day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಭಗವಾಧ್ವಜ ತೆರವುಗೊಳಿಸಲು ದುರ್ಗಾದೇವಿ ಸಮಿತಿ ಸದಸ್ಯರ ಸೂಚನೆ : ಪ್ರವೀಣ್ ಪೂಜಾರಿ ಸ್ಪಷ್ಟನೆ.” – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

“ಭಗವಾಧ್ವಜ ತೆರವುಗೊಳಿಸಲು ದುರ್ಗಾದೇವಿ ಸಮಿತಿ ಸದಸ್ಯರ ಸೂಚನೆ : ಪ್ರವೀಣ್ ಪೂಜಾರಿ ಸ್ಪಷ್ಟನೆ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದುರ್ಗಾ ದೇವಿ ಸಮಿತಿಯ ಸದಸ್ಯರೊಬ್ಬರ ಸೂಚನೆ ಮೇರೆಗೆ ನಾನು ಭಗವಾಧ್ವಜ ತೆರವುಗೊಳಿಸಿದ್ದೇನೆ. ಆದರೆ ದುರ್ಗಾದೇವಿ ಸಮಿತಿಯವರು ಈ ವಿಚಾರವನ್ನು ಮರೆಮಾಚಿ ನನ್ನ ಮೇಲೆ ಆರೋಪ ಹೊರೆಸಿದ್ದಾರೆಂದು ಆರೋಹಿ ಸೌಂಡ್‌ಸಿಸ್ಟಮ್ ಮಾಲೀಕ ಪ್ರವೀಣ್‌ಪೂಜಾರಿ ಹೇಳಿದರು.

ಅವರು ದಿನಾಂಕ 06/11/2023ರ ಸೋಮವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ಶ್ರೀ ಸಾರ್ವಜನಿಕ ಮಹಾಗಣಪತಿ ಮತ್ತು ದುರ್ಗಾದೇವಿ ಉತ್ಸವಕ್ಕೆ ಲೈಟಿಂಗ್ಸ್ ಮತ್ತು ಸೌಂಡ್ ಸಿಸ್ಟಮ್ ಹಾಕಲು ನನಗೆ ಗುತ್ತಿಗೆ ನೀಡಲಾಗಿತ್ತು. ಗಣಪತಿ ವಿಸರ್ಜನೆ ಆದ ಮೇಲೆ ದುರ್ಗಾದೇವಿ ಸಮಿತಿ ಸದಸ್ಯ ಶಂಕರ್ ಎಂಬುವರು ದುರ್ಗಿ ಉತ್ಸವಕ್ಕೆ ಲೈಟಿಂಗ್ಸ್ ಅಳವಡಿಸಲು ಭಗವಾಧ್ವಜ ತೆರವುಗೊಳಿಸಲು ಸೂಚಿಸಿದ್ದರು. ಹಾಗಾಗಿ ನಾನು ಭಗವಾಧ್ವಜ ತೆರವುಗೊಳಿಸಿದ್ದೆ. ಆದರೆ ಗಣಪತಿ ಸಮಿತಿಯವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅವರು ಮಾಡಿದ ತಪ್ಪನ್ನು ತನ್ನ ಮೇಲೆ ಹೊರೆಸಿದ್ದಾರೆ. ಈ ಬಗ್ಗೆ ನಾನು ಯಾವ ದೇವರ ಬಳಿ ಬಂದು ಪ್ರಮಾಣ ಮಾಡಲು ಸಿದ್ಧವಿದ್ದೇನೆ. ದುರ್ಗಿ ಸಮಿತಿಯವರು ಭಗವಾಧ್ವಜ ತೆರವುಗೊಳಿಸಲು ತಿಳಿಸಿಲ್ಲವೆಂದಾದರೆ ಅವರು ಕೂಡ ದೇವರ ಬಳಿ ಬಂದು ಪ್ರಮಾಣ ಮಾಡಬೇಕೆಂದು ತಿಳಿಸಿದರು.

ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಅವಿನಾಶ್ ಮಾತನಾಡಿ, ಬಣಕಲ್‌ನಲ್ಲಿದ್ದ ಗೊಂಬೆ ಕುಣಿತದ ತಂಡವೊಂದನ್ನು ದುರ್ಗಿ ವಿಸರ್ಜನೆಗೆ ಬುಕಿಂಗ್ ಮಾಡಲಾಗಿತ್ತು. ನಂತರ ಆ ತಂಡ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಾರೆಂಬ ಕಾರಣಕ್ಕೆ ಬುಕಿಂಗ್ ರದ್ದುಪಡಿಸಲಾಗಿದೆ. ದುರ್ಗಿ ಉತ್ಸವದಲ್ಲಿ ಭಗವಾಧ್ವಜ ಹಾರಿಸದಿರಲು ಕಾರಣವೇನು? ಕೇಸರಿ ಬಣ್ಣದ ಮೇಲೆ ಅವರಿಗೆ ತಾತ್ಸಾರವೇಕೆ? ಇದನ್ನು ಗಮನಿಸಿದರೆ ಅವರ ಮನಸ್ಥಿತಿ ತಿಳಿಯುತ್ತದೆ. ಹಾಗಾಗಿ ಮೂಡಿಗೆರೆ ಪಟ್ಟಣದಲ್ಲಿ ನವೆಂಬರ್ 24ರಂದು ಸನಾತನ ಧರ್ಮ ಮತ್ತು ಭಗವಾಧ್ವಜದ ಬಗ್ಗೆ ಜನಜಾಗೃತಿ ಮೂಡಿಸಲು ಸನಾತನ ಹಿಂದೂ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *