day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ತಂಡದ ವತಿಯಿಂದ ಮನೆ ದುರಸ್ತಿ ಕಾರ್ಯಕ್ರಮ*#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ತಂಡದ ವತಿಯಿಂದ ಮನೆ ದುರಸ್ತಿ ಕಾರ್ಯಕ್ರಮ*#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮನೆ ದುರಸ್ತಿ ಕಾರ್ಯಕ್ರಮ

ಮೂಡಿಗೆರೆ
ಮೇ 5

ಮೂಡಿಗೆರೆ ತಾಲ್ಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕ,
ಜಾವಳಿ ವಲಯದ ವಿಪತ್ತು ನಿರ್ವಹಣಾ ಘಟಕ, ಬಡಕುಟುಂಬದ ಕಲ್ಮನೆ ಶ್ರೀಮತಿ ರತ್ನ ಎಂಬವರ ಮನೆ ಕುಸಿದು ಬೀಳುವ ಹಂತದಲ್ಲಿ ಇರುವುದನ್ನು ಕಂಡು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆ ಮನೆಯ ಕೆಲಸವನ್ನು ಪೂರ್ಣಗೊಳಿಸಲು ಪಣತೊಟ್ಟು ಸಂಪೂರ್ಣವಾಗಿ ಹಾಳಾಗಿದ್ದು ಮನೆಯ ಮೇಲ್ಚಾವಣಿ ದುರಸ್ತಿಯಲ್ಲಿದ್ದು ಅದಕ್ಕೆ ಪಕ್ಕಾಸು ರೀಪುಗಳು ಹಂಚುಗಳನ್ನು ಹಾಕಲಾಯಿತು.

ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಕೆಲಸವು ತುಂಬಾ ಚೆನ್ನಾಗಿ ನಡೆದಿದೆ. ಅದರಲ್ಲಿ ನಮ್ಮ ತಂಡವು ಅಲ್ಲಿಗೆ ತಲುಪುವ ಹೊತ್ತಿಗೆ ಸರಿಸುಮಾರು ಹತ್ತು ಗಂಟೆ ಕಳೆದಿತ್ತು.
ನಾವು ಹೋಗುವ ಅಷ್ಟರಲ್ಲಿ ಮನೆಯ ಮೇಲಿನ ಹಂಚುಗಳನ್ನು ತೆಗೆಯಲು ಪ್ರಾರಂಭ ಮಾಡಿದ್ದರು.
ನಂತರ ನಮ್ಮ ತಂಡದ ಸದಸ್ಯರು ಅವರೊಂದಿಗೆ ಕೈಜೋಡಿಸಲು ಪ್ರಾರಂಭಿಸಿದಾಗ ಕೆಲಸವು ವೇಗಗತಿಯಲ್ಲಿ ಸಾಗತೊಡಗಿತ್ತು. ಪರಿಚಯವಿಲ್ಲದ ಮುಖಗಳು ಸಮಯ ಕಳೆಯುತ್ತಿದ್ದಂತೆ ಒಬ್ಬೊಬ್ಬರ ಪರಿಚಯವಾಗುತ್ತೆ.
ಅಲ್ಲಿನ ಸೇವಾ ಪ್ರತಿನಿಧಿಗಳಾದ ಜ್ಯೋತಿ ಅಕ್ಕ ಪ್ರೇಮಕ್ಕ ಹಾಗೂ ಸುಮತಿ ಅಕ್ಕನವರು ಎಲ್ಲರ ಜೊತೆ ಒಡಹುಟ್ಟಿದವರ ಅಕ್ಕ-ತಂಗಿ ಸಲಿಗೆ ಗಳು ಬೆಳೆಯಲು ಪ್ರಾರಂಭವಾಯಿತು. ಅದರಲ್ಲಿಯೂ ಆ ಭಾಗದ ಸಂಯೋಜಕರಾದ ದಿನಕರ್ ಪೂಜಾರಿ ಸಾಗರ್ ಹಾಗೂ ಚಂದ್ರಶೇಖರ್ ಅವರ ಮುಂದಾಳತ್ವದಲ್ಲಿ ನಡೆದ ಮನೆ ಕೆಲಸ ತುಂಬಾ ಅಚ್ಚುಕಟ್ಟಾಗಿ ನಡೆಯಿತು.

ಒಂದು ಗಂಟೆ ಸುಮಾರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅದರಲ್ಲಿ ವಿಶೇಷವಾಗಿ ಅಲ್ಲಿ ತಟ್ಟೆ ಸಿಗದ ಸಂದರ್ಭದಲ್ಲಿ ಅಡಿಕೆಯ ಪಾಲೆ ಬಾಳೆದೆಲೆ ಯ ತಟ್ಟೆಯನ್ನು ರೆಡಿ ಮಾಡಿ ನಮ್ಮ ತಂಡದ ಸದಸ್ಯರಿಗೆ ಭೂರಿ ಭೋಜನವನ್ನು ಸಿದ್ಧಪಡಿಸಿದ್ದರು. ಊಟವಾದ ನಂತರ ಯಥಾಪ್ರಕಾರ ಕೆಲಸ ಪ್ರಾರಂಭ.
ನಮ್ಮ ತಂಡವು ಮೂರು ಗಂಟೆಯ ತನಕ ಕೆಲಸ ನಿರ್ವಹಿಸಿ ನಂತರ ಅಲ್ಲಿಂದ ತೆರಳಿದೆವು.
ಆದರೆ ಒಂದಂತೂ ನಿಜ ಎಲ್ಲೋ ಹುಟ್ಟಿ ಎಲ್ಲೋಬೆಳೆದು ಅಣ್ಣತಮ್ಮ ದರಂತೆ ಬಾಳುವುದೇ ಈ ಜಗತ್ತಿನ ನಿಯಮ.

ಈ ಸಂದರ್ಭದಲ್ಲಿ ಮೂಡಿಗೆರೆ ತಾಲೂಕಿನ ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಠಲ ಪೂಜಾರಿ ಉಪಸ್ಥಿತಿಯಲ್ಲಿಸಂಯೋಜಕರಾದ ಸಾಗರ್ ಮೂಡಿಗೆರೆ ಕಸಬಾ ಸಂಯೋಜಕರಾದ ಪ್ರವೀಣ್ ಪೂಜಾರಿ, ಅರುಣ್ ಪಿಂಟೋ, ಸುರೇಶ್, ಜಾವಳಿ ಘಟಕದ ಸದಸ್ಯರಾದ
ದಿನಕರ ಪೂಜಾರಿ, ರಂಜಿತ್, ಅಜಿತ್, ಚಂದ್ರ, ಮದನ್ ಹೆಮ್ಮಕ್ಕಿ, ಚಂದ್ರಶೇಖರ್, ಅಭಿಷೇಕ್, ನಾಗರಾಜ್ ಗೌಡ ಮತ್ತು ವಲಯ ಮೇಲ್ವಿಚಾರಕರಾದ ಚಿತ್ತರಂಜನ್ ಹಾಗೂ ಸೇವಾ ಪ್ರತಿನಿಧಿ ಜ್ಯೋತಿ ,ಪ್ರೇಮ ,ಸುಮತಿ, ವೀರೇಂದ್ರ, ಕಳಸ ವಲಯದ ಅಜಿತ್ ಹಾಜರಿದ್ದರು ಉತ್ತಮ ರೀತಿಯಲ್ಲಿ ದುರಸ್ತಿ ಕಾರ್ಯ ನಡೆಸಲಾಯಿತು.

ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaithanya Old Age Home

Career | job

About Author