“ಒಂದು ಬಸ್ ಸ್ಟ್ಯಾಂಡಿನ ಕಥೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ ಹೇಳತೀರದಂತಾಗಿದೆ.ಮೂಡಿಗೆರೆ ಬಸ್ ನಿಲ್ದಾಣವು ಕೆಲ ದಿನಗಳಿಂದ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ ದಿನಾಂಕ 07/10/2023ರ ಶನಿವಾರದಂದು ಒಂದು ಗಂಟೆಗೂ ಹೆಚ್ಚುಕಾಲ ಬಸ್ ಇಲ್ಲದೆ ಪ್ರಯಾಣಿಕರಿಂದ ಬಸ್ ನಿಲ್ದಾಣ ತುಂಬಿ ತುಳುಕುತ್ತಿತ್ತು.

ಅದೆಷ್ಟೋ ಶಾಲಾ ವಿದ್ಯಾರ್ಥಿಗಳು,ಮಹಿಳೆಯರು,ಮಕ್ಕಳು,ಗಂಡಸರು ತಮ್ಮ ಕುಟುಂಬಸ್ಥರೊಂದಿಗೆ ಮತ್ತು ತಮ್ಮ ಲಗೇಜುಗಳೊಂದಿಗೆ ಬಸ್ಸನ್ನು ಕಾದು ಕುಳಿತ ಸನ್ನೀವೇಶ ಕಂಡುಬಂತು.

ಬಸ್ಸ್ ನಿಲ್ದಾಣದ ಟಿ.ಸಿ.ಯವರನ್ನು ಈ ಕುರಿತು ಪ್ರಯಾಣಿಕರು ವಿಚಾರಿಸಿದಾಗ ಉಡಾಫೆಯ ಉತ್ತರ ನೀಡಿದಲ್ಲದೇ ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಿಲ್ಲ ಇದರಿಂದ ಪ್ರಯಾಣಿಕರು ಟಿ.ಸಿ.ಯವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆಯಿಂದ ಚಿಕ್ಕಮಗಳೂರು,ಕಡೂರು, ಶಿವಮೊಗ್ಗ,ದಾವಣಗೆರೆ ಮುಂತಾದ ಕಡೆಗೆ ಹೋಗುವ ಬಸ್ ಗಳು ನಿಲ್ದಾಣದಲ್ಲಿರಲಿಲ್ಲ,ಸುಮಾರು ಒಂದು ಗಂಟೆಯ ನಂತರ ಮೇಲ್ಕಂಡ ಮಾರ್ಗವಾಗಿ ಹೋಗುವ ಬಸ್ ಗಳು ಬಂದಿದ್ದು ಪ್ರಯಾಣಿಕರು ಬಸ್ ಹತ್ತುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು.ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.