day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸರ್ಕಾರ ಸತ್ತುಹೋಗಿ ವರ್ಷಗಳೇ ಕಳೆದಿದೆ ಅಂತ ಗೊತ್ತಿದ್ರು,ಕೊರೊನ ಮಾರ್ಗಸೂಚಿ ಮಾಸ್ಕ್,ಸಾಮಾಜಿಕ ಅಂತರ,ಸಾಮಾಜಿಕರೆ ಕಾಳಜಿ ಮಾಡಿಕೊಳ್ಳಬೇಕು.#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಸರ್ಕಾರ ಸತ್ತುಹೋಗಿ ವರ್ಷಗಳೇ ಕಳೆದಿದೆ ಅಂತ ಗೊತ್ತಿದ್ರು,ಕೊರೊನ ಮಾರ್ಗಸೂಚಿ ಮಾಸ್ಕ್,ಸಾಮಾಜಿಕ ಅಂತರ,ಸಾಮಾಜಿಕರೆ ಕಾಳಜಿ ಮಾಡಿಕೊಳ್ಳಬೇಕು.#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸರ್ಕಾರ ಸತ್ತು ಹೋಗಿದೆ

ಸರ್ಕಾರ ಸತ್ತುಹೋಗಿ ವರ್ಷಗಳೇ ಕಳೆದಿದೆ ಅಂತ ಗೊತ್ತಿದ್ರು , ಕೊರೊನ ಮಾರ್ಗಸೂಚಿ ಪಾಲಿಸದೆ ಬೇಕಾಬಿಟ್ಟಿ ಅಲೆದಾಡಿ , ಮಾಸ್ಕ್ ,ಸಾಮಾಜಿಕ ಅಂತರ, ಸ್ವಚ್ಛತೆ ಯಾವುದನ್ನು ಪಾಲಿಸದೆ ಕೊರೊನ ಎರಡನೇ ಅಲೆಗೆ ನಾವೇ ಕಾರಣರಾಗಿ ಈಗ ಅದಿಲ್ಲ ಇದಿಲ್ಲ ಸರ್ಕಾರ ಅದುಕೊಡ್ತಿಲ್ಲ ಇದು ಕೊಡ್ತಿಲ್ಲ ಅಂತ ಕೂಗಾಡೋದನ್ನ ಮೊದ್ಲು ನಿಲ್ಸೋಣ. ಇಲ್ಲಿ ಮಾತ್ರ ಅಲ್ಲ ಬಹಳಷ್ಟು ರಾಜ್ಯಗಳಲ್ಲಿ ಮತ್ತು ಅಮೇರಿಕ ಇಂಗ್ಲೆಂಡ್ ನಂತಹ ರಾಷ್ಟ್ರಗಳಲ್ಲೆ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ಸಿಗದೆ ಒದ್ದಾಡುತ್ತಿವೆ. ಓಟು ಹಾಕುವಾಗ ನೋಟು ಬೇಕು, ಆಮೇಲೆ ಎಲ್ಲಾ ಪುಕ್ಸಟ್ಟೆನೆ ಬೇಕು , ನಮಗೇನು ಸಾಮಾಜಿಕ ಜವಾಬ್ದಾರಿನೆ ಇಲ್ಲ , ಎಲ್ಲಾ ಸರ್ಕಾರಗಳೇ ಮಾಡ್ಬೇಕು ಅನ್ನೋ ಕಿತ್ತೊಗಿರೋ ಮನಸ್ಥಿತಿಗಳಿಂದ ಹೊರಗೆ ಬರೋಣ. ನಮ್ಮ ಕಾಳಜಿ ನಾವೇ ಮಾಡಿಕೊಳ್ಳಬೇಕು. ಕೊರೊನಾದಲ್ಲೂ ಪಕ್ಷವನ್ನ ಹುಡುಕುವ ನಮ್ಮ ನಾಲಾಯಕ್ಕೂ ಕಂದಾಯಸಚಿವರಂತಾಗದೆ, ಸಧ್ಯಕ್ಕೆ ಮಹಾಮಾರಿಯಿಂದ ನಾವು ಬದುಕುಳಿದು , ನಮ್ಮ ಸುತ್ತಲಿನವರನ್ನು ಬದುಕುಳಿಸಬೇಕಾಗಿದೆ. ಮಾಸ್ಕ್ ಸ್ಯಾನಿಟೈಝರ್ ಅವಶ್ಯಕತೆಯಿದ್ದು ಕೊಳ್ಳಲು ಹಣವಿಲ್ಲದಿರುವವರ್ಯಾರಾದರೂ ನಮ್ಮ ಸುತ್ತ ಮುತ್ತ ಇದ್ದಲ್ಲಿ ಅಂತಹವರಿಗೆ ನೆರವಾಗೋಣ.
ಆ ಧರ್ಮ ಈ ಧರ್ಮ ಅಂತೇನಿಲ್ಲ, ರಂಜಾನ್ ಕುಂಭಮೇಳ ಜಾತ್ರೆ ಹಬ್ಬ ಗುಂಪು ನಮಾಜ್ , ಚರ್ಚ್ ಪ್ರಾರ್ಥನೆ, ರಾಜಕೀಯ ಸಮಾವೇಶ ಎಲ್ಲವನ್ನು ಬಿಟ್ಟುಬಿಡಿ. ನಮ್ಮನ್ನು ನಮ್ಮ ಸುತ್ತಲಿರುವವವರನ್ನು ನಾವೇ ಕಾಪಾಡಿಕೊಳ್ಳಬೇಕು. ನಮ್ಮ ಸುರಕ್ಷತಾ ಕ್ರಮಗಳು ನಮ್ಮ ಜೊತೆ ನಮ್ಮವರನ್ನು ಸುರಕ್ಷಿತವಾಗಿಡುತ್ತವೆ. ಬೆಂಗಳೂರಿನಿಂದ ದಂಡು ದಂಡಾಗಿ ಊರಿಗೆ ಹೊರಡುವ ಮುನ್ನ , ಅಕ್ಷರಸ್ಥರಂತೆ ಕೊರೊನ ಪರೀಕ್ಷಿಸಿಕೊಂಡು ನಂತರ ಹೊರಡಿ. ನಿಮ್ಮಿಂದ ಕೊರೋನ ಹಳ್ಳಿಗಳಿಗೆ ಲಗ್ಗೆ ಇಡದಂತೆ ಜಾಗೃತರಾಗಿರಿ. ಬೆಂಗಳೂರಿನಲ್ಲೇ ಬೆಡ್ ಗಳ ಅಭಾವ ಎಂದಮೇಲೆ, ಕ್ಷಣ ಆಲೋಚಿಸಿ ಮೂಲಭೂತ ವೈದ್ಯಕೀಯ ಸೌಲಭ್ಯಗಳಿಲ್ಲದ ಹಳ್ಳಿಗಳ ಕಥೆಯೇನಾಗಬೇಡ !? ಅನಕ್ಷರಸ್ಥರಂತೆ ವರ್ತಿಸದೆ , ಪಕ್ಷ ರಾಜಕೀಯ ಮಾಡದೆ , ಕೋಮುವಾದಿಗಳಾಗದೆ ಈ ಮಹಾಮರಿಯ ವಿರುದ್ಧ ಜನಸಾಮಾನ್ಯರೆಲ್ಲರು ಒಗ್ಗಟ್ಟಾಗಿ, ಮೂಲಭೂತ ಕರ್ತವ್ಯಗಳ ವಿವೇಚನೆಯೊಂದಿಗೆ ವರ್ತಿಸಿ ಹೋರಾಡೋಣ.
ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ತನ್ನ ಕರ್ತವ್ಯದ ನೆನಪಿದ್ದರೆ ಆದಷ್ಟು ಬೇಗ ಇನ್ನಷ್ಟು ಆಸ್ಪತ್ರೆ, ಬೆಡ್, ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಲಿ. ಜೊತೆಗೆ ಅನಕ್ಷರಸ್ಥ ಮಂತ್ರಿಗಳ ಬಾಯಿಗೆ ಬೀಗ ಹಾಕಿ , ಕೆಲಸಮಾಡಲು ಆದೇಶಿಸಲಿ.

ಸತ್ಪ್ರಜೆಗಳು ಅಣ್ಣ , ಅಯ್ಯ , ಅಪ್ಪನನ್ನು ಬಿಟ್ಟು ನಿಮ್ಮ ನಿಮ್ಮ ಆರೋಗ್ಯದ ಕಡೆ ಗಮನಕೊಡಿ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಶುಭದಿನ.

#ಅರ್ಜುನ್_ದೇವಾಲದಕೆರೆ#

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author