“ರಾಷ್ಟ್ರೀಯ ಮಟ್ಟಕ್ಕೆ ಹಳ್ಳಿಯ ಪ್ರತಿಭೆ.”
1 min read
9/06/2023 ರಿಂದ 12/06/2023ರ ವರೆಗೆ ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರಮಟ್ಟದ ಜನ್ ಜಾತಿಯ ಖೇಲ್ ಮಹೋತ್ಸವ-2023 ರ ಕಬ್ಬಡಿ ಪಂದ್ಯಾವಳಿಯ ಕರ್ನಾಟಕ ರಾಜ್ಯ ತಂಡಕ್ಕೆ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ,ಅಣಜೂರು (ಪ್ಯಾಟೆಹಿತ್ಲು)ಗ್ರಾಮದ ಮರ್ದ ಹಾಗೂ ರಾಧಾ ಇವರ ಮಗಳಾದ ಕುಮಾರಿ. ರಶ್ಮಿ. ಎ. ಎಮ್. ಇವರು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಮೂಡಿಗೆರೆ ಮೇಧಾ ಸ್ಪೋರ್ಟ್ಸ್ ಕ್ಲಬ್ ನ ಆಟಗಾರ್ತಿ ಆಗಿರುತ್ತಾರೆ.

ಮೂಡಿಗೆರೆ ಮೇಧಾ ಸ್ಪೋರ್ಟ್ಸ್ ಕ್ಲಬ್( ರಿ )ನ ಅಧ್ಯಕ್ಷರಾದ ಸುರೇಶ್ ಮಗ್ಗಲಮಕ್ಕಿ,ಉಪಾಧ್ಯಕ್ಷರಾದ ರಘು ಮಗ್ಗಲಮಕ್ಕಿ,ತರಬೇತುದಾರರಾದ ಪೂರ್ಣೇಶ್, ಸುರೇಂದ್ರ,ಕೌಶಿಕ್,ರವಿ,ಸಚಿನ್ ಮತ್ತು ಆಟಗಾರರು ಹಾಗೂ ಪದಾಧಿಕಾರಿಗಳು ರಶ್ಮಿಯ ನೀರಿಗೆ ಶುಭ ಕೋರಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.









