“ಮೃತದೇಹ ಪತ್ತೆ.”
1 min read
ದಿನಾಂಕ 04/08/2023ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಲೊಕವಳ್ಳಿ ಎಸ್ಟೇಟ್ ಗ್ರಾಮದ ರಾಜೇಗೌಡ ಅವರ ತೋಟದಲ್ಲಿ ಸುಮಾರು 150 ಅಡಿ ಹೊಂಡ ಒಂದರಲ್ಲಿ ಅಂದಾಜು 37 ವರ್ಷ ಪ್ರಾಯದ ಅದೇ ಗ್ರಾಮದ ತೇಜಸ್ ಎಂಬ ವ್ಯಕ್ತಿಯ ಮೃತದೇಹವು ಪತ್ತೆಯಾಗಿತ್ತು.

ಈ ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋನು ಗೌರವಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಉಪಾಧ್ಯಕ್ಷರಾದ ಆರಿಫ್ ಬಣಕಲ್ ಮತ್ತು ರೆಹಮಾನ್ , ಸಹ ಕಾರ್ಯದರ್ಶಿ ಆಶಿಕ್ ಬಿಜುವಳ್ಳಿ
ಮೂಡಿಗೆರೆಯ ಪೊಲೀಸ್ ಇನ್ಸ್ ಪೆಕ್ಟರ್ ಆದರ್ಶ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಚಿಕ್ಕಮಗಳೂರು ಎಸ್ಪಿ
ಕಚೇರಿಯ ಸೀನ್ ಆಫ್ ಕ್ರೈಂ ಅಧಿಕಾರಿಗಳ ಸಮ್ಮುಖದಲ್ಲಿ ಈ ಮೃತ ದೇಹವನ್ನು ಮೇಲಕ್ಕೆ ಎತ್ತಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.