day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಜ್ಞಾನ ಸಂಪಾದನೆಗೆ ಶಾಲಾ ಕಲಿಕೆ ಅಗತ್ಯ* – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಜ್ಞಾನ ಸಂಪಾದನೆಗೆ ಶಾಲಾ ಕಲಿಕೆ ಅಗತ್ಯ*

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಜ್ಞಾನ ಸಂಪಾದನೆಗೆ ಶಾಲಾ ಕಲಿಕೆ ಅಗತ್ಯ*
ಕೃಷಿ ಅನುಭವಕ್ಕೆ ರೈತರೊಡಗಿನ ಒಡನಾಟ ಆತ್ಯಗತ್ಯ. ಇದರ ಅನುಸಾರ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆಯ ವಿದ್ಯಾರ್ಥಿಗಳು ಕಳೆದ 3 ವರ್ಷದಿಂದ 4 ಗೋಡೆಯ ನಡುವಿನ ಕಲಿಕೆಯನ್ನು , ಈಗ ಕೊನೆ ವರ್ಷದಲ್ಲಿ ರೈತರ ಜೊತೆಯಲ್ಲಿ ಕಳೆದು ಹಳ್ಳಿಯ ಅನುಭವ ಪಡೆಯುವ ಸಮಯ. ಈ ಅನುಭವ ಪಡೆಯಲು ಒಂದು ಗುಂಪಿನ ವಿದ್ಯಾರ್ಥಿಗಳಿಗೆ ನೀಡಿದ ಜಾಗ ಅಂಬಳೆ ಸಮೀಪದ ಕೋಡಿಹಳ್ಳಿ ಮತ್ತು ಹೆಜ್ಜಿಗೆನಹಳ್ಳಿ. ವಿದ್ಯಾರ್ಥಿಗಳು ತಿಳಿಸಿರುವಹಾಗೆ “ಗ್ರಾಮೀಣ ತೋಟಗಾರಿಕಾ ಕಾರ್ಯನುಭವ ಶಿಬಿರದಲ್ಲಿ ಇದ್ದ ನಮಗೆ ರೈತರೊಡನೆ ವಿಚಾರ ಹಂಚಿಕೊಳ್ಳುವ ಸುವರ್ಣ ಅವಕಾಶ ಇದಾಗಿತ್ತು”. ರೈತರು ಅನುಸರಿಸುತ್ತಿದ್ದ ದಶಕದ ಸಾoಪ್ರದಾಯಿಕ ಪದ್ಧತಿಗಳು , ಪಟ್ಯ ಪುಸ್ತಕದಲ್ಲೂ ಸಿಗದ ಅವರ ಅನುಭವದ ಮಾತುಗಳು, ಬೆಳೆ ಬೆಳೆಯುವ ರೀತಿ, ರೋಗ ಕೀಟ ನಿಯಂತ್ರಣ ವಿಧಾನಗಳು ಪ್ರಸ್ತುತ ವಿಜ್ಞಾನಕ್ಕೆ ಪಾಠ ಮಾಡುವ೦ತಿತ್ತು . ಆದರೂ ರೈತರಿಗೆ ಈಗಿನ ತಂತ್ರಜ್ಞಾನಗಳೂ , ಇತರ ವೈವಿಧ್ಯಮಯ ಬೆಳೆಗಳು , ಅವುಗಳ ಶೇಖರಣೆ , ಕೊಯ್ಲುತ್ತರ ಉತ್ಪನ್ನಗಳ ಮಾಹಿತಿ ನೀಡುವುದು ವಿದ್ಯಾರ್ಥಿಗಳ ಗುರಿಯಾಗಿತ್ತು . ಇದರ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಹಿಸಿದ್ದು , ಮಾಹಿತಿ ಕೇಂದ್ರದ ಸ್ಥಾಪನೆ , ಬೆಳೆ ಪ್ರಾತ್ಯಕ್ಷಿಕೆ ಘಟಕ, ಬೀದಿ ನಾಟಕ ,ಮಣ್ಣು ಹಾಗೂ ಪಶು ಆರೋಗ್ಯ ಶಿಬಿರ , ರೈತ ಕ್ರೀಡೆ , ಬೆಳೆಗಳ ವಿಚಾರಗೋಷ್ಠಿ , ಗುಂಪು ಚರ್ಚೆ, ಪದ್ಧತಿ ಪ್ರಾತ್ಯಕ್ಷಿಕೆ ಹಾಗೂ ಕೃಷಿ ಸಂಬಂಧಿತ ವಸ್ತು ಪ್ರದರ್ಶನ. ಇದರನ್ವಯ ಮೊದಲ ವಾರದಲ್ಲಿ ರೈತ ಮಾಹಿತಿ ಕೇಂದ್ರದ ತಯಾರಿ ನಡೆಸಿದ್ದರು. ಇದರಲ್ಲಿ ರೈತರಿಗೆ ಉಪಯುಕ್ತವಾಗುವ ತೋಟಗಾರಿಕೆಯ 5 ಕಲಿಕ ವಿಭಾಗಗಳಾದ ತರಕಾರಿ ವಿಜ್ಞಾನ, ಹಣ್ಣು ವಿಜ್ಞಾನ, ಪುಷ್ಪ ವಿಜ್ಞಾನ, ತೋಟ, ಔಷಧಿಯ ಹಾಗೂ ಸುಗಂಧ ಬೆಳೆಗಳ ಜೊತೆ ಕೊಯ್ಲೂತ್ತರ ಉತ್ಪನ್ನಗಳ ಬಗೆಗಿನ ಮಾಹಿತಿಗಳನ್ನು ಒಳಗುಡಿಸಿದ್ದರು. ಇದರ ಉದ್ಘಾಟನೆಯನ್ನು ದಿನಾಂಕ 17/11/21 ರಂದು ನಡೆಸಿದ್ದು , ಅದರ ಉದ್ಘಾಟನೆಗೆಂದು ಕಾಲೇಜಿನ ಡೀನ್ ಡಾ/ ನಾರಾಯಣ ಎಸ್ ಮಾವರ್ಕರ್ ಆಗಮಿಸಿದ್ದರು. ಇದರ ಉದ್ಘಾಟನೆಯನ್ನು ಹಳ್ಳಿಯ ವಾತಾವರಣಕ್ಕೆ ಸರಿದೂಗುವಂತೆ ಮಾವಿನ ತೂರಣಗಳನ್ನು ಕಟ್ಟಿ. “ಮೇಧಿನಿ” ಎಂಬ ಹೆಸರಿನ ಮಾಹಿತಿ ಕೇಂದ್ರ ವನ್ನು ಉದ್ಘಾಟಿಸಲಾಯಿತು . ವಿದ್ಯಾರ್ಥಿಗಳು ಪ್ರತಿದಿನವೂ ರೈತರ ಹೊಲಕ್ಕೆ ಭೇಟಿ ನೀಡಿ ಅವರ ಅನುಭವ ಹಾಗೂ ತಮ್ಮೊಳಗಿನ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಗುಂಪು ಚರ್ಚೆ , ಪದ್ಧತಿ ಪ್ರಾತ್ಯಕ್ಷಿಕೆ ರೀತಿಯ ಯಾವುದೇ ಕಾರ್ಯಕ್ರಮಕ್ಕೆ ರೈತರನ್ನು ಹಾಗೂ ಅವರ ಮನೆಯ ಸದಸ್ಯರನ್ನು ಕರೆಯುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ನಗರ ಜೀವನವನ್ನೇ ನೋಡಿದ ಎಷ್ಟೋ ವಿದ್ಯಾರ್ಥಿಗಳಿಗೆ ಇದೊಂದು ವಿಭಿನ್ನ ಅನುಭವವೇ ಸರಿ. ರೈತನೊಂದಿಗೆ ತಾನು ಒಬ್ಬ ರೈತನಾಗಿ ಹಳ್ಳಿಯ ಸೊಗಡಿನಲ್ಲಿ ತನ್ನ ಜೀವನವನ್ನು ಕಳೆಯುತ್ತಿರುವ ಈ ಸಮಯ ಮರೆಯಲು ಅಸಾಧ್ಯ ಹಾಗೂ ವಿದ್ಯಾರ್ಥಿಗಳಾದ ನಾವು ನೀಡುವ ವಿಚಾರ ವಿನಿಮಯ ಅದೆಷ್ಟು ಅವರಿಗೆ ಉಪಯೋಗವಾಯಿತೋ ನಮಗೆ ತಿಳಿಯದು ಆದರೆ ಅವರಿಂದ ಸಿಕ್ಕಂತಹ ಈ ಅಮೂಲ್ಯ ಜ್ಞಾನದಿಂದ ನಾವು ಚಿರಸ್ಮರಣೀಯರಾಗಿರುತ್ತವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author