day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದೇವಸ್ಥಾನಗಳನ್ನು ಉಳಿಸಲು ಹಿಂದೂಪರ ಕಾರ್ಯಕರ್ತರು ಸಂಸದರಿಗೆ ಮುತ್ತಿಗೆ – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ದೇವಸ್ಥಾನಗಳನ್ನು ಉಳಿಸಲು ಹಿಂದೂಪರ ಕಾರ್ಯಕರ್ತರು ಸಂಸದರಿಗೆ ಮುತ್ತಿಗೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದೇವಸ್ಥಾನಗಳನ್ನು ಉಳಿಸಲು ಹಿಂದೂಪರ ಕಾರ್ಯಕರ್ತರು ಸಂಸದರಿಗೆ ಮುತ್ತಿಗೆ
ಮೂಡಿಗೆರೆ: 16 ಸೆಪ್ಟಂಬರ್

ಮೂಡಿಗೆರೆ ಪಟ್ಟಣದಲ್ಲಿ ಸಂಸದ ಪ್ರತಾಪ್‌ಸಿಂಹ ಅವರ ಪತ್ನಿ ಡಾ.ಅರ್ಪಿತಾ ಸಿಂಹ ಅವರ ಹೊಯ್ಸಳ ಹೆಲ್ತ್ಕೇರ್ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಾಪ್‌ಸಿಂಹ ಹಾಗೂ ಮತ್ತೊರ್ವ ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮ ಮುಗಿಸಿ ತೆರಳುತ್ತಿರುವ ಸಂದರ್ಭದಲ್ಲಿ ಪಟ್ಟಣದ ಬಸ್ ನಿಲ್ದಾಣದ ಎದುರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ದಿಢೀರ್ ಎಂಬAತೆ ಮುತ್ತಿಗೆ ಹಾಕಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಇಬ್ಬರು ಸಂಸAದರು ತೆರೆಳುತ್ತಿರುವಾಗ ಅಡ್ಡಗಟ್ಟಿದ ಹಿಂದೂಪರ ಕಾರ್ಯಕರ್ತರು ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣಕ್ಕೆ ಸಂಬAಧ ಕಪ್ಪು ಪಟ್ಟಿ ಧರಿಸಿ ಮೈಸೂರಿನಲ್ಲಿ ದೇವಸ್ಥಾನ ಕೆಡವಲು ಬಿಡಬಾರದಿತ್ತು. ಅಧಿಕಾರಿಗಳು ವಿರೋಧ ಪಕ್ಷಗಳ ಏಜೆಂಟರAತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ಸರಕಾರ ಆಡಳಿತದಲ್ಲಿದ್ದರೂ ದೇವಸ್ಥಾನ ರಕ್ಷಿಸಲು ಸಾಧ್ಯವಾಗದಿರುವುದು ದುರಾದೃಷ್ಟ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂಸದರ ಎದುರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಗಲಭೆ ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಇಬ್ಬರೂ ಸಂಸದರು ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
***
ಫೋಟೊ ೧೬ಎಂಡಿಜಿ-ಪಿ೧: ಮೂಡಿಗೆರೆ ಪಟ್ಟಣದಲ್ಲಿ ಸಂಸದರಾದ ಪ್ರತಾಪ್‌ಸಿಂಹ ಹಾಗೂ ತೇಜಸ್ವಿ ಸೂರ್ಯ ಅವರನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
**

ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಂಸದರು: (ಬಾಕ್ಸ್ ನ್ಯೂಸ್)
ಸುಪ್ರೀಂ ಕೋರ್ಟ್ನ ಆದೇಶ ಮಾಧ್ಯಮಗಳ ಗಮನಕ್ಕೆ ತಂದಿದೇವೆ. ತುಂಬಾ ಕಡೆ ದೇವಸ್ಥಾನಗಳನ್ನು ಏಕಾಏಕಿ ತಾಲೂಕು, ಜಿಲ್ಲಾಡಳಿತ ನೆಲಸಮ ಮಾಡಿದ್ದರಿಂದ ರಾಜ್ಯಾಧ್ಯಂತ ಭಕ್ತರಿಗೆ ನೋವುಂಟು ಮಾಡಲಾಗಿದೆ. ಇಂತಹ ನೋವಿಗೆ ಸ್ಪಂದಿಸುವ ಮನಸ್ಥಿತಿ ಮುಖ್ಯಮಂತ್ರಿಗಳಿಗೆ ಇದೆ. ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹಿಂದೆ ಯಾರು ವಿರೋಧಿಸಿದ್ದರು, ನಾವೇ ನೆಲಸಮ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆಂದು ಹೇಳಿದ್ದಾರೋ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರು ಹಾಗೆಯೇ ಮಾತನಾಡುವುದು ಸಹಜ. ಕೋವಿಡ್‌ನಿಂದಾಗಿ ಜನರ ಪ್ರಾಣ ರಕ್ಷಣೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನ ವಿಶ್ವಾಸ ಇಟ್ಟಿದ್ದಾರೆ. ಇತ್ತೀಚೆಗೆ ಬೆಳಗಾಂನಲ್ಲಿ ನಡೆದಿರುವ ಮಹಾನಗರ ಪಾಲಿಕೆ, ಗುಲ್ಬರ್ಗ, ದಾರವಾಡದಲ್ಲಿ ನಡೆದ ಚುನಾವಣೆಯಲ್ಲಿ ಜನ ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ:- ಪ್ರತಾಪ್‌ಸಿಂಹ, ಸಂಸದರು.
***
ರಾಜ್ಯದ ಎಲ್ಲಾ ಮಂದಿರಗಳು ಉಳಿಯಬೇಕೆಂಬುದೇ ಸಮಸ್ತ ಹಿಂದೂ ಹಾಗೂ ಭಕ್ತರ ಭಾವನೆಯಾಗಿದೆ. ಇದನ್ನು ರಾಜ್ಯ ಸರಕಾರ ಪ್ರೋತ್ಸಾಹಿಸಬೇಕೆಂಬ ನಿಲುವು ಯುವಮೋರ್ಚದ್ದಾಗಿದೆ. ಅದೇ ನಿಟ್ಟಿನಲ್ಲಿ ಹಿಂದೂಗಳ ಭಾವನೆಗೆ ದಕ್ಕೆಯಾಗದಂತೆ ದೇವಸ್ಥಾನ ರಕ್ಷಿಸಲು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುವ ನಂಬಿಕೆಯಿದೆ. ಇಂತಹ ಹೊತ್ತಲ್ಲಿ ರಾತ್ರೋರಾತ್ರಿ ಮಂದಿರದ ಮೇಲೆ ಪ್ರೀತಿ ಉಕ್ಕಿಸಿಕೊಂಡು ಆಷಾಡಭೂತಿತನ ತೋರಿಸುತ್ತಿರುವ ಕಾಂಗ್ರೆಸ್‌ನ ನಾಟಕ ಜನ ನಂಬುವುದಿಲ್ಲ. ಇಷ್ಟು ವರ್ಷ ಅವರು ಯಾರ್ಯಾರನ್ನು ಪೂಜೆ ಮಾಡಿದ್ದಾರೆ, ಆರಾಧಿಸಿದ್ದಾರೆ, ಮೂರ್ತಿ ಬಂಜಕರಾಗಿರುವAತಹ ಟಿಪ್ಪುಸುಲ್ತಾನ್ ಜಯಂತಿಯನ್ನು ಯಾರು ಆಚರಣೆ ಮಾಡಿದ್ದಾರೆಂದು ಜನರು ಗಮನಿಸಿದ್ದಾರೆ. ಇದರ ನಡುವೆ ಮಂದಿರ ರಕ್ಷಣೆ ಮಾಡುವ ಹೋರಾಟದಲ್ಲಿ ಪಾಲ್ಗೊಂಡು ಲಾಭ ಪಡೆಯಲು ಹೊರಟಿದ್ದಾರೆ. ಈ ನಾಟಕ ಆಡುವುದನ್ನು ನಿಲ್ಲಿಸಬೇಕು;- ತೇಜಸ್ವಿ ಸೂರ್ಯ, ಸಂಸದರು.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್ ಅವಿನ್ ಟಿವಿ

Career | job

Navachaitanya Old Age Home

About Author