“ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಗೆ ಸೇರಿಸುವುದು ಸ್ವಾಗತಾರ್ಹ : ರಾಜೇಶ್ ಪುದುಶೇರಿ.”
1 min read
ಭಾರತೀಯ ರೈಲ್ವೆಯ 17 ವಲಯಗಳ ಕೊಂಕಣ ರೈಲ್ವೆ ಕಾರ್ಪೋರೇಶನನ್ನು ಸೇರಿಸುವ ಮಾನ್ಯ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಸ್ತಾವನೆಯು ಅರ್ಹವಾದದ್ದು. ಇದರಿಂದ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಉದ್ಯೋಗಾವಕಾಶದ ಸೃಷ್ಟಿಗೆ ಹಾಗೂ ವ್ಯಾಪಾರ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಇದರಿಂದ ಕರಾವಳಿ ಭಾಗದ ಮೀನು ವಾಣಿಜ್ಯ ಉದ್ಯಮಕ್ಕೆ ನೆರವಾಗುತ್ತದೆ. ಈ ಕೊಂಕಣ ರೈಲ್ವೆ ಜನವರಿ 26 1998 ರಂದು ಅಧಿಕೃತವಾಗಿ ಉದ್ಘಾಟಿಸಲಾಗಿತ್ತು. ಇದು ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುತ್ತದೆ.ಮತ್ತು ಕರಾವಳಿ ತೀರದ ರೈಲ್ವೆ ಅಭಿವೃದ್ದಿ ಇಂದಿನ ಆಧುನಿಕ ಯುಗದಲ್ಲಿ ಅತಿ ಅವಶ್ಯಕಗಿದ್ದು ಇದಕ್ಕಾಗಿ ಮಾನ್ಯ ಎಲ್ಲ ಪಕ್ಷದ ಸಂಸದರು ಪ್ರಯತ್ನಿಸಬೇಕೆಂದು ಮಾನ್ಯ ಭಾರತ ಸರಕಾರ DRUCC ನೈರುತ್ಯ ರೈಲ್ವೆ ಇಲಾಖೆಯ ಸದಸ್ಯರಾದ ಶ್ರೀ ರಾಜೇಶ್ ಪುದುಶೇರಿ ಬಂಗಾಡಿ ವಿನಂತಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







