day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KRS ಪಕ್ಷದಿಂದ **ನೀವು ಯಾವಾಗ ಚುನಾವಣೆಗೆ ನಿಲ್ಲುವುದು** #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

KRS ಪಕ್ಷದಿಂದ **ನೀವು ಯಾವಾಗ ಚುನಾವಣೆಗೆ ನಿಲ್ಲುವುದು** #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ನೀವು ಯಾವಾಗ ಚುನಾವಣೆಗೆ ನಿಲ್ಲುವುದು*

ಬನ್ನಿ,
ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ KRS ಪಕ್ಷದಿಂದ ಸ್ಪರ್ಧಿಸಿ.

ಭ್ರಷ್ಟರು, ಖದೀಮರು, ದುಡ್ಡಿರುವವರು, ರಾಜಕೀಯ ಕುಟುಂಬದವರು ಹಾಗೂ ಓಟು ಕೊಳ್ಳುವವರು ಮಾತ್ರ ಚುನಾವಣೆಗೆ ನಿಲ್ಲಬಹುದು ಎಂದು ಯಾರು ಹೇಳಿದ್ದು ನಿಮಗೆ? ‘ನಿಮಗೆ ಜನಪ್ರತಿನಿಧಿ ಆಗುವ ಯೋಗ್ಯತೆ ಇಲ್ಲ’ ಅಂದವರಾರು?

ಮತದಾರರೆಲ್ಲರೂ ಹಣ, ಹೆಂಡಕ್ಕೆ ಮಾತ್ರ ಓಟು ಹಾಕುತ್ತಾರೆ ಎನ್ನುವುದು ಎಷ್ಟು ನಿಜ?
ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಷ್ಟೆಲ್ಲಾ ಜನ ಓಟಿಗೆಂದು ಹಣ ಹಂಚದೆ ಗೆದ್ದಿದ್ದಾರೆ, ಗೊತ್ತಾ?

ಬನ್ನಿ… ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಸ್ಥಾಪಿಸಲಾಗಿರುವ “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷದ ಅಭ್ಯರ್ಥಿಗಳಾಗಿ…

ನಮ್ಮ ಕಂಡಿಷನ್ಸ್ ಇಷ್ಟೇ:-
1. ಯಾವುದೇ ಕಾರಣಕ್ಕೂ ಓಟಿಗೆಂದು ಹಣ, ಹೆಂಡ ಮತ್ತಿತರ ಆಮಿಷ ಒಡ್ಡಬಾರದು.
2. ಯಾವುದೇ ಕಾರಣಕ್ಕೂ ಸಾಲ ಮಾಡಿ, ಆಸ್ತಿ ಮಾರಿ ಚುನಾವಣೆಗೆ ನಿಲ್ಲಬಾರದು.
3. ಪ್ರಚಾರ ಚೆನ್ನಾಗಿ ಮಾಡಬೇಕು;
ಅದಕ್ಕೆ ನಿಮ್ಮ ಒಂದಷ್ಟು ಉಳಿತಾಯದ ಅಥವಾ ಸಾರ್ವಜನಿಕರಿಂದ ಪಾರದರ್ಶಕವಾಗಿ ದೇಣಿಗೆ ಸಂಗ್ರಹಿಸಿದ ಹಣವನ್ನು ಮಾತ್ರ ಖರ್ಚು ಮಾಡಬೇಕು.

ಗ್ರಾಮೀಣ ಕರ್ನಾಟಕದ ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ರೈತ ಹೋರಾಟಗಳಲ್ಲಿ ಮತ್ತು ವಿವಿಧ ಸಾಮಾಜಿಕ ಹೋರಾಟಗಳಲ್ಲಿ ತೊಡಗಿರುವ ಪ್ರಾಮಾಣಿಕರನ್ನು, ಸಮಾಜ ಬದಲಾಗಬೇಕೆಂದು ಹಂಬಲಿಸುವ ವ್ಯಕ್ತಿಗಳನ್ನು KRS ಪಕ್ಷ ಆಹ್ವಾನಿಸುತ್ತಿದೆ.

ಬನ್ನಿ, ಸಮುದಾಯದ ನಾಯಕರಾಗಿ. ಒಳ್ಳೆಯವರು ಮತ್ತು ಯೋಗ್ಯರು ಸಂಕೋಚ ಮತ್ತು ಅವಿಶ್ವಾಸದಿಂದ ಹಿಂದೆ ಮುಂದೆ ನೋಡುತ್ತಿರುವಾಗ ದುಷ್ಟರು ಮತ್ತು ಭಂಡರು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಗಾಳಿಗೆ ತೂರಿ ಅಧಿಕಾರ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ. ಈಗದು ಕಾಣಿಸುತ್ತಿಲ್ಲವೇ?

ಇನ್ನೂ ಏನೆಲ್ಲಾ ಕೆಟ್ಟದು ಆಗಬೇಕೆಂದು ಕಾಯುತ್ತಿದ್ದೀರಿ?
ಧೈರ್ಯ ಮಾಡಿ; ರಾಜಕೀಯ ಪ್ರವೇಶಿಸಿ.

ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಯನ್ನು ಸಂಪರ್ಕಿಸಿ: 72049-74572.
ನಿಮ್ಮ ಹೆಸರು, ತಾಲ್ಲೂಕು, ಜಿಲ್ಲೆಯ ವಿವರಗಳನ್ನು ಮೇಲಿನ ಸಂಖ್ಯೆಗೆ SMS ಅಥವ WhatsApp ಮಾಡಿ.

ಪಕ್ಷ ಸೇರಲು ಈ ಲಿಂಕ್ ಬಳಸಿ:
www.krsparty.org/registration/register.php

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author