day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಮೂಡಿಗೆರೆ ಬಹುಜನ ಸಮಾಜ ಪಕ್ಷದ ವತಿಯಿಂದ ಕಾಂನ್ಸಿರಾಮ್ ಜೀ ಯವರ 15ನೇ ಪುಣ್ಯ ಸ್ಮರಣೆ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಮೂಡಿಗೆರೆ ಬಹುಜನ ಸಮಾಜ ಪಕ್ಷದ ವತಿಯಿಂದ ಕಾಂನ್ಸಿರಾಮ್ ಜೀ ಯವರ 15ನೇ ಪುಣ್ಯ ಸ್ಮರಣೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮೂಡಿಗೆರೆ ಬಹುಜನ ಸಮಾಜ ಪಕ್ಷದ ವತಿಯಿಂದ ಕಾಂನ್ಸಿರಾಮ್ ಜೀ ಯವರ 15ನೇ ಪುಣ್ಯ ಸ್ಮರಣೆಯನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು*
ಮೂಡಿಗೆರೆ ಪ್ರವಾಸಿ ಮಂದಿರದಿಂದ ಬೈಕ್ ಜಾತಾ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಆನಂತರ ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಒಂದು ಕಾರ್ಯಕ್ರಮದಲ್ಲಿ ಪ್ರಾಸ್ತ್ರವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿಹಾಗೂ ಮೂಡಿಗೆರೆ ಉಸ್ತುವಾರಿ ಪಿ ಕೆ ಮಂಜುನಾಥ್ ಮಾತನಾಡಿ -ಕಾಂನ್ಸಿರಾಮ್ ಜೀ ಯವರ ರಾಜಕೀಯ ಚಿಂತನೆಗಳು ಪ್ರಸ್ತುತ ರಾಜಕೀಯಕ್ಕೆ ಯಾವ ರೀತಿಯಲ್ಲಿ ಪ್ರಸ್ತುತವಾಗುತ್ತವೆ ಹಾಗೂ bsp ಅನಿವಾರ್ಯ ನಮಗೆ ಏಕಿದೆ ಎಂಬುವ ವಿಚಾರಗಳನ್ನು ತಿಳಿಯ ಬೇಕಾದ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ ಆ ಕಾರಣಕ್ಕಾಗಿ ಇಂದು ನಾವೆಲ್ಲರೂ ಸೇರಿದ್ದೇವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ b s p ರಾಜ್ಯ ಪ್ರಧಾನ ಕಾರ್ಯದರ್ಶಿ, ಜಾಕಿರ್ ಹುಸೇನ್ ಮಾತನಾಡಿ -ಕಾಂನ್ಸಿರಾಮ್ ಜೀ ಯವರು ಈ ದೇಶ ಕಂಡ ಶ್ರೇಷ್ಠ ರಾಜಕೀಯ ತಜ್ಞ ಅಂಬೇಡ್ಕರ್ ರವರ ರಾಜಕೀಯ ಚಿಂತನೆಗಳನ್ನು ಬಹುಜನ ಸಮಾಜ ಪಕ್ಷ ಕಟ್ಟುವ ಮೂಲಕ ಒಬ್ಬ ಹೆಣ್ಣು ಮಗಳನ್ನ ಸುದೀರ್ಘವಾಗ 4ಬಾರಿ ಈ ದೇಶದಲ್ಲೀ ಬೃಹತ್ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಡುವ ಮೂಲಕ ಅಂಬೇಡ್ಕರ್ಗಿಂತ ಒಂದೆಜ್ಜೆ ಹೋದ ಕೀರ್ತಿ ಸಲ್ಲುತ್ತದೆ ಎಂದರು ಅಲ್ಲದೆ ಮುಂದುವರೆದು ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು ಹಾಗೂ ಸಾಮನ್ಯ ವರ್ಗ, ಕೂಲಿಕಾರ್ಮಿಕರ ಬದುಕು ಮೂರಬಟ್ಟೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಕ್ಷದ ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ ಮಾತನಾಡಿ -ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಪಕ್ಷ ಅಂದರೆ ಅದುವೇ ನಮ್ಮ bsp ಪಕ್ಷ ಕಾಂನ್ಸಿರಾಮ್ ಅವರ ಕಾರ್ಯ ಸಾಧನೆ ನಮ್ಮೆಲ್ಲರಿಗೂ ಪ್ರೇರಣಾ ಶಕ್ತಿ ಅದು, ಈ ದೇಶದಲ್ಲಿ ಭ್ರಷ್ಟ ಹಾಗೂ ಧೋರಣೆ ನಡೆಯುತ್ತಿದೆ ಇಂತಹ ಸರ್ಕಾರಕ್ಕೆ ಸವಾಲು ಒಡ್ದುವ ತಾಕತ್ತು bsp ಗೆ ಮಾತ್ರ ಇರುವುದು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ವಕೀಲರು ಆದ ಪರಮೇಶ್ ಮಾತನಾಡಿ -ಇವತ್ತಿನ ಜನರಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಮತದಾನದ ಜಾಗೃತಿ ಇಲ್ಲದಿರುವುದು ಜನ ವಿರೋಧಿ ಪಕ್ಷ ಅಧಿಕಾರದಲ್ಲಿರುವುದು ಎಂದರು, “ಓಟು ನಮ್ಮದು ಸೀಟು ನಿಮ್ಮದು ನಡೆಯೋದಿಲ್ಲ ನಡೆಯೋದಿಲ್ಲ “ಎಂದು ಕರೆ ಕೊಡುವ ಮೂಲಕ ಉತ್ತರ ಪ್ರದೇಶದಲ್ಲಿ ಅಧಿಕಾರ ನಡೆಸಲಾಗಿತ್ತು. ಎಂದರು.
ಜಿಲ್ಲಾ ಮುಖಂಡ ಮರಗುಂದ ಪ್ರಸನ್ನ ಗೌಡ ಮಾತನಾಡಿ -ಇಂದು ಅಧಿಕಾರ ಮಾಡುವ ಎಲ್ಲ ಪಕ್ಷಗಳು ಕೂಡ ಪ್ರಣಾಳಿಕೆಯಲ್ಲಿ ಸುಳ್ಳು ಸುಳ್ಳು ಅಂಶಗಳನ್ನು ಸೇರಿಸಿ ಜನರನ್ನು ವಂಚಿಸಿ ಅಧಿಕಾರ ಹಿಡಿಯುವಲ್ಲೀ ಮುಂದಾಗುತ್ತವೆ ಆದರೆ ಯಾವುದೇ ಪ್ರಣಾಳಿಕೆ ಇಲ್ಲದೆ ಸಮಾಸಮಾಜದ ನಿರ್ಮಾಣ ಸಂವಿಧಾನದ ಆಶಯಗಳನ್ನು ಯತವತ್ತಾಗಿ ಜಾರಿ ಮಾಡುತ್ತೇವೆ ಎಂದು ಚುನಾವಣೆಗೆ ಸ್ಪರ್ದಿಸುವ ಏಕೈಕ ಪಕ್ಷ ನಮ್ಮ bsp ಪಕ್ಷ ಈ ಪಕ್ಷವನ್ನು ದೇಶದ ಎಲ್ಲ ಜನ ಬೆಂಬಲಿಸಬೇಕು ಎಂದರು. ಜಿಲ್ಲಾ ಸಹೋದರತ್ವ ಸಮಿತಿಯ ಜಿಲ್ಲಾಧ್ಯಕ್ಷೆ ಸುಧಾ ಮಾತನಾಡಿ -ಮಹಿಳೆಯನ್ನು ಗೌರವಿಸುವ ಮಹಿಳೆಗೂ ಕೂಡ ಸಮಾನವಾದ ಅವಕಾಶ ಕೊಡುವ ಯಾವುದಾದರು ಒಂದು ಪಕ್ಷ ಇದ್ದರೆ ಅದು bsp ಮಾತ್ರ ಅಲ್ಲದೆ ಈ ಪಕ್ಷವನ್ನು ಕೇವಲ ಒಂದು ಜಾತಿಗೆ ಸೀಮಿತ ಎಂಬಂತೆ ಮನುವಾದಿಗಳು ಎಲ್ಲ ಜನರಲ್ಲಿ ತುಂಬುತ್ತಿರುವುದು ತುಂಬಾ ವಿಷಾದನೀಯ ಎಲ್ಲ ಸಮುದಾಯಗಳು ಈ ಪಕ್ಷದಲ್ಲಿ ಇದ್ದಾರೆ ಎಂದರು. ಮುಂದೆ ಬರುವ ಸ್ಥಳೀಯ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ bsp ಯ ಶಕ್ತಿಯನ್ನು ತೋರಿಸಲು ಕಾರ್ಯಕರ್ತರೆಲ್ಲ ಸಜ್ಜಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಷೇತ್ರ ಸಮೀತಿ ಅಧ್ಯಕ್ಷ ಎಲ್. ಬಿ ರಮೇಶ್ -ನಮ್ಮ ಪಕ್ಷದಲ್ಲಿ ಪ್ರತಿ ಭೂತ್ ಮಟ್ಟದಲ್ಲೂ ಕಾರ್ಯಕರ್ತ ಪಡೆಯಿದ್ದು ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಾವುಗಳು ಸಜ್ಜಗಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲೀ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್ ಹಾಗೂ ತಂಡದವರಿಂದ ಭೀಮಗೀತೆ ಜನರನ್ನು ರಂಜಿಸಿದವು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಜಾಕಿರ್ ಆಲಿಖಾನ್, ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ, ಜಿಲ್ಲಾ ಉಪಾಧ್ಯಕ್ಷರು ಬಿ ಎಂ ಶಂಕರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಗಂಗಾಧರ್,ಜಿಲ್ಲಾ ಮುಖಂಡ ರಾಹುಫ್ ಖಾನ್, ಬಿ ವಿ ಎಫ್ ನ ಜಿಲ್ಲಾ ಸಂಯೋಜಕರು ರಾಮು, ಬೆಟ್ಟಗೆರೆ ಗ್ರಾಮ. ಪಂಚಾಯಿತಿ ಅಧ್ಯಕ್ಷೆ ಸುಶೀಲಾ, ಶಶಿಕಲಾ, ಹೂವಮ್ಮ ಅಲ್ದುರ್ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್,ಕೋಳೂರು ಕುಮಾರ್, ಕ್ಷೇತ್ರ ಸಮಿತಿಯ ಉಸ್ತಾವರಿ ವಸಂತ್, ತಾಲ್ಲೂಕು ಮುಖಂಡ b. J ರವಿ, ಎಂ ಡಿ ಶಂಕರ್, ಮಂಜಯ್ಯ,ಹರೀಶ್ ಮಿತ್ರ, ಮಂಜುಳಾ,ನಾಗೇಶ್,ದಿನೇಶ್, ಹೊನ್ನೇಶ್, ಸುರೇಶ್, ಕಳಸ ಚಲ್ಲು, ಮಂಜುನಾಥ್, ಬಿ ವಿ ಎಫ್ ನ ಜಯಪಾಲ್, ಅಭಿಜಿತ್, ನವೀನ್, ಬಕ್ಕಿ ರವೀಂದ್ರ. ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಶ್ರೀಕಾಂತ್, ವಂದನಾರ್ಪಣೆ ಜಯಪಾಲ್, ಹಾಗೂ ಕಾರ್ಯಕ್ರಮದ ನಿರೂಪಣೆ ಪ್ರಧಾನ ಕಾರ್ಯದರ್ಶಿ ಉದುಸೆ ಮಹೇಶ್ ನಿರ್ವಹಿಸಿದರು.

ಬರಹ ಕೃಪೆ.
ಬಕ್ಕಿಮಂಜು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author