लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 05/06/2023ರ ಮಂಗಳವಾರದಂದು, ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಗೋಣಿಬಿಡು ಹೋಬಳಿಯ,ಚಿನ್ನಿಗ -ಜನ್ನಾಪುರದ ಎಲೈಟ್ ಮೈಂಡ್ಸ್ ಶಾಲೆ ಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ವಿಜ್ಞಾನ ಶಿಕ್ಷಕರಾದ ಶ್ರೀ ವಿಜೇಂದ್ರ ರವರು ಶಾಲೆಯ ಎಲ್ಲಾ ಮಕ್ಕಳಿಗೂ ಹಾಗೂ ಆಗಮಿಸಿದವರಿಗೆ ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ನಂತರ ಗಿಡಗಳನ್ನ ನೆಡುವ ಮೂಲಕ ಹಾಗೂ ವಿವಿಧ ಜಾತಿಯ ಹಣ್ಣಿನ ಬೀಜಗಳಿಗೆ ಮಣ್ಣಿನ ಹುಂಡೆಗಳನ್ನ ಮಾಡಿ ಅವುಗಳನ್ನ ಕಾಡಿನಲ್ಲಿ ಬಿತ್ತನೆ ಮಾಡಲಾಯಿತು.

ನಂತರ ಶಾಲೆಯಿಂದ ಜನ್ನಾಪುರ ಮಾರ್ಗದಲ್ಲಿ ಪರಿಸರ ಜಾಗೃತಿಯ ಮೆರವಣಿಗೆ ಸಾಗಿ ಜನ್ನಾಪುರ ಸರ್ಕಲ್ ನಲ್ಲಿ ಬಹಿರಂಗ ಸಭೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿಯವರಾದ ಸುದೀಪ್ ರವರು ಹಾಜರಿದ್ದು ಕಾರ್ಯಕ್ರಮಕ್ಕೆ ಹಾಗೂ ಜಾಥಕ್ಕೆ ಶುಭ ಹಾರೈಸಿದರು. ನಂತರ ಮಕ್ಕಳು ಪರಿಸರ ಗೀತೆ ಮತ್ತು ಬೀದಿ ನಾಟಕವನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ಕೊಟ್ಟರು.ನಂತರ ಆಗಮಿಸಿದ ಸಾರ್ವಜನಿಕರಿಗೆ ಒಂದೊಂದು ಗಿಡಗಳನ್ನ ಶಾಲೆಯ ಹಾಗೂ ಅರಣ್ಯ ಇಲಾಖೆ ವತಿಯಿಂದ ನೀಡಲಾಯಿತು.

ನಂತರ ಮುಖ್ಯ ರಸ್ತೆಯ ಮಾರ್ಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನ್ನಾಪುರವನ್ನ ತಲುಪಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರಿಗೆ ಗಿಡಗಳನ್ನ ನೀಡಲಾಯಿತು. ನಂತರ ಎಲ್ಲರೂ ತಂಪು ಪಾನೀಯವನ್ನ ಸೇವಿಸಿ ಗೋಣಿಬಿಡು ವೃತ್ತವನ್ನು ತಲುಪಿ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಪ್ರೋತ್ಸಾಹದಿಂದ ಅತ್ಯಂತ ಸುಂದರವಾದ ಬಹಿರಂಗ ಸಭೆಯನ್ನ ಮಾಡಿ ಅಲ್ಲಿಯೂ ಕೂಡ ವಿದ್ಯಾರ್ಥಿಗಳು ತಮ್ಮ ಕಿರುನಾಟಕ, ಪರಿಸರ ಗೀತೆಗಳನ್ನ ಹಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ನಂತರ ಸ್ಥಳೀಯರಿಂದ ಮಕ್ಕಳೆಲ್ಲರಿಗೂ ಸಿಹಿ ವಿತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಶಾಲೆಯ ವತಿಯಿಂದ ಧನ್ಯವಾದಗಳನ್ನ ಸಲ್ಲಿಸಲಾಯಿತು. ಹಾಗೆಯೇ ಗೋಣಿಬಿಡು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಶಾಲಾ ಪೋಷಕರು ಮತ್ತು ಸಾರ್ವಜನಿಕರು ಹಾಗೂ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು, ಶಾಲಾ ವಾಹನ ಚಾಲಕರು ಮತ್ತು ಪ್ರೀತಿಯ ಮಕ್ಕಳು ಇವರೆಲ್ಲರು ಸಹಕರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಹಿರಿಯ ಶಿಕ್ಷಕರಾದ ಶ್ರೀಮತಿ ಮಧುರ, ಬಿಂಧು, ಅಷ್ಟಮಿ, ಅನುಪ, ಜಯಶ್ರೀ, ಮೋನಿಷಾ, ನಿಶಾ, ಪಿಂಟೋ, ಗೌತಮಿ, ನಸ್ರೀನ,ಪ್ರದೀಪ್,ವಿಜೇಂದ್ರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪಾಲ್ ಹಾಗೂ ವಾಹನ ಚಾಲಕರಾದ ರಮೇಶ್ ಸುಲ್ತಾನ್ ಸುರೇಶ್ ಚಂದ್ರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬರಹ ಕೃಪೆ.

ಜಯಪಾಲ್ ಬಿ.ಹೊಸಹಳ್ಳಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *