day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬುದ್ಧ ಪೂರ್ಣಿಮೆಯ ಈ ದಿನದಂದು ಗೌತಮ ಬುದ್ಧನ ಬಗ್ಗೆ ಒಂದಿಷ್ಟು ತಿಳಿದು ವಿವೇಕವುಳ್ಳವರಾಗೋಣ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬುದ್ಧ ಪೂರ್ಣಿಮೆಯ ಈ ದಿನದಂದು ಗೌತಮ ಬುದ್ಧನ ಬಗ್ಗೆ ಒಂದಿಷ್ಟು ತಿಳಿದು ವಿವೇಕವುಳ್ಳವರಾಗೋಣ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬುದ್ಧ ಪೂರ್ಣಿಮೆಯ ಈ ದಿನದಂದು ಗೌತಮ ಬುದ್ಧನ ಬಗ್ಗೆ ಒಂದಿಷ್ಟು ತಿಳಿದು ವಿವೇಕವುಳ್ಳವರಾಗೋಣ

2500 ವರ್ಷಗಳ ಹಿಂದೆ
ಉತ್ತರಾಪಥದ ಶಾಕ್ಯರ ಪ್ರಜಾಸತ್ತೆಯ ದೊರೆ ಶುದ್ಧೋದನ ರಾಣಿ ಮಾಯಾದೇವಿ ಅವರ ಪುತ್ರನಾಗಿ ಜನಿಸಿದವನೆ ರಾಜಕುಮಾರ ಸಿದ್ಧಾರ್ಥ. ಚಿಕ್ಕವನಾಗಿದ್ದಾಗ ತಾಯಿ ಕಳೆದುಕೊಳ್ಳುತ್ತಾನೆ ಗೌತಮಿ ಎಂಬ ಸ್ತ್ರೀ ಸಾಕುತ್ತಾಳೆ ಅದಕ್ಕೆ ಆತ ಗೌತಮನೆಂದು ಕರೆಸಿಕೊಳ್ಳುತ್ತಾನೆ.ಯೌವ್ವನದಲ್ಲಿ ಯಶೋಧರೆ ಎಂಬ ವಧುವಿನೊಂದಿಗೆ ಮದುವೆಯಾದ ಈತ ರಾಹುಲ್ ಗೆ ತಂದೆಯಾಗಿ ರಾಜ್ಯ ಕೋಶ ನೋಡುತ್ತಿರುತ್ತಾನೆ.

ಒಂದು ಬೆಳಿಗ್ಗೆ ಸಾವು ಮತ್ತು ದುಃಖವನ್ನು ಕಂಡು 29ನೇ ವಯಸ್ಸಿಗೆ ಪತ್ನಿ, ಒಂದು ವರ್ಷದ ಮಗ, ತಂದೆ-ತಾಯಿ ರಾಜ್ಯಕೋಶ ಎಲ್ಲವನ್ನೂ ತೊರೆದು ಸನ್ಯಾಸ ಸ್ವೀಕರಿಸಿ,7 ವರ್ಷಗಳ ಕಟೋರ ತಪಸ್ಸಿನ ನಂತರ ದೇಹದಂಡನೆ ಮಾರ್ಗವನ್ನು ತ್ಯಜಿಸಿ,ಧ್ಯಾನ ಮಾರ್ಗವನ್ನು ಅನುಸರಿಸಿ ವಾರಣಾಸಿಯ ಸಮೀಪದ ಊರುವೇಲೆ ಎಂಬಲ್ಲಿ ಆಲದ ಮರದ ಕೆಳಗೆ ತಪಸ್ಸು ಮಾಡಿ ಜ್ಞಾನೋದಯ ಪಡೆದು ಬುದ್ದನಾದ.

ಆತ ಹುಟ್ಟಿದ್ದು ಮತ್ತು ಆತನಿಗೆ ಜ್ಞಾನೋದಯವಾದ ದಿನ ಎರಡು ಕೂಡ ಇಂದಿನ ಪೂರ್ಣಿಮೆಯ ದಿನವೇ. ಅದಕ್ಕಾಗಿ ಇಂದಿನ ಹುಣ್ಣಿಮೆಯನ್ನು ಬುದ್ಧ ಹುಣ್ಣಿಮೆ ಯೆಂದು ಇತಿಹಾಸ ದಾಖಲಿಸಿತು ಮತ್ತು ಆತನನ್ನು ಗೌತಮ ಬುದ್ಧನೆಂದು,ಆ ಮರವನ್ನು ಭೋಧಿ ವ್ರೃಕ್ಷವೆಂದು ಸಂಬೋಧಿಸಲಾಯಿತು.

ದುಃಖ,ದುಃಖದ ಹುಟ್ಟು, ದುಃಖದ ನಿವಾರಣೆಯ ಮಾರ್ಗವನ್ನು ನಾವೇ ಸಿದ್ದಿ ಮಾಡಿಕೊಳ್ಳಬೇಕು ಅಂದರೆ ದುಃಖವನ್ನು ಓಡಿಸುವ ಮಾರ್ಗವನ್ನು ಹುಡುಕಿಕೊಳ್ಳಬೇಕು ಅನ್ನುತ್ತಾ 45ವ ವರ್ಷಗಳ ಕಾಲ ಧರ್ಮೋಪದೇಶ ಮಾಡುತ್ತಾನೆ. ಅವನ
ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ
ಎಂಬ ಘೋಷಣೆಯೊಂದಿಗೆ ಬೌದ್ಧ ಧರ್ಮ ಆರಂಭವಾಗುತ್ತದೆ.

ಆಸೆಯೇ ದುಃಖಕ್ಕೆ ಮೂಲ ಎಂಬ ದೊಡ್ಡ ತತ್ವವನ್ನು ಜಗತ್ತಿಗೆ ಬಿಟ್ಟುಹೋದ ಬುದ್ಧಮತ್ತೊಂದು ಮಾತು ಹೇಳುತ್ತಾನೆ
ಗಾಳಿಗೆ ಪರ್ವತವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗೆಯೇ ಹೊಗಳಿಕೆ ಅಥವಾ ತೆಗಳಿಕೆಗೆ ವಿವೇಕವುಳ್ಳ ವ್ಯಕ್ತಿಯನ್ನು ವಿಚಲಿತ ಗೊಳಿಸಲು ಅಸಾಧ್ಯವೆಂದು ನಾವೆಲ್ಲರೂ ವಿವೇಕವುಳ್ಳವರಾಗುವ ಮೂಲಕ ಬುದ್ಧನ ಮಾತನ್ನು ನಡೆಸೋಣ ಮತ್ತು ಆತ ಜಗತ್ತಿಗೆ ಸಾರಿದ ಒಳ್ಳೆಯ ದಾರಿಯಲ್ಲಿ ನಡೆಯೋಣವೇ..!

ಇಂತಿ ವಿಶ್ವಾಸಿ
ಎಂ ಸಿ ಶಿವಾನಂದಸ್ವಾಮಿ
ಅಧ್ಯಕ್ಷ ಅಭ್ಯರ್ಥಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್

Navachaitanya Old Age Home

Career | job

About Author