लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಒಂದು ತಿಂಗಳು ಮೊದಲು ನಡೆದ ಡಾಂಬರೀಕರಣದ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಈ ರಸ್ತೆಗಳು ಸರಿ ಇದೆ ಎಂದು ಬಿಲ್ಲು ಮಾಡಲು ಒಪ್ಪಿಗೆ ಸೂಚಿಸಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಮೊದಲು ಹಲವು ರಸ್ತೆಗಳನ್ನು ಡಾಂಬರೀಕರಣ ಮಾಡಿರುತ್ತಾರೆ. ಇದರಲ್ಲಿ ಭಾಗಶಃ ಕಳಪೆ ಕಾಮಗಾರಿಯಿಂದ ಕೂಡಿರುತ್ತದೆ .ಇದಕ್ಕೆ ಸಾಕ್ಷಿ ಎಂಬಂತೆ ಗೌಡಳ್ಳಿ ಗ್ರಾಮದ ಪುಲಗಿರಿ ದೇವಸ್ಥಾನದ ರಸ್ತೆಯು ಅಂದಾಜು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಆಗಿರುತ್ತದೆ ಇದು ಸಂಪೂರ್ಣವಾಗಿ ಹುಲ್ಲಿನಿಂದ ಕೂಡಿದ್ದು ಡಾಂಬರಿನ ಕೆಳಭಾಗದಿಂದ ಹುಲ್ಲು ಬರುತಿದ್ದು ರಸ್ತೆಯ ಡಾಂಬರ್ ಎಲ್ಲವೂ ಕಿತ್ತು ಹೋಗುತ್ತಿದೆ.

ಇಂಜಿನಿಯರ್ ಮತ್ತು ಗುತ್ತಿಗೆದಾರ ಸೇರಿ ಇಂತಹ ಹೈಟೆಕ್ ರಸ್ತೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಹಾಗೂ ಹೆಗಳ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಆಗಿರುತ್ತದೆ ಈ ರಸ್ತೆ ಮಾಡಿ ಒಂದು ತಿಂಗಳಿನಲ್ಲೇ ಅಲ್ಲಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿರುತ್ತದೆ ಹಾಗೂ ಈ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿರುತ್ತದೆ ಮತ್ತು ಬಸವನಕೊಪ್ಪ ಗ್ರಾಮದ ಗದ್ದೆಗೆ ಹೋಗುವ ರಸ್ತೆಯು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣಗೊಂಡಿದ್ದು ಕಳಪೆ ಗುಣಮಟ್ಟದಿಂದ ಕೂಡಿದೆ ರಸ್ತೆಯ ಭಾಗದಲ್ಲಿ ಹುಲ್ಲು ಹುಟ್ಟುತ್ತ ಇದೆ ರಸ್ತೆಯ ಡಾಂಬರಿನ ಅಡಿಯಿಂದ ಹುಲ್ಲು ಬಂದಿರೋದು ಕಂಡು ಬಂದಿದೆ.

ಹಾಗಾಗಿ ಈ ಚುನಾವಣೆಯ ಮೊದಲು ಮಾಡಿದಂತಹ ಯಾವುದೇ ರಸ್ತೆಗಳಿಗೆ ಹಣ ಬಿಡುಗಡೆ ಮಾಡದೆ ಈಗ ಮಾಡಿರುವ ಡಾಂಬರೀಕರಣ ಸಂಪೂರ್ಣ ತೆಗೆದು ಉತ್ತಮವಾಗಿ ಮರು ಡಾಂಬರೀಕರಣ ಮಾಡಿಕೊಡಬೇಕು ಹಾಗೂ ಈ ಎಲ್ಲಾ ಕಳಪೆ ಕಾಮಗಾರಿ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಈ ಡಾಂಬರೀಕರಣ ಮಾಡುವಾಗ ಇಂಜಿನಿಯರ್ ಸರಿಯಾಗಿ ನೋಡದೆ ಬಿಲ್ ಮಾಡಲು ಒಪ್ಪಿಗೆ ನೀಡಿದ್ದು ಇಂತಹ ಅಧಿಕಾರಿಗಳನ್ನು ಅಮಾನತುಗೊಳಿಸಿ ಇವರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಈಗಾಗಲೇ ಮಾಹಿತಿ ಹಕ್ಕು ಮುಖಾಂತರ ಮಾಹಿತಿ ಕೇಳಿದ್ದು ಕೊಡಗು ಜಿಲ್ಲಾ ಪಂಚಾಯತಿಯಿಂದ ಕಾಮಗಾರಿಗೆ ಸಂಬಂಧಪಟ್ಟ ಮಾಹಿತಿಗಳು ಬಂದ ತಕ್ಷಣ ಮಾನ್ಯ ಲೋಕಾಯುಕ್ತರಿಗೆ ಹಾಗೂ ಮಾನ್ಯ ಶಾಸಕರಿಗೆ ಈ ಕಾಮಗಾರಿಯ ಬಗ್ಗೆ ದೂರು ನೀಡಲಿದ್ದು ಹಾಗೂ ಶಾಸಕರು ಈ ರಸ್ತೆಗಳನ್ನು ಪರಿಶೀಲಿಸಿ ಇನ್ನು ಮುಂದೆ ಕಳಪೆಯಾಗಿರುವಂತಹ ಈ ರಸ್ತೆಗಳಿಗೆ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಲ್ಲಿ ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಗೌಡಳ್ಳಿ
ನವದುರ್ಗಾಪರಮೇಶ್ವರಿ ದೇವಾಲಯದ ಸಮುದಾಯ ಭವನದ ಅಧ್ಯಕ್ಷರಾದ ಮಹೇಶ್ ಹಾಗೂ ರಾಮನಹಳ್ಳಿ ಕರವೇ ಉಪಾಧ್ಯಕ್ಷರಾದ ರಕ್ಷಿತ್ ಉಪಸ್ಥಿತರಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *