लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಸಿದ್ಧ ತೀರ್ಥಕ್ಷೇತ್ರ ಸ್ಥಳ ಕೇದಾರನಾಥ ಯಾತ್ರೆಗೆ ತೆರಳಿದ್ದ ಮೂಡಿಗೆರೆ ಮೂಲದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗ್ರಾಮದ ಗಿರೀಶ್(25 ವರ್ಷ) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರಿನ ತನ್ನ ಸ್ನೇಹಿತನೊಂದಿಗೆ ಕಳೆದ ವಾರ ಕೇದಾರನಾಥ ಯಾತ್ರೆಗೆ ತೆರಳಿದ್ದ ಗಿರೀಶ್ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಜನ್ನಾಪುರದ ಚಂದ್ರು ಎನ್ನುವವರ ಪುತ್ರರಾದ ಗಿರೀಶ್ ಅಡುಗೆ ವೃತ್ತಿ ಮಾಡುತ್ತಿದ್ದರು.

ಜನ್ನಾಪುರದ ಅವರ ಸಂಬಂಧಿ ಅಡುಗೆ ಕಂಟ್ರಾಕ್ಟರ್ ಶಿಲ್ಪಿ ಯವರು ನೀಡಿರುವ ಮಾಹಿತಿಯಂತೆ ಗಿರೀಶ್ ಯಾತ್ರೆಯ ಅವಧಿಯಲ್ಲಿ ನನ್ನೊಂದಿಗೆ ಸತತವಾಗಿ ಪೋನ್ ಸಂಪರ್ಕದಲ್ಲಿದ್ದರು. ಗಿರೀಶ್ ಮತ್ತು ಅವರ ಸ್ನೇಹಿತ ಕೇದಾರನಾಥ ಕಡೆಗೆ ಬಸ್ ನಲ್ಲಿ ಪ್ರಯಾಣಿಸುವಾಗ ದಾರಿಯಲ್ಲಿ ಊಟಕ್ಕೆ ಎಂದು ಗಿರೀಶ್ ಬಸ್ ನಿಂದ ಇಳಿದಿದ್ದರು. ಆ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ರಿಷಿಕೇಷ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಜನ್ನಾಪುರಕ್ಕೆ ಮೃತದೇಹವನ್ನು ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ನೆರವು ಕೋರಲಾಗಿದೆ. ಇಂದು ರಾತ್ರಿಯ ಹೊತ್ತಿಗೆ ಮೃತದೇಹ ಊರಿಗೆ ತಲುಪುವ ಸಾಧ್ಯತೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತ ಗಿರೀಶ್ ತಂದೆ, ತಾಯಿ, ಸಹೋದರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ತನ್ನ ಪುತ್ರನನ್ನು ಕಳೆದುಕೊಂಡು ಅವರ ಕುಟುಂಬ ಕಂಗಾಲಾಗಿದೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *