“ಶನಿವಾರಸಂತೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ 17 ಜನರಿಗೆ ಮಾಸಾಸನ ಮಾಡಿಸಿಕೊಟ್ಟ ಕರವೇ ಕಾರ್ಯಕರ್ತರು.”
1 min read
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ವಯಸ್ಸಾದ ಮಹಿಳೆಯರು ಮತ್ತು ವೃದ್ಧರು ಮತ್ತು ವಿಕಲಚೇತನರು ನಮಗೆ ಮಾಸಾಸನ ಬರಲು ಇದಕ್ಕೆ ಯಾವ ದಾಖಲೆಗಳು ಒದಗಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಕರವೇ ಕಾರ್ಯಕರ್ತರಿಗೆ ಫೋನ್ ಬಂದ ಕಾರಣ ಕರವೇ ಕಾರ್ಯಕರ್ತರು ಅವರನ್ನು ಸಂಪರ್ಕಿಸಿ ಅವರ ದಾಖಲೆಗಳನ್ನು ನೋಡಿ ಅದರಲ್ಲಿ ಆಧಾರ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಮತ್ತು ಬ್ಯಾಂಕ್ ಖಾತೆ ಇಲ್ಲದವರಿಗೆ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟು ಕರವೇ ಕಾರ್ಯಕರ್ತರು ಇವರ ಅರ್ಜಿಗಳನ್ನು ಭರ್ತಿ ಮಾಡಿ ಒಟ್ಟು 17 ಜನರಿಗೆ ವೃದ್ಧಾಪ್ಯ ವೇತನಕ್ಕಾಗಿ ಶನಿವಾರಸಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇವರ ದಾಖಲೆಗಳನ್ನು ಕೊಟ್ಟು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿ ಈ 17 ಜನರಿಗೆ ಮಾಸಾಸನ ಮಾಡಿಕೊಟ್ಟಿರುತ್ತಾರೆೆ ಜೊತೆಗೆ ವೃದ್ಧಾಪ್ಯ ವೇತನದ ಆರ್ಡರ್ ಕಾಪಿಯನ್ನು ಫಲಾನುಭವಿಗಳಿಗೆ ಉಪ ತಹಸಿಲ್ದಾರ್ ನಾಗರಾಜ್ ರವರು 17 ಜನರಿಗೆ ವಿತರಿಸಿದರು.
ವೃದ್ಧಾಪ್ಯ ವೇತನವನ್ನು ಮಾಡಿಕೊಟ್ಟ ಉಪ ತಹಶೀಲ್ದಾರ್ ನಾಗರಾಜ್ ಅವರಿಗೂ ಕಂದಾಯ ಪರಿವೀಕ್ಷಕರಾದ ಮಂಜುನಾಥ್ ಅವರಿಗೂ ಕರವೇ ಕಾರ್ಯಕರ್ತರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೆಯೇ ಗ್ರಾಮಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ಮತ್ತು ನಾಡಕಚೇರಿ ಸಿಬ್ಬಂದಿಗಳಿಗೆ ಮತ್ತು ಶನಿವಾರಸಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ನಾಗರಾಜ್ ಮತ್ತು ಸೋಮವಾರಪೇಟೆ ತಾಲ್ಲೂಕು ಕರವೇ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಶನಿವಾರಸಂತೆ ಹೋಬಳಿಯ ಕರವೇ ಉಪಾಧ್ಯಕ್ಷರಾದ ರಫೀಕ್ ಮತ್ತು ಶನಿವಾರಸಂತೆ ನಗರ ಘಟಕದ ಅಧ್ಯಕ್ಷ ಇಜಾರ್ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ ಮತ್ತು ಕಂದಾಯ ಇಲಾಖೆ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
✍🏻ಬರಹ ಕೃಪೆ.✍🏻
ಫ್ರಾನ್ಸಿಸ್ ಡಿಸೋಜ.
ಕರವೇ ತಾಲ್ಲೂಕು ಅಧ್ಯಕ್ಷ, ಸೋಮವಾರ ಪೇಟೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990