day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಾನಪದ ಕಲೆಗೆ ನೈಜ ಶಕ್ತಿ ಇದೆ:ಟಿ. ಡಿ. ರಾಜೇಗೌಡ. – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಾನಪದ ಕಲೆಗೆ ನೈಜ ಶಕ್ತಿ ಇದೆ:ಟಿ. ಡಿ. ರಾಜೇಗೌಡ.

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಜಾನಪದ ಕಲೆಗೆ ನೈಜ ಶಕ್ತಿ ಇದೆ:ಟಿ. ಡಿ. ರಾಜೇಗೌಡ.
ಜಾನಪದ ಕಲೆಗೆ ನೈಜವಾದ ಶಕ್ತಿ ಇದೆ ಎಂದು ಶೃಂಗೇರಿ ತಾಲ್ಲೂಕಿನ ಶಾಸಕರಾದ ಟಿ. ಡಿ ರಾಜೇಗೌಡ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು (ರಿ)ಬೆಂಗಳೂರು ಇದರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಜಾನಪದ ಕೋಗಿಲೆ ಶ್ರೀ ಕೆ. ಆರ್ ಲಿಂಗಪ್ಪರವರ ಬದುಕು ಬರಹ ವಿಚಾರ ಸಂಕಿರಣ ಮತ್ತು ಎನ್. ಪುರ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆಗೆ ಈ ನೆಲದ ಗುಣ ಮತ್ತು ಮೌಲ್ಯವನ್ನು ಗಟ್ಟಿಗೊಳಿಸುವ ನೈಜ ಶಕ್ತಿ ಇದೆ.
ಆಧುನಿಕತೆಯ ಜಗತ್ತಿನಲ್ಲಿ ಈ ನೆಲದ ಮೂಲ ಸಂಸ್ಕೃತಿಯಾದ ಜಾನಪದ ಕಲೆಯು ಅವನತಿಯ ಹಂತವನ್ನು ತಲುಪುತ್ತಿದ್ದು ಜಾನಪದ ಕಲೆಯನ್ನು ಜೀವಂತವಿಡುವ ಕಲಾವಿದರ ಬದುಕಿಗೆ ಆಸರೆಯಾಗುವ ಬಗ್ಗೆ ಸಧನದಲ್ಲಿ ಧ್ವನಿಯೆತ್ತುವ ಪಕ್ರಿಯೆ ಜನಪ್ರತಿನಿದಿಗಳಾದ ನಮ್ಮಿಂದಲೇ ಶುರುವಾಗಲಿ ಎಂದು ಜಾನಪದ ಕಲಾವಿದರಿಗೆ ಭರವಸೆನೀಡಿದರು.
ಕಾರ್ಯಕ್ರಮದ ಪ್ರಧಾನ ಭಾಷಣಕಾರರಾಗಿ ಉಪನ್ಯಾಸವನ್ನು ನೀಡಿದ ಜಾನಪದ ತಜ್ಞರಾದ ಡಾ ಬಸವರಾಜ ನೆಲ್ಲಿಸರ ಮಾತನಾಡಿ ಜಾನಪದ ಸಂಸ್ಕೃತಿ ಈ ನೆಲದ ತಾಯಿಬೇರು ಎಂದರು.
ಜಾನಪದ ಕಲೆ ಅನ್ನೋದು ಕೇವಲ ಹಾಡು ಮತ್ತು ನೃತ್ಯಕ್ಕೆ ಸೀಮಿತವಾದುದಲ್ಲ.
ಜಾನಪದ ಅನ್ನೋದು ಈ ನೆಲದ ಸತ್ವ ಈ ನಾಡಿನ ಜನರ ಜೀವನ ಪದ್ಧತಿಯಾಗಿದೆ.
ಈ ನೆಲದ ಮೂಲ ಸಂಸ್ಕೃತಿಯು ಕೇವಲ ಮನರಂಜನೆಗೆ ಮಾತ್ರವೇ ಸೀಮಿತವಾಗದೆ ಜಾನಪದ ಕಲೆಯನ್ನು ಅಭಿವ್ಯಕ್ತಿ ಪಡಿಸಿ ಮುಂದುವರಿಸುತ್ತಿರುವ ಜಾನಪದ ಕಲಾವಿದರ ಬದುಕನ್ನು ಅಭಿವೃದ್ಧಿಪಡಿಸುವಲ್ಲಿ ಜನಪ್ರತಿನಿದಿಗಳು ನಮ್ಮನ್ನು ಆಳುವ ಸರ್ಕಾರಗಳು ಕಡೆಗಣಿಸಿವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎನ್ ಆರ್ ಪುರ ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ ನ ನೂತನ ತಾಲ್ಲೂಕು ಅಧ್ಯಕ್ಷರಾಗಿ ಮುಡಬ ದ ಡಾ ಹೆಚ್. ಸಿ. ಈಶ್ವರನಾಯಕ್ ಅಧಿಕಾರವನ್ನು ಸ್ವೀಕಾರ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ. ಬಿ ಸುರೇಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ಎನ್ ಆರ್ ಪುರ ಪುರ ಸಭೆಯ ಅಧ್ಯಕ್ಷರಾದ ಜುಬೇದ, ಮುತ್ತಿನಕೊಪ್ಪ ಗ್ರಾಮಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕೀರ್ತಿನಾಗರಾಜ್, ಜಿಲ್ಲಾ ಕಾಂಗ್ರೆಸ್ ಚಿಕ್ಕಮಗಳೂರು ಅಧ್ಯಕ್ಷರಾದ ಡಾ. ಕೆ. ಪಿ ಅಂಶುಮಂತ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬಾ ರಾಘವೇಂದ್ರ, ಎನ್ ಆರ್. ಪುರ ಪಟ್ಟಣಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಬೋರೆಲಿಂಗಯ್ಯ, ಯೋಗೀಶ ಒಡಿಯಾಲ, ಬಕ್ಕಿ ಮಂಜುನಾಥ.
ಮಗ್ಗಲಮಕ್ಕಿಗಣೇಶ್ .ಡಾ.
ಎಚ್. ಸಿ. ಈಶ್ವರ್ ನಾಯಕ್ ರವರ ಕುಟುಂಬದವರು ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಎಚ್ ಸಿ. ಈಶ್ವರನಾಯಕ್ ರವರ ಮನೆಯಂಗಳದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ನಿರೂಪಣೆ ಮಹೇಶ್ ನೆರವೇರಿಸಿಕೊಟ್ಟರು.
ಸಂಜೆ ಜಾನಪದ ಕಾರ್ಯಕ್ರಮ ನಡೆಯಿತು.

ಬರಹ ಕೃಪೆ :
ಹೆಸಗಲ್ ವೆಂಕಟೇಶ್.

ವರದಿ :ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.
ಅವಿನ್ ಟಿವಿ.

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author