day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕನ್ನಡ ಸಾಹಿತ್ಯ ಪರಿಷತ್ತು.ವತಿಯಿಂದ 27ನೇ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕನ್ನಡ ಸಾಹಿತ್ಯ ಪರಿಷತ್ತು.ವತಿಯಿಂದ 27ನೇ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡ ಸಾಹಿತ್ಯ ಪರಿಷತ್ತು.ವತಿಯಿಂದ 27ನೇ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ.

ಮೂಡಿಗೆರೆ ತಾಲೊಕ್ ಕನ್ನಡ ಸಾಹಿತ್ಯ ಪರಿಷತ್ತು.
ಬಣಕಲ್ ಹೋಬಳಿ ಘಟಕ ಹಾಗೂ ತಾಲ್ಲೂಕು ಜಾನಪದ ಪರಿಷತ್ ಮೂಡಿಗೆರೆ ಇವರ ವತಿಯಿಂದ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕ್ .
ಹಳಿಕೆ ಹೊರಟ್ಟಿ ಗ್ರಾಮದಲ್ಲಿ ಸಾಹಿತ್ಯ ಪರಿಷತ್ತಿನ ಐದು ವರ್ಷದ ಅವಧಿಯಲ್ಲಿನ ಕೊನೆಯ 27ನೇ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ ನಡೆಯಿತು.

ಕನ್ನಡಪರ ಹೋರಾಟಗಾರರಾದ ಹೊರಟ್ಟಿ ರಘು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಜನರ ಆಡುಭಾಷೆಯ ಬಳಕೆಯಿಂದ ಕನ್ನಡದ ಸೊಗಡು ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್. ಮಾತನಾಡಿ ಪ್ರತಿಯೊಬ್ಬರ ಹೃದಯದ ಬಡಿತ ಕನ್ನಡಕ್ಕಾಗಿ ಮಿಡಿಯುವಂತಾಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಸಾಧ್ಯ. ಹಾಗಾಗಿ ಸಾಹಿತ್ಯ ಪರಿಷತ್ತಿನ ಐದು ವರ್ಷದ ಅವಧಿಯಲ್ಲಿ ಬಣಕಲ್ ಹೋಬಳಿಯಾದ್ಯಂತ ಬಣಕಲ್ ಘಟಕದ ಆಯೋಜನೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿ ಸಾರ್ಥಕ ಕನ್ನಡ ಸೇವೆಯನ್ನು ಮುಗಿಸಿದ್ದೇವೆ.
ಇದೇ ರೀತಿ ಮುಂದಿನ ಅವಧಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕನ್ನಡ ಸೇವೆ ಮಾಡಲು ಕಂಕಣಬದ್ದರಾಗಬೇಕು ಎಂದರು.
ತಮ್ಮ ಹಾಸ್ಯ ಬಾಷಣದ ಮೂಲಕ ಸಭೆಯನ್ನು ನಗೆಗಡಲಿನಲ್ಲಿ ತೇಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಅಧ್ಯಕ್ಷರಾದ ವಸಂತ್ ಹಾರ್ಗೋಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಕನ್ನಡದ ಸಂಸ್ಕೃತಿ ಹಾಗೂ ಸಂಪ್ರದಾಯದ ಸಾರವನ್ನು ಇಂದಿನ ಪೀಳಿಗೆಗೆ ತಿಳಿಸಿ ಗ್ರಾಮಿಣ ಭಾಗದ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ 50 ವಿಭಿನ್ನ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಕೆಲಸವಾಗಬೇಕಿದೆ. ಏಕೆಂದರೆ ಕೊರೋನ ಹಿನ್ನೆಲೆ ಮಕ್ಕಳು ವಿವಿಧ ಬಾಲಾಪರಾಧಗಳಲ್ಲಿ ತೊಡಗಿದ್ದು ಇದಕ್ಕೆ ಸಾಕ್ಷಿಯಂತೆ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿರುವುದು.
ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸಾಹಿತ್ಯಪರ ಚಟುವಟಿಕೆಗಳಲ್ಲಿ ಹಾಗೂ ಶಿಕ್ಷಣದಲ್ಲಿ ಕ್ರಿಯಾಶೀಲರಾಗುವಂತೆ ಮಾಡಬೇಕಾಗಿದೆ ಎಂದರು. ಸ್ಥಳೀಯ ಗಾಯಕರಾದ ರುಕ್ಮಿಣಿ ಮತ್ತು ಅದ್ವಿತ್ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಗೋಪಾಲ ಗೌಡ. ಕಾರ್ಯದರ್ಶಿ ದೇವಪ್ಪ. ಹರೀಶ್. ತಾಲ್ಲೂಕು ಕ.ಸಾ.ಪ.ಪೂರ್ವಾಧ್ಯಕ್ಷರಾದ ಎಂ.ಎಸ್.ಅಶೋಕ್. ಕಾರ್ಯದರ್ಶಿಗಳಾದ ಡಿ.ಕೆ.ಲಕ್ಷ್ಮಣಗೌಡ. ಶಾಂತಕುಮಾರ್. ಸಂಘಟನಾ ಕಾರ್ಯದರ್ಶಿ ಪ್ರಕಾಶ್. ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್. ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್. ಶಿಕ್ಷಕರಾದ ಕೃಷ್ಣ. ಸುರೇಶ್. ಅಶ್ವಿನಿ. ಇಂಪಾ. ಗಾಯಕರಾದ ಬಕ್ಕಿ ರವೀಂದ್ರ. ಜಯಪಾಲ್.
ಗ್ರಾಮಸ್ಥರಾದ ದೊಡ್ಡಯ್ಯ. ಶ್ರೀಕಾಂತ್. ಪಿ.ಕೆ.ಮಂಜುನಾಥ್. ರಮೇಶ್ ಸಬ್ಬೇನಹಳ್ಳಿ. ಮಂಜಯ್ಯ. ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.
ಜಾನಪದದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕರುಗಳು ನೆರೆದಿದ್ದ ಜನರನ್ನ ರಂಜಿಸಿದರು.
ಗಾಯಕರಾದ ಬಕ್ಕಿಮಂಜು, ತಂಡದವರು ತಮ್ಮ ಗಾಯನ ಹಾಗು ವಗಟಿನ ಮೂಲಕ ಪ್ರೇಕ್ಷಕರನ್ನ ನಗೆ ಗಡಲಲ್ಲಿ ತೇಲಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author