“ಮಣಿಪುರ ಹಿಂಸಾಚಾರ ಖಂಡಿಸಿ ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ.”
1 min read
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಮಾನವ ವಿರೋಧಿ ಕಾರ್ಯ ದೇಶದ ಮಣಿಪುರದಲ್ಲಿ ನಡೆದಿದ್ದು, ಇದಕ್ಕೆ ಡಬಲ್ ಎಂಜಿನ್ ಸರಕಾರವಾಗಿರುವ ಕೇಂದ್ರ ಮತ್ತು ಮಣಿಪುರದ ರಾಜ್ಯ ಸರಕಾರ ಗಲಭೆ ನಿಯಂತ್ರಣಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿ ಹಿಂಸಾಚಾರವನ್ನು ತಡೆಯಬೇಕೆಂದು ಮಾಜಿ ಸಚಿವೆ ಮೋಟಮ್ಮ ಒತ್ತಾಯಿಸಿದರು.
ಅವರು ದಿನಾಂಕ 11/08/2023ರ ಶುಕ್ರವಾರದಂದು ಪಟ್ಟಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಣಿಪುರ ಹಿಂಸಾಚಾರ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಳ್ಗೊಂಡು ಮಾತನಾಡಿದರು. ಬೇಟಿ ಬಚಾವೊ ಎನ್ನುವ ಪ್ರಧಾನಿಗಳು ಮಣಿಪುರದಲ್ಲಿ ಮಹಿಳೆಯರ ಮೇಲೆ ಆದಂತಹ ದೌರ್ಜನ್ಯದ ಬಗ್ಗೆ ಇಲ್ಲಿಯವರೆಗೂ ಚಕಾರವೆತ್ತಿಲ್ಲ. ಮಣಿಪುರದಲ್ಲಿರುವವರು ಭಾರತೀಯರೇ. ಹಾಗಾಗಿ ಮಹಿಳೆಯರ ರಕ್ಷಣ ಮಾಡುವುದು ಪ್ರಧಾನಿ ಅವರ ಕರ್ತವ್ಯವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಣಿಪುರದಲ್ಲಿ ಹಿಂಸಾಚಾರ ಘಟನೆ ಇಂದಿಗೂ ಮುಂದುವರೆದಿರುವುದು ಆಘಾತಕಾರಿ ಹಾಗೂ ನೋವಿನ ಸಂಗತಿಯಾಗಿದೆ. ಘಟನೆಯಿಂದ ಈಗಾಗಲೇ ಅನೇಕರು ಜೀವ ಕಳೆದುಕೊಂಡಿದ್ದಾರೆ. ಚರ್ಚ್ ಮಂದಿರ, ಮನೆಗಳು ಸೇರಿದಂತೆ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಕೂಡಲೇ ಹಿಂಸಾಚಾರವನ್ನು ತಡೆಗಟ್ಟಿ ಶಾಂತಿ ನೆಲೆಸಲು ಅಲ್ಲಿನ ಸರಕಾರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಧರ್ಮಾಧ್ಯಕ್ಷ ಟಿ.ಆಂತೋನಿ ಸ್ವಾಮಿ, ಮೂಡಿಗೆರೆ ಚರ್ಚ್ ಧರ್ಮಗುರು ಸುನೀಲ್ ರೋಟ್ರಿಗಸ್, ಕಾರ್ಯದರ್ಶಿ ಜೆರೊಮ್ ರೊನಾಲ್ಡ್, ಬಸ್ಕಲ್ ಧರ್ಮಗುರು ಫಾ.ಜೇಮ್ಸ್ ಚಾರ್ಲಿ, ಗೋಣಿಬೀಡು ಧರ್ಮಗುರು ಫಾದರ್ ಪೀಟರ್ ಬ್ರಾಂಕ್, ಹಿರೇಬೈಲ್ನ ಧರ್ಮಗುರು ಫಾ.ಡೇವಿಡ್ ಪ್ರಕಾಶ್, ಮಾಜಿ ಶಾಸಕ ಲೋಬೋ, ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಮಹಮ್ಮದ್, ಲೋಕವಳ್ಳಿ ರಮೇಶ್, ಅಂಗಡಿ ಚಂದ್ರು, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಹರ್ಷ ಮೆಲ್ವಿನ್ ಲಸ್ರಾದೋ ಹಾಗೂ ಮತ್ತಿತರರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









