day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj **KRS ಪಕ್ಷದ ಹೋರಾಟದ ಫಲವಾಗಿ**ಐವರು ಪೊಲೀಸರು ನೆನ್ನೆ ಅಮಾನತ್ತಾಗಿದ್ದಾರೆ*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

**KRS ಪಕ್ಷದ ಹೋರಾಟದ ಫಲವಾಗಿ**ಐವರು ಪೊಲೀಸರು ನೆನ್ನೆ ಅಮಾನತ್ತಾಗಿದ್ದಾರೆ*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ನಮ್ಮ ಕೆಅರ್ ಎಸ್*

*KRS ಪಕ್ಷದ ಹೋರಾಟದ ಫಲವಾಗಿ ಮೈಸೂರಿನ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಸೇರಿದಂತೆ ಐವರು ಪೊಲೀಸರು ನೆನ್ನೆ ಅಮಾನತ್ತಾಗಿದ್ದಾರೆ*
ಬಂಧನದ ಭೀತಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ನಾರಾಯಣಸ್ವಾಮಿ ನಾಪತ್ತೆಯಾಗಿದ್ದಾರಂತೆ!

ಭ್ರಷ್ಟ, ಅಯೋಗ್ಯ ಮತ್ತು ಲಂಚಕೋರ ಪೊಲೀಸ್/ಸರ್ಕಾರಿ ಅಧಿಕಾರಿಗಳನ್ನು ಅಮಾನತ್ತು ಮಾಡಿಸುತ್ತ ಬಂದಿರುವ KRS ಪಕ್ಷದ ಸಾಧನೆಯ ಸಾಲಿಗೆ ಮತ್ತೊಂದು ಸೇರ್ಪಡೆ.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಪರೀಕ್ಷಾ ಅಕ್ರಮ ತಮ್ಮ ಗಮನಕ್ಕೆ ಬಂದಾಗ ಲಾಡ್ಜ್‌ಗೆ ನುಗ್ಗಿ ಅಕ್ರಮದಲ್ಲಿ ತೊಡಗಿದ್ದ ಆರೋಪಿಗಳನ್ನು ಠಾಣೆಗೆ ಕರೆತಂದು ನಂತರ ಅವರೊಡನೆ ಡೀಲ್ ಮಾಡಿಕೊಂಡ ಮೈಸೂರಿನ ಮಂಡಿ ಪೊಲೀಸ್ ಠಾಣೆಯ ಭ್ರಷ್ಟ ಪೊಲೀಸರ ವಿರುದ್ಧ KRS ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ Somasunder K S ದೂರು ನೀಡಿದ ಮತ್ತು ಪಕ್ಷವು ಕಳೆದ ಎರಡು ದಿನಗಳಿಂದ ಮಾಧ್ಯಮಗಳ ಮೂಲಕ ಹೋರಾಟ ಮಾಡಿದ ಕಾರಣದಿಂದಾಗಿ ಇವೆಲ್ಲವೂ ಆಗಿದೆ.

ಪೊಲೀಸರ ಮತ್ತು ಸರ್ಕಾರಿ ನೌಕರರ ಭ್ರಷ್ಟಾಚಾರ, ಅಕ್ರಮ, ದೌರ್ಜನ್ಯಗಳ ವಿರುದ್ಧ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಹೋರಾಡುತ್ತಿರುವ ಏಕೈಕ ಪಕ್ಷ Karnataka Rashtra Samithi ಪಕ್ಷ. ನಮ್ಮ ನ್ಯಾಯಪರ ನಿಲುವು ಮತ್ತು ರಾಜಿಯಿಲ್ಲದ ಹೋರಾಟ ಈಗಿನ ಕುವ್ಯವಸ್ಥೆಯನ್ನು ಬದಲಿಸಿಯೇ ತೀರುತ್ತದೆ.

ಪೊಲೀಸರೂ ಸೇರಿದಂತೆ ಸರ್ಕಾರಿ ನೌಕರರಲ್ಲಿ ಅನೇಕರು ಈಗಲೂ ಪ್ರಾಮಾಣಿಕರಿದ್ದಾರೆ. ಸಂಖ್ಯೆ ಕಡಿಮೆ ಇರಬಹುದು. ಅಂತಹ ಪ್ರಾಮಾಣಿಕ ನೌಕರರಿಗೆ ಮಾತ್ರವಲ್ಲ, ಯಾವುದೇ ಸರ್ಕಾರಿ ನೌಕರರಿಗೆ ಯಾವುದೇ ನೀಚ ರಾಜಕಾರಣಿ ಅಥವ ಭ್ರಷ್ಟ ಮೇಲಧಿಕಾರಿ ವರ್ಗಾವಣೆ ಮತ್ತಿತರ ಕಾರಣಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟರೆ ಆ ಸರ್ಕಾರಿ ನೌಕರರು ನಮ್ಮನ್ನು ಸಂಪರ್ಕಿಸಬಹುದು. ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಎಲ್ಲರ ಬೆನ್ನಿಗೂ KRS ಪಕ್ಷ ನಿಲ್ಲುತ್ತದೆ. ಆದರೆ, ಭ್ರಷ್ಟಾಚಾರದಲ್ಲಿ ಸ್ವತಃ ಪಾಲ್ಗೊಂಡು, “ನಾವು ಒಳ್ಳೆಯವರೇ, ಆದರೆ ಏನು ಮಾಡುವುದು, ವ್ಯವಸ್ಥೆ ಹೀಗಿದೆ, ದಯವಿಟ್ಟು ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ” ಎನ್ನುವ ಪುಕ್ಕಲರಿಗೆ ಅಥವ ಅಪ್ರಾಮಾಣಿಕರಿಗೆ ನಮ್ಮ ಬೆಂಬಲವಿಲ್ಲ, ಅನುಕಂಪವಿಲ್ಲ. ಹಾಗಿದ್ದಲ್ಲಿ ನೀವು ಸರ್ಕಾರಿ ನೌಕರಿಯನ್ನು ತ್ಯಜಿಸಿ, ತೊಲಗಿ. ಧೈರ್ಯವಂತರು, ಯೋಗ್ಯರು, ಪ್ರಾಮಾಣಿಕರು ಸರ್ಕಾರಿ ನೌಕರರಾಗಲಿ.

ಭ್ರಷ್ಟ J.C.B ಪಕ್ಷಗಳಂತೆ ಭ್ರಷ್ಟರನ್ನು ಸಹಿಸುವುದಾಗಲಿ, ಅವರೊಂದಿಗೆ ರಾಜಿಯಾಗಲಿ, ಇಲ್ಲವೇ ಇಲ್ಲ. ಕರ್ನಾಟಕದ ಜನರ ಹಿತವೇ ನಮಗೆ ಪರಮಶ್ರೇಷ್ಠ.

ರವಿಕೃಷ್ಣರೆಡ್ಡಿ.
ರಾಜ್ಯಾದ್ಯಕ್ಷರು.
ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ.

11-06-2021.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author