“ದಾನ ಮಾಡುವುದಕ್ಕೆ ಬೇಕಾಗಿರುವುದು ಹಣವಲ್ಲ ವಿಶಾಲವಾದ ಹೃದಯ : ಶಿಕ್ಷಕರಾದ ಪ್ರಕಾಶ್ ಅಭಿಪ್ರಾಯ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬಿಡು ಕ್ಲಸ್ಟರಿನ ಕಲ್ಲುಗುಡ್ಡ ಶಾಲೆಗೆ ತಟ್ಟೆಯ ಸ್ಟಾಂಡ್ ಅವಶ್ಯಕತೆ ಇದೆ ಎಂದು ನಮ್ಮ ವಾಲಾ ವಿದ್ಯಾರ್ಥಿಗಳ ಪೋಷಕ ವರ್ಗದವರಿಗೆ ತಿಳಿಸಿದಾಗ ಮನಪೂರ್ವಕವಾಗಿ ಒಪ್ಪಿ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನೆನಪಿಗಾಗಿ ಹಾಗೂ ತಮ್ಮ ತರುವಾಯದ ಮಕ್ಕಳಿಗೂ ಅನುಕೂಲವಾಗಲೆಂದು ಸುಮಾರು 50 ಪ್ಲೇಟುಗಳನ್ನು ಇಡುವಂತಹ 14500=00ರೂಪಾಯಿ ಸ್ಟ್ಯಾಂಡನ್ನು ಪೊಷಕರು ಕೊಡಿಸಿದ್ದಾರೆ.

ದಾನಿಗಳ ಹೆಸರು :
1. ಶ್ರೀಮತಿ ಸುಮತಿ ಸುಂದರ-ಕು. ಸುಜನ್.
2. ಶ್ರೀಮತಿ ಶೋಭಾ ರವಿ-ಕು. ಕಾವ್ಯ.R.
3. ಶ್ರೀಮತಿ ಮಮತ ಶಂಕರ-ಕು.ಸಮನ್ವಿತ.S.
4. ಶ್ರೀಮತಿ ಗೀತಾ ಸಂಜೀವ–ಕು. ಮಾನ್ಯ. S.
5. ಶ್ರೀಮತಿ ಸುನಂದ -ಕು. ರಸ್ವಂತ್ N. ಮತ್ತು ಕು. ರಶ್ಮಿತಾ N.

ಸುಮಾರು 40ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಊರಿನ ಗ್ರಾಮಸ್ಥರುಗಳು ಅವರವರ ಶಾಲೆಗಳ ಬಗ್ಗೆ ಗಮನಹರಿಸಿದರೆ ಸರ್ಕಾರಿ ಸೌಲಭ್ಯಗಳ ಜೊತೆಗೆ ಸಹಕರಿಸಿದರೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಉತ್ತಮ ದರ್ಜೆಯಲ್ಲಿ ಕಾರ್ಯ ನಿರ್ವಹಿಸಲು ಅನುಕೂಲ ಅಗುತ್ತದೆ.ಶಾಲೆಗೆ ಸಹಾಯ ಮಾಡಿದವರಿಗೆ ಕಲ್ಲುಗುಡ್ಡ ಶಾಲೆ ಶಿಕ್ಷಕ ಪ್ರಕಾಶ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.