AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಲವಾರು ಎತ್ತಿನ ಗಾಡಿ ಮಾಲಿಕರು 2ಟನ ಕಬ್ಬು ಹಾಕಿಕೊಂಡು ಎತ್ತುಗಳಿಗೆ ನರಕಯಾತನೆ ತೋರಿಸುವತಾಗೆದೆ.avintvcom

1 min read
Featured Video Play Icon

Áವಳಗಿ : 12-2

ಮೂಕ ಪ್ರಾಣಿಯ ರೋಧನೆ : ಗ್ರಾಮಸ್ಥರ ಆಕ್ರೋಶ

ಸದಾಶಿವ ಅಕ್ಕಿವಾಡ

ಸಾವಳಗಿ : ಸುಮಾರು ಕೆ.ಜಿ. ಬಾರಿ ಗಾತ್ರದ ಕಬ್ಬು ಹೊತ್ತು, ಹಲವಾರು ಗಂಟೆಗಳ ಹೊತ್ತು ನಿಂತ ಹೋರಿಗಳ ರೋಧನೆ ನಿಜಕ್ಕೂ ನೋಡುಗರ ಹೃದಯ ಮಾತ್ರ ಚೂರಾಗುತ್ತದೆ. ಇಂತಹ ಮನಕಲುಕುವ ದೃಶ್ಯ ಕಂಡಿದ್ದು ಜಮಖಂಡಿಯ ಶುಗರ್ಸ ಕಾರ್ಖಾನೆಯ ಆವರಣದಲ್ಲಿ.

ಹೌದು ಹೀರೆಪಡಸಲಗಿಯ ಶುಗರ್ಸ ಕಾರ್ಖಾನೆಯಲ್ಲಿ ಹೆಚ್ಚಿನ ದುಡ್ಡು ಸಂಪಾದನೆ ಮಾಡಬೇಕೆಂಬ ಕೆಟ್ಟ ಮನಸ್ಸಿನಿಂದ ಹಲವಾರು ಎತ್ತಿನ ಗಾಡಿ ಮಾಲಿಕರು 2ಟನ ವರೆಗೆ ಕಬ್ಬು ಬಂಡಿಯಲ್ಲಿ ಹಾಕಿಕೊಂಡು ಪ್ರತಿನಿತ್ಯ ಎತ್ತುಗಳಿಗೆ ನರಕಯಾತನೆ ತೋರಿಸುತ್ತಿರುವ ಕೆಟ್ಟ ಮನಸ್ಸಿನ ಜನರಿಗೆ ಸಾವಳಗಿಯ ಪ್ರಾಣಿ ದಯಾ ಸಂಘದವರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಕಾರ್ಖಾನೆ ಪ್ರಾರಂಭವಾದರೇ ಸಾಕು ನೂರಾರು ಎತ್ತಿನ ಬಂಡಿಗಳು ಬಾರಿ ಗಾತ್ರದ ಕಬ್ಬು ತುಂಬಿಕೊಂಡು ಪ್ರತಿನಿತ್ಯ ಎತ್ತುಗಳಿಗೆ ಹಿಂಸೆ ನೀಡುತ್ತಿದ್ದರೂ ಸಂಬಂದಿಸಿದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಬ್ಬು ಹೊತ್ತ ಹಲವಾರು ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಬೇಗನೆ ಹೋಗಲಿ ಎಂದು ಮೈಮೇಲೆ ರಕ್ತ ಬರುವ ಹಾಗೆ ಏಟು ನೀಡುತ್ತಿರುವ ಮಾಲಿಕ. ಮಾತು ಬರದ ಪ್ರಾಣಿಗಳು ಯಾರಿಗೆ ತಮ್ಮ ಕಷ್ಟ ಹೇಳಲಿ ಎಂದು ಒದ್ದಾಡುತ್ತಿದ್ದರೂ ಅಧಿಕಾರಿಗಳಿಗೆ ಕೀವಿಗೆ ಮಾತ್ರ ಈ ವಿಷಯ ಬಿದ್ದಿಲ್ಲ.

ಸದೃಡವಾದ ಎತ್ತುಗಳು ಇದ್ದರೆ ಸಾಕು ಅವುಗಳನ್ನು ಎತ್ತಿನ ಬಂಡೆಯವರು ಕೊಂಡು ಇಂತಹ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಯ ಮಾಲಿಕರು ಬಾರಿ ಗಾತ್ರದ ಕಬ್ಬು ತಂದ ಬಂಡೆಗಳಿಗೆ ಪ್ರವೇಶ ನೀಡಬಾರದು. ಸಂಬಂದಿಸಿದ ಇಲಾಖೆಯವರು ಇಂತಹ ಎತ್ತಿನ ಬಂಡೆಗಳ ಮಾಲಿಕರ ಮೇಲೆ ಕೇಸ್ ದಾಖಲಿಸಿ ಮೂಕ ಪ್ರಾಣಿಗಳನ್ನು ರಕ್ಷೀಸಬೇಕೆಂದು ಪ್ರಾಣಿ ದಯಾ ಸಂಘದವರು ಆಗ್ರಹಿಸಿದ್ದಾರೆ.

ಬಾಕ್ಸ : 1) ಕಾರ್ಖಾನೆ ಪ್ರಾರಂಭವಾದರೇ ಸಾಕು ನೂರಾರು ಎತ್ತುಗಳಿಗೆ ನಿತ್ಯ ಚಿತ್ರಹಿಂಸೆ ನೀಡುತ್ತಾರೆ. ಆಧುನಿಕ ಯಂತ್ರೋಪಕರಣಗಳ ಯುಗದಲ್ಲಿ ಬೇರೆ ಸಾರಿಗೆ ವ್ಯ

About Author