day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬಸವಣ್ಣ ಎಂದರೆ ಗೋವುಗಳಲ್ಲ , ಎತ್ತುಗಳಲ್ಲ ಕಾಣಿರೊ ಅಯೊಗ್ಯರೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬಸವಣ್ಣ ಎಂದರೆ ಗೋವುಗಳಲ್ಲ , ಎತ್ತುಗಳಲ್ಲ ಕಾಣಿರೊ ಅಯೊಗ್ಯರೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬಸವಣ್ಣ ಎಂದರೆ ಗೋವುಗಳಲ್ಲ , ಎತ್ತುಗಳಲ್ಲ ಕಾಣಿರೊ ಅಯೊಗ್ಯರೆ.

ಈ ಜಗದ ಮೊದಲ ಬೆಳಕು ಗೌತಮ ಬುದ್ಧರ ನಂತರ ಭಾರತದ ಅಸಮಾನ ವ್ಯವಸ್ಥೆ ಮತ್ತು ಕಂದಾಚಾರ ಮೂಡನಂಬಿಕೆಗಳ ವಿರುದ್ಧ ಬಂಡಾಯ ಕ್ರಾಂತಿಕಾರಿಯನ್ನು ಹೂಡಿದ ಕಾಯಕ,
ದಾಸೋಹ,
ಪರಿಶುದ್ಧ ಶಿವಭಕ್ತಿ ಹಾಗೂ ಪಂಚಾಚಾರಗಳಾಧಾರಿತ ಅನುಭಾವ ತತ್ವಗಳ ಮುಖೇನ ಹೊಸ ಯುಗವನ್ನ ಸೃಷ್ಟಿಸಿ. ಮಾನವ ಸಮಾಜಕ್ಕೆ ಘನತೆ, ಸ್ವಾಭಿಮಾನ ಮತ್ತು ಗೌರವವನ್ನು ತಂದುಕೊಟ್ಟ ಮಹಾ ಸಾದಕ ಸುಧಾರಕ. ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು,
ಹಣ ದೊಡ್ಡದಲ್ಲ ಗುಣ ದೊಡ್ಡದು,
ಎಂದು ನುಡಿದಂತೆ ನಡೆದ, ನಡೆದಂತೆ ನುಡಿದ ಕಾಯಕ ಯೋಗಿ.
ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ
ಪೂಜಿಸಿದರೆ ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ!
ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ.?
ಇಂತಹ ಬಸವಣ್ಣ ಹುಟ್ಟಿದ ದಿನವನ್ನ ಗೋವುಗಳ ಪೂಜೆಗೆ ಸೀಮಿತ ಮಾಡುವುದು ಬೇಡ. ಬಸವ ಜಯಂತಿ ಎಂದರೆ ದನಗಳ ಪೂಜೆ ಅಥವಾ ದನಗಳ ಹಬ್ಬ ಅಲ್ಲ. ಮನುವಾದಿಗಳು ಬಸವಣ್ಣನವರನ್ನು ಅವಮಾನಿಸಲೆಂದು ಮತ್ತು ಇತಿಹಾಸದ ಪುಟಗಳಲ್ಲಿ ಹಾಗೂ ಜನರ ಮನದಲ್ಲಿ ಅಚ್ಚೆಯಾಗಿ ಉಳಿದಿರುವ ಬಸವಣ್ಣನವರ ಹೆಸರನ್ನು ಅಳಿಸುವ ಸಲುವಾಗಿ ಬಸವ ಎಂದರೆ ದನ ಎಂದು ಹೋಲಿಕೆ ಮಾಡಿ ಮುಗ್ದ ಜನರಿಗೆ ಅಪಪ್ರಚಾರ ಮಾಡಲಾಗಿದೆ.
ದಯವಿಟ್ಟು ಯಾರು ಕೂಡ ಬಸವ ಜಯಂತಿಯ ದಿನ ಈ ರೀತಿ ದನಗಳನ್ನು ಪೂಜೆ ಮಾಡಿ ಜಗಜ್ಯೋತಿ ಬಸವಣ್ಣನವರಿಗೆ ಅವಮಾನ ಮಾಡಬೇಡಿ. ವಚನವೆಂಬ ನೀರಿನಿಂದ ಮನಸ್ಸಿಗೆ ಮಜ್ಜನವ ಮಾಡಿಸಿ ಬಸವಣ್ಣನವರನ್ನ ನಮ್ಮ ಮನಸಿನಲ್ಲಿರಿಸಿ ನಮಿಸೋಣ,
ಮತ್ತು ಅವರನ್ನೇ ಪಾಲಿಸೋಣ.
ನಮಗೆ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸಿದ ಬಸವೇಶ್ವರ ಸ್ಪೂರ್ತಿಯಾಗಬಾರದು, ಮನಸ್ಸಿನ ಬಣ್ಣವ ತೊಳೆದು ನೈಜ ಜೀವನದ ಮಾರ್ಗವ ತೋರಿದ ಕ್ರಾಂತಿಕಾರಿ ಅಣ್ಣ ಬಸವಣ್ಣನೇ ನಮಗೆ ಸ್ಪೂರ್ತಿ ಯಾಗಬೇಕು. ಮನುವಾದಿಗಳು ಸೃಷ್ಟಿಸಿದ ಗೊಡ್ಡು ಸಂಪ್ರದಾಯಗಳನ್ನ ಅಟ್ಟಾಡಿಸಿದ, ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ, ಶೋಷಣೆ ರಹಿತ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ,
ಭಕ್ತಿ ಭಂಡಾರಿ ಬಸವಣ್ಣ ನಿಮ್ಮ ಹುಟ್ಟುಹಬ್ಬದವಿಂದು ನಿಮಗೆ ಮನಪೂರ್ವಕ ಪ್ರಣಾಮಗಳು.

ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಹುಟ್ಟುಹಬ್ಬದ ಶುಭಾಶಯಗಳು.

ಜೈ ಬುದ್ಧ, ಜೈ ಬಸವಣ್ಣ, ಜೈ ಭೀಮ್

ವಸಂತ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author