day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ದೈವ ಮಾನವ ಆರೀಫ್ ಬಣಕಲ್.” – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

“ದೈವ ಮಾನವ ಆರೀಫ್ ಬಣಕಲ್.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಗೊಣೀಬೀಡು ಹೋಬಳಿಯ,ಆನೆದಿಬ್ಬ ಗ್ರಾಮದಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರೊಂದಿಗೆ ಸ್ಥಳಕ್ಕೆ ಹೋದ ಸಮಾಜ ಸೇವಕ ಆರಿಫ಼್ ಬಣಕಲ್ ರವರು ಕೊಳೆತು ನಾರುತ್ತಿದ್ದ ಆ ಮೃತದೇಹವನ್ನು ಹೆಗಲ ಮೇಲೆ ಹೊತ್ತು ವಾಹನದವರೆಗೂ ತಂದರು.

ಆರೀಫ್ ಅವರು ಇಷ್ಟವಾಗುವುದು ಇದೇ ಕಾರಣಕ್ಕೆ. ಹಿಂದೊಮ್ಮೆ ಇದೇ ತರಹ ಅಪರಿಚಿತ ಶವವೊಂದು ಸಿಕ್ಕಾಗ ಅಲ್ಲಿಗೆ ಶವ ಸಾಗಿಸಲು ಬಂದಿದ್ದ ಆರೀಪ್ ಅವರಿಗೆ, ದುರ್ವಾಸನೆ ಬೀರುವ ಕೊಳೆತ ಶವವನ್ನು ಸಾಗಿಸುವಾಗ ಯಾವ ಹಿಂಜರಿಕೆ, ಅಸಹ್ಯ ಯಾವುದೂ ಇಲ್ಲದೇ ಸಹಜವಾಗಿ ಇರಲು ಹೇಗೆ ಸಾಧ್ಯ ಎಂದು ಕೇಳಿದೆ?. ಅದಕ್ಕವರು ‘ಮೃತಪಟ್ಟವರು ನನ್ನ ಹಾಗೇ ಇರುವ, ನನ್ನ ಹಾಗೆಯೇ ಅನ್ನ ತಿನ್ನುವ ಮನುಷ್ಯ ಎಂದುಕೊಂಡರೇ ಆಯ್ತು’ ಎಂದಿದ್ದರು. ಆರೀಪ್ ಅವರನ್ನು ವಿರೋಧಿಸುವವರು ಹಲವರಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿರುವಾಗ ಪರ ವಿರೋಧ ಸಾಮಾನ್ಯ. ಆದರೆ ಅವರನ್ನು ವಿರೋಧಿಸುವವರ್ಯಾರು ಇಂತಹ ಕೆಲಸ ಮಾಡಲು ಮುಂದಾಗುವುದಿಲ್ಲ. ಹಾಗಿದ್ದಾಗ ಅವರ ಮಾತಿಗೆ ಮಾನ್ಯತೆಯೂ ಇಲ್ಲ. ಆರೀಪ್ ಅವರನ್ನು ಇಂತಹ ಕಾರ್ಯಗಳಲ್ಲಿ ತೊಡಗುವಂತೇ ಪ್ರೇರೇಪಿಸುವುದು ಯಾವುದು ಎಂದು ಕೆಲವೊಮ್ಮೆ ಯೋಚಿಸುತ್ತೇನೆ. ಪ್ರಚಾರದಾ ನಿರೀಕ್ಷೇಯಾ? ಪ್ರಸಿದ್ದಿಯಾ ತುಡಿತವಾ? ಜನ ನನ್ನನ್ನು ಗುರುತಿಸಲಿ ಎಂಬ ಹಂಬಲವಾ? ಊಹ್ಞೂಂ. ಇದ್ಯಾವ ಕಾರಣವೂ ಒಬ್ಬ ಮನುಷ್ಯನನ್ನು ಇಂತಹ ಕಾರ್ಯದಲ್ಲಿ ತೊಡಗಿಕೊಳ್ಳುವಂತೇ ಮಾಡುವುದಿಲ್ಲ. ಇದೆಲ್ಲವನ್ನೂ‌ ಮೀರಿದ ಯಾವುದೋ ಭಾವ, ಅವನು ನಮ್ಮಂತೇ ಮನುಷ್ಯ ಎನ್ನುವ ಮಾನವೀಯ ಅಂತಃಕರಣ ಇದ್ದರಷ್ಟೆ ಇಂತಹ ಕಾರ್ಯಗಳನ್ನು ಮಾಡಲು ಸಾಧ್ಯ. ನಿಜ ಅರ್ಥದಲ್ಲಿ ಆರೀಪ್ ಅವರು ಸಮಾಜ ಸೇವಕ. ಅವರ ಕಾರ್ಯಕ್ಕೆ ಅಂತಃಕರಣಕ್ಕೊಂದು ಸಲಾಂ.

✍🏻ಬರಹ ಕೃಪೆ.✍🏻

ನಂದೀಶ್ ಬಂಕೇನಹಳ್ಳಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *