“ಮೆಚ್ಚಿನ ಶಿಕ್ಷಕ ಬೇರೆ ಶಾಲೆಗೆ ವರ್ಗಾವಣೆ : ಕಣ್ಣೀರಿಟ್ಟು ಬೀಳ್ಕೊಟ್ಟ ವಿದ್ಯಾರ್ಥಿಗಳು.”
1 min read
ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಾಲೆಯಿಂದ ಶಿಕ್ಷಕ ಬೇರೆ ಶಾಲೆಗೆ ವರ್ಗಾವಣೆಯಾದ್ದರಿಂದ ಶಾಲೆಯಿಂದ ತೆರಳುವಾಗ ವಿದ್ಯಾರ್ಥಿಗಳು, ಸಹ ಶಿಕ್ಷಕರು ಹೂಗುಚ್ಚ ಕೊಟ್ಟು ಕಣ್ಣೀರಿಟ್ಟು ಬೀಳ್ಕೊಟ್ಟ ಭಾವುಕ ಘಟನೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ,ಬೆಟ್ಟಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಬೆಟ್ಟಗೆರೆಯ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಸತ್ಯಪ್ರಕಾಶ್ ಅವರು ೧೭ ವರ್ಷದಿಂದ ಬೆಟ್ಟಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ತರೀಕೆರೆ ತಾಲ್ಲೂಕಿನ ಕುಂಟಿನಮಡುವು ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದು ಸೇವೆಯ ಕೊನೆಯ ದಿನ ಶಾಲೆಯ ಸಹಶಿಕ್ಷಕರು, ವಿದ್ಯಾರ್ಥಿಗಳು ಶಿಕ್ಷಕ ಸತ್ಯಪ್ರಕಾಶ್ ಅವರಿಗೆ ಹೂಗುಚ್ಚ ಕೊಟ್ಟು ಕಣ್ಣೀರಿಟ್ಟು ಬೀಳ್ಕೊಟ್ಟರು.

ಶಾಲೆಯಿಂದ ಮುಖ್ಯರಸ್ತೆಯವರೆಗೂ ಸಾಗಿ ವಿದ್ಯಾರ್ಥಿಗಳು, ಸಹಶಿಕ್ಷಕರು ಭಾರವಾದ ಮನಸ್ಸಿನಿಂದ ಮೆಚ್ಚಿನ ಶಿಕ್ಷಕನನ್ನು ಬೀಳ್ಕೊಟ್ಟರು. ಚಿತ್ರಕಲಾ ಶಿಕ್ಷಕ ಸತ್ಯಪ್ರಕಾಶ್ ತಮ್ಮ ಕೈ ಚಳಕದಿಂದ ಶಾಲೆಯ ಗೋಡೆಗಳನ್ನು ಕಲಾಮಯಗೊಳಿಸಿದ್ದರು. ತೊಗಲುಗೊಂಬೆಯ ಕಲೆಯನ್ನು ವಿದ್ಯಾರ್ಥಿಗಳಿಗೂ ಕಲಿಸುತ್ತಿದ್ದರು.

ಚಿತ್ರಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಬಹುಮಾನವನ್ನು ಪಡೆಯುವಲ್ಲಿ ವಿಶೇಷ ಪಾತ್ರ ವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











