“ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರು ಕೊಡಲು ನಿರ್ಧಾರ : ತಾಲ್ಲೂಕು ಅಧ್ಯಕ್ಷ ಕರವೇ ಫ್ರಾನ್ಸಿಸ್ ಡಿಸೋಜ.”
1 min read
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಿಎಸ್ಎನ್ಎಲ್ ಕಚೇರಿ ಪಕ್ಕದಲ್ಲಿರುವ ಕಂದಾಯ ಇಲಾಖೆಯಿಂದ ಗುರುತಿಸಿಕೊಟ್ಟ ಜಾಗದಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರ ತೆರೆಯಲು 2019-20ನೇ ಸಾಲಿನಲ್ಲಿ ಅಂದಾಜು 10 ಲಕ್ಷ ಹಣದಿಂದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೋಮವಾರಪೇಟೆ ಮತ್ತು ಗ್ರಾಮ ಪಂಚಾಯಿತಿಯಿಂದ ತೀರ್ಮಾನಿಸಲಾಗಿತ್ತು.
ಈ ಕಟ್ಟಡಕ್ಕೆ ಸರ್ಕಾರದಿಂದ 5 ಲಕ್ಷ ಹಾಗೂ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ 5 ಲಕ್ಷ ಹಣದಿಂದ ಈ ಕಟ್ಟಡ ನಿರ್ಮಿಸಲು ಅಂದಾಜಿಸಲಾಗಿತ್ತು.ಅದೇ ಪ್ರಕಾರ ಕಟ್ಟಡ ನಿರ್ಮಿಸಿ ಎರಡು ವರ್ಷ ಕಳೆದರೂ ಕಟ್ಟಡವನ್ನು ಉದ್ಘಾಟನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಸುಂದರವಾದ ಕಟ್ಟಡ ನಿರ್ಮಾಣವಾಗಿದ್ದರೂ ಕೂಡ ಸುತ್ತಲು ಗಿಡ ಗಂಟಿಗಳು ಬೆಳೆದುಕೊಂಡಿರುತ್ತದೆ ಹಾಗೂ ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಲು ಅಂದಾಜು ವೆಚ್ಚ ಮೂರು ಲಕ್ಷ ಮೀಸಲಿಡಲಾಗಿದೆ. ಆದರೆ ಸುತ್ತಲು ಕಾಂಪೌಂಡು ಇನ್ನೂ ಸಹ ಸರಿಯಾಗಿ ನಿರ್ಮಿಸಿಲ್ಲ.
ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರು ಕೊಡಲು ತೀರ್ಮಾನಿಸಿರುತ್ತೇವೆ ಏಕೆಂದರೆ ಕಟ್ಟಡ ನಿರ್ಮಾಣ ವಾಗಿದ್ದರೂ ಸಹ ಯಾಕೆ ಅಂಗನವಾಡಿ ಕಟ್ಟಡ ಪ್ರಾರಂಭ ಮಾಡಿಲ್ಲ ಹಾಗೂ ಇದೇ ಅಂಗನವಾಡಿ ಜಿಎಂಪಿ ಶಾಲೆ ಶನಿವಾರಸಂತೆಯಲ್ಲಿ 4 ವರ್ಷದಿಂದ ನಡೆಯುತ್ತಿದೆ. ಈ ಅಂಗನವಾಡಿಗೆ ಮಕ್ಕಳು ಗುಂಡುರಾವ್ ಬಡಾವಣೆ ಹಾಗೂ ಕೆ ಆರ್ ಸಿ ಸರ್ಕಲ್ ಮಕ್ಕಳು ಮತ್ತು ಮುಖ್ಯರಸ್ತೆಯ ಮಕ್ಕಳು ಇನ್ನಿತರ ಕಡೆಯಿಂದ ಈ ಅಂಗನವಾಡಿಗೆ ಬರುತ್ತಿದ್ದು, ಆದರೆ ಕಟ್ಟಡ ನಿರ್ಮಾಣವಾಗಿದ್ದರು ಜಿಎಂಪಿ ಶಾಲೆಯಲ್ಲಿ ಯಾಕೆ ಅಷ್ಟು ದೂರ ಸಣ್ಣ ಮಕ್ಕಳು ಹೋಗಬೇಕು ಕರ್ನಾಟಕ ರಕ್ಷಣಾ ವೇದಿಕೆ ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದೇವೆ ಈ ಕಟ್ಟಡವನ್ನು ಇನ್ನು 15 ದಿನದೊಳಗೆ ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲ ಆಗುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಮಾಡುತ್ತಿದ್ದೇವೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮರವರು ಮಾತನಾಡಿ ಈ ಕಟ್ಟಡ ಬೇಗನೆ ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲ ಮಾಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿರುತ್ತಾರೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜರವರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶನಿವಾರಸಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಮನವಿ ಮಾಡುವುದೇನಂದರೆ ಈ ಅಂಗನವಾಡಿ ಕಟ್ಟಡವನ್ನು ಬೇಗನೆ ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕಾಗಿ ಮನವಿ ಒಂದು ವೇಳೆ ತಾವುಗಳು ಈ ಕಟ್ಟಡ ಉದ್ಘಾಟನೆ ಮಾಡಲು ನಿರ್ಲಕ್ಷ್ಯ ವಹಿಸಿದರೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ಕೊಡಲು ಸಿದ್ಧತೆ ನಡೆಸುತ್ತೇವೆ.
✍🏻ಬರಹ ಕೃಪೆ.✍🏻
ಫ್ರಾನ್ಸಿಸ್ ಡಿಸೋಜ.
ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ. 9686095831,9449255831.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




