day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿಶ್ವ ಮಾತೃಭಾಷಾ ದಿನಾಚರಣೆಗೆ ಚಾಲನೆ.ತಪ್ಪದೇ ವೀಕ್ಷಿಸಿ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವಿಶ್ವ ಮಾತೃಭಾಷಾ ದಿನಾಚರಣೆಗೆ ಚಾಲನೆ.ತಪ್ಪದೇ ವೀಕ್ಷಿಸಿ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಚಿಕ್ಕಮಗಳೂರು               ———————————————ಇಂದು, ಫೆಬ್ರವರಿ ೨೧,  ವಿಶ್ವಮಾತೃಭಾಷಾ ದಿನಾಚರಣೆ, ಈ ಆಚರಣೆಯ ಹಿಂದೆ ಬಾಂಗ್ಲಾ ದೇಶದ ಕೊಡುಗೆ ಅನನ್ಯ, ಮಾತೃಭಾಷಾ ಉಳುವಿಗಾಗಿ ಬಾಂಗ್ಲಾದೇಶ ದಲ್ಲಿ ಬಲಿದಾನವಾಗಿದೆ, ಈ ವಿಚಾರವನ್ನು ಜಗತ್ತು ಮರೆಯುವ ಹಾಗೆ ಇಲ್ಲ, ಮಾತೃಭಾಷೆಗಳು ನಾಶವಾದರೆ ಒಂದು ಸಂಸ್ಕೃತಿ ಹೋದಂತೆ, ಒಂದು ಸಂಸ್ಕೃತಿ  ಕಣ್ಮರೆಯಾದರೆ ಸದೃಢವಾದ ಬದುಕೊಂದನ್ನು ಕಳೆದುಕೊಂಡಂತೆ,  ಸಣ್ಣ ಸಣ್ಣ ಮಾತೃಭಾಷೆಗಳು ಪತನವಾದರೆ ರಾಷ್ಟ್ರವು ಒಳಗೊಳಗೆ ದುರ್ಬಲವಾಗುತ್ತದೆ, ಮಾತೃಭಾಷೆಗಳ ಬಗ್ಗೆ ಆಸಕ್ತಿ ಕಳೆದುಕೊಂಡರೆ,   ಈ ನೆಲದ ಮಣ್ಣಿನವಾಸನೆ  ತಿಳಿಯದೆ, ನೆಲದ ಗುಣ ಗೊತ್ತಾಗದೆ ಬಣ್ಣರಹಿತವಾದ, ವಾಸನೆರಹಿತವಾದ  ಬದುಕಿಗೆ ಹೊರಳಬೇಕಾಗುತ್ತದೆ,                       ಧರ್ಮ, ಜಾತಿ, ಹಣ, ಅಧಿಕಾರ, ಪ್ರಶಸ್ತಿ ಸ್ಥಾನಮಾನ, ಚುನಾವಣೆಗೆ ತಲೆಕೆಡಿಸಿಕೊಂಡಷ್ಟು, ಭಾಷೆಗಳ ಸಾವಿನ ಬಗ್ಗೆ ಈ ನಾಗರಿಕ ಜಗತ್ತು ತಲೆಕೆಡಿಸಿಕೊಳ್ಳುತ್ತಿಲ್ಲ, ಈ ನಿಟ್ಟಿನಲ್ಲಿ ಮಾತೃಭಾಷಾ ಮಹತ್ವವನ್ನು ಪಸರಿಸಿ ಉಳಿಸಿ -ಬೆಳಸಿ -ಬಳಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಸುವರ್ಣ ಸಾಹಿತ್ಯ ಕನ್ನಡ ಭವನದಲ್ಲಿ, ಮಾತೃಭಾಷಾ ದಿನಾಚರಣೆ ಆಚರಿಸಲಾಯಿತು, 🌹”ವಚನ ಸಾಹಿತ್ಯ ನಿನ್ನನ್ನು ನೀನು ಗೆಲ್ಲು ಎಂದೇಳುತ್ತದೆ” ————————————- ಚಿಕ್ಕಮಗಳೂರಿನ ಜಿಲ್ಲಾ ಸುವರ್ಣ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಮಾತೃಭಾಷಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ದೊಡ್ಡಮಲ್ಲಪ್ಪ ಅವರು “ಸಾಗರದಾಚೆ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕನ್ನಡದ ಬೆಳವಣಿಗೆ” ಕುರಿತು ಉಪನ್ಯಾಸ ನೀಡಿದರು. ಲೇಖಕಿ ನಾಗಶ್ರೀ ತ್ಯಾಗರಾಜ್ ಅವರು “ವಚನ ಸಾಹಿತ್ಯ ಮತ್ತು ಕನ್ನಡದ ಶ್ರೀಮಂತಿಕೆ” ಕುರಿತು ಉಪನ್ಯಾಸ ನೀಡಿದರು. ಕನ್ನಡ ಪರಿಚಾರಕ ಹಿರೇಮಗಳೂರು ಕಣ್ಣನ್, ಸಾಹಿತಿ ಹಳೆಕೋಟೆ ರಮೇಶ್, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಉಪಸ್ಥಿತರಿದ್ದರು. ಉನ್ನತ ಶಿಕ್ಷಣ ಮತ್ತು ಸಾಹಿತ್ಯ ಸೇವೆಗಾಗಿ ನಾಗಶ್ರೀತ್ಯಾಗರಾಜ್ ಅವರಿಗೆ ಜಿಲ್ಲಾ ಕಸಾಪವತಿಯಿಂದ ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಸ್ವಾಗತಿಸಿದರು. ಕೋಶಾಧ್ಯಕ್ಷ ಪ್ರೊ.ಲಕ್ಷ್ಮೀಕಾಂತ್ ನಿರೂಪಿಸಿದರು. ಬಾಗವಹಿಸಿದ್ದ ಎಲ್ಲರಿಗೂ ಬೋಜನದ ವ್ಯವಸ್ಥೆ ಇತ್ತು. ಮತ್ತೆ ೨.ಗಂಟೆಗೆ ಸರಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಮ್ಮ ೫. ವರ್ಷದ ಅವದಿಯ ಕೊನೆಯ ಮಾಸಿಕ ಸಭೆ ನಡೆಸಿತು. ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಬಾಗವಹಿಸಿದ್ದರು. ಸಭೆಯಲ್ಲಿ ಶೃಂಗೇರಿ ಜಿಲ್ಲಾ ಸಮ್ಮೇಳನಲ್ಲಿ ಉಳಿದ 88.ಸಾವಿರಕ್ಕೂ ಅಧಿಕ ಹಣದ ಚೆಕ್ಕನ್ನು ಶೃಂಗೇರಿ ಅಧ್ಯಕ್ಷರಾದ ಮಂದಾರರವರಿಗೆ ನೀಡಲಾಯಿತು. ಅ ಹಣವನ್ನು ಬ್ಯಾಂಕಿನಲ್ಲಿ ಫ಼ಿಕ್ಸೆಡ್ ಹಾಕಿ ಬರುವ ಬಡ್ಡಿಯಲ್ಲಿ ಸಾಹಿತ್ಯದ ಕೆಲಸವನ್ನು ಮಾಡುವಂತೆ ತಿಳಿಸಲಾಯಿತು. ಜಿಲ್ಲಾ ಕಸಾಪದಲ್ಲಿ ಉಳಿದಿರುವ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಮುಂದಿನ ಸಾಲಿಗೆ ಅನುಕೂಲ ಅಗುವಂತೆ ಬ್ಯಾಂಕಿನಲ್ಲಿ ಇರಿಸುವುದಾಗಿ ತಿಳಿಸಿದರು. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ http://www.avintv.com/​

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author