day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕನ್ನಡದಲ್ಲೇ ಸೈ ಎಂದ ಮಂಜೇಶ್ವರ ಶಾಸಕ ಅಶ್ರಫ್ ಗೆ ಶುಭವಾಗಲಿ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕನ್ನಡದಲ್ಲೇ ಸೈ ಎಂದ ಮಂಜೇಶ್ವರ ಶಾಸಕ ಅಶ್ರಫ್ ಗೆ ಶುಭವಾಗಲಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡದಲ್ಲೇ ಸೈ ಎಂದ ಮಂಜೇಶ್ವರ ಶಾಸಕ ಅಶ್ರಫ್ ಗೆ ಶುಭವಾಗಲಿ

ಕೇರಳ ವಿಧಾನಸಭೆಯಲ್ಲಿ ಕಾಸರಗೋಡು ಜಿಲ್ಲೆಯ ಶಾಸಕ ಎಕೆಎಂ ಅಶ್ರಫ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡದಲ್ಲೇ ಸೈ ಎಂದು ಕನ್ನಡಕ್ಕೆ ಕೈ ಎತ್ತಿದ್ದಾರೆ.
ಅವರಿಗೆ ಶುಭವಾಗಲಿ. ಅವರ ಕನ್ನಡಪರ ಹಾಗೂ ಜನಪರ ಕೆಲಸದ ಹಿಂದೆ ಕನ್ನಡಿಗರೆಲ್ಲರ ಸಹಕಾರ ಇರಬೇಕಾಗುತ್ತದೆ ಅಂಬೋಣ.

ಕಾಸರಗೋಡು ಮತ್ತು ಮಂಜೇಶ್ವರ ಎಂದಾಕ್ಷಣ ನೆನಪಾಗುವುದು ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಉಡುಪಿ, ಕಾಸರಗೋಡು ಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿತ್ತು.
1949 ರಲ್ಲಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಕನ್ನಡದ ಕವಿ ಗೋವಿಂದ ಪೈ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿತು.
1951ರಲ್ಲಿ ಮುಂಬೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಆಗಿದ್ದರು.
ಇವರ ಸಾಲಿನಲ್ಲಿ ಮುಂದೆ ಕುವೆಂಪು,ಜಿ.ಎಸ್.ಶಿವರುದ್ರಪ್ಪ ರಾಷ್ಟ್ರ ಕವಿಗಳಾದದ್ದು ನಮ್ಮೆಲ್ಲರಿಗೆ ತಿಳಿದಿದೆ.
ಇದು ಕನ್ನಡಿಗರಿಗೆ ಸಂದ ಗೌರವ ಮತ್ತು ನಮ್ಮ ಹೆಮ್ಮೆ .

ಮಂಜೇಶ್ವರ ಮತ್ತೊಬ್ಬ ಮಹಾನ್ ಕವಿಯನ್ನು ನಮಗೆ ನೆನಪು ಮಾಡಿಕೊಳ್ಳುತ್ತದೆ. ಅವರೇ ಕೈಯಾರ ಕಿಯಣ್ಣರೈ ಮಕ್ಕಳ ಸಾಹಿತ್ಯದಲ್ಲಿ ಅಪಾರ ವಿದ್ವತ್ತನ್ನು ಹೊಂದಿದ್ದ ಅವರು ಸ್ವಾತಂತ್ರ್ಯ ಹೋರಾಟಗಾರರು, ಅಲ್ಲದೆ ಪತ್ರಕರ್ತರಾಗಿ 5000 ಲೇಖನಗಳನ್ನು ಬರೆದಿದ್ದಾರೆ. ಅವರು 66 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಮ್ಮೆಲ್ಲರಿಗೂ ಗೌರವ ತಂದಿದ್ದಾರೆ.
ಇವು ಮಂಜೇಶ್ವರದ ವಿಶೇಷಗಳು.

ಈ ಎಲ್ಲಾ ಹಿಂದಿನ ಇತಿಹಾಸವನ್ನು ಮತ್ತು ನಿನ್ನೆ ಅಶ್ರಫ್ ಪ್ರಮಾಣವಚನವನ್ನು ಕಂಡರೆ ಕಾಸರಗೋಡು ಅಲ್ಲದಿದ್ದರೂ ಮಂಜೇಶ್ವರ ಎಂದೆಂದೂ ಕನ್ನಡಿಗರ ಭಾಗ.
ಕನ್ನಡಿಗರ ಮತ್ತು ಸರ್ಕಾರಗಳ ಇಚ್ಛಾಶಕ್ತಿಯಿಂದ ನಮ್ಮೆಲ್ಲರ ಕನಸು ನನಸಾಗಲಿ ಅಲ್ಲವೇ…!

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Navachaitanya Old Age Home

Career | job

About Author