“ಸ್ವತಃಶ್ಚಲಿ ಆಟೋ ಸಂಘದ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ.”
1 min read
76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಾಳೂರು ಹೋಬಳಿಯ,ನಿಡುವಾಳೆಯ ಶ್ರೀ ರಾಮೇಶ್ವರ ಸ್ವತಃಶ್ಚಲಿ ಆಟೋ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ನಿಡುವಾಳೆಯ ವರ್ತಕರು ಹಾಗೂ ದಾನಿಗಳಾದ ಶ್ರೀಯುತ ಜೋಸೆಫ್ ತಾವ್ರೋರವರು ಉಪಸ್ಥಿತರಿದ್ದರು .


ಆಟೋ ಸಂಘದ ಅಧ್ಯಕ್ಷರಾದ ಮಹೇಶ್ ಹಾಗೂ ಉಪಾಧ್ಯಕ್ಷರಾದ ಎನ್. ಎಸ್. ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ ಆಟೋ ಸಂಘದ ಪದಾಧಿಕಾರಿಗಳು, ನಿಡುವಾಳೆ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಎಲ್ಲರಿಗೂ ಸಿಹಿ ತಿಂಡಿ ಹಂಚಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
944830599.