತ್ತಿದೆ. ಕುಂದೂರು ಹಾಗೂ ಬಾನಹಳ್ಳಿ ಭಾಗದಲ್ಲಿ 13 ಕಾಡಾನೆ ಬೀಡು ಬಿಟ್ಟಿವೆ. ಹುಲ್ಲೆಮನೆ ಕುಂದೂರಿನಲ್ಲಿ11 ಕಿ,ಮೀ ಪೆನ್ಸಿಂಗ್ ಮಾಡಿದ್ದು, ಇನ್ನು 11 ಕಿ,ಮೀ ಪೆನ್ಸಿಂಗ್ ಮಾಡಿದರೆ ಕಾಡಾನೆ ಹಾವಳಿ ತಪ್ಪಿಸಬಹುದು. ಇದನ್ನು ಕೂಡಲೇ ಸರಕಾರ ಮಾಡಬೇಕು. ಅಲ್ಲದೇ ಕಾಡಾನೆ ದಾಳಿಯಿಂದ ಮೃತರಿಗೆ ಹಾಗೂ ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ವಿಮೆ ಕೂಡ ಶೀಘ್ರವಾಗಿ ರೈತರಿಗೆ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಚಂದ್ರೇಗೌಡ, ರೈತ ಮುಖಂಡ ಗಣೇಶ್ ಕೆಸವೊಳಲು, ಎಚ್.ಎಸ್.ನಾಗೇಶ್‌ಗೌಡ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *