day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕನ್ನಡ ಸಾಹಿತ್ಯ ಪರಿಷತ್ತು ೧೦೭ನೆಯ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕನ್ನಡ ಸಾಹಿತ್ಯ ಪರಿಷತ್ತು ೧೦೭ನೆಯ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕನ್ನಡ ಸಾಹಿತ್ಯ ಪರಿಷತ್ತು ೧೦೭ನೆಯ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು
🌹 💐💐💐 🌹 ————————————— ಶುಭಾಶಯ ಕೋರುವವರು,,,,,,

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಚಿಕ್ಕಮಗಳೂರು, =================== ಮೇ ೫ ಎಂದರೆ, ಅದು
ಕ, ಸಾ, ಪ ಸಂಸ್ಥಾಪನಾ ದಿನಾಚರಣೆ ಎಂದರ್ಥ, ಮಾತ್ರವಲ್ಲ ಸಾಹಿತ್ಯ ವಲಯದ ಸ್ವಾಭಿಮಾನಿ ದಿನ ಕೂಡ,ಇಂತಹ ದಿನದ ಆಚರೆಣೆಗೆ ಮೂಲ ಕಾರಣರಾದವರು ಮೈಸೂರು ಸಂಸ್ಥಾನದ ಮೇರು ಒಡೆಯ, ಸಾಮಾಜಿಕ ಕಾರ್ಯಕ್ರಮಗಳ ರೂವಾರಿ, ಸಾಹಿತ್ಯ ಪ್ರಿಯ ನಾಲ್ವಡಿ ಕೃಷ್ಣರಾಜಒಡೆಯರ್,

ಅವರ ದೂರದೃಷ್ಟಿತ್ವದ ಫಲ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು,
ಈ ಹೊತ್ತಿನಲ್ಲಿ ತಾಯಿ ಕನ್ನಡಾಂಬೆಗೆ ನಮಸ್ಕರಿಸಿ, ಆಶೀರ್ವಾದ ಬೇಡಿ, ಅ ಮೇರು ಒಡೆಯರಿಗೆ ಎಲ್ಲಾ ಕನ್ನಡಿಗರ ಪರವಾಗಿ ಗೌರವ ಸಲ್ಲಿಸಿ ಸಂಸ್ಥಾಪನಾ ದಿನವನ್ನು ನೆನಪು ಮಾಡಿಕೊಳ್ಳುವುದರ ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ,

ಕನ್ನಡ ಎಂದರೆ ಕೇವಲ ಭಾಷೆ ಮಾತ್ರವಲ್ಲ, ಅದೊಂದು ಗಟ್ಟಿ ಬದುಕು, ಶ್ರೇಷ್ಠ ಸಂಸ್ಕೃತಿ, ಜಾತ್ಯತೀತ ನೆಲೆಗಟ್ಟು, ಇಷ್ಟು ಮಾತ್ರವಲ್ಲ ಮಾನವಧರ್ಮದ ಬುನಾದಿ ಕೂಡ ಆಗಿದೆ,

ಇಂತಹ ಬುನಾದಿಯನ್ನು ನಮ್ಮ ಹಗೆತನಗಳಿಂದ, ಸೋಮಾರಿ ತನಗಳಿಂದ, ಅಧಿಕಾರ, ವೈಯ್ಯುಕ್ತಿಕ ಪ್ರಚಾರ, ಸ್ವಂತ ಲಾಭಗಳಿಗೆ ಬಲಿ ಕೊಟ್ಟು, ಕುರ್ಚಿಕೇಂದ್ರಿತ ಮಾಡುವ ಮೂಲಕ ಬೂದಿಯಾಗದಂತೆ ನೋಡಿಕೊಳ್ಳಬೇಕಾಗಿದೆ,

ಒಂದು ವೇಳೆ ಕುರ್ಚಿ ಕೇಂದ್ರಿತವಾಗಿ, ಕುಳಿತ ಕುರ್ಚಿಯನ್ನು ಬೆಳೆಯಲು ಬಿಟ್ಟರೆ ಅ ಕುರ್ಚಿ ಮೇಲೆ ಕುಳಿತ ವ್ಯಕ್ತಿ ಕುಬ್ಜನಾಗುತ್ತಾನೆ, ವ್ಯಕ್ತಿ ಕುಬ್ಜನಾದರೆ ಕುರ್ಚಿ ತನ್ನ ಚಕ್ರಾಧಿಪತ್ಯ ಮೆರೆಯುತ್ತದೆ, ಆಗ ವ್ಯಕ್ತಿ ಕಾಣೆಯಾಗುತ್ತಾನೆ, ಮಾತ್ರವಲ್ಲ, ಕುರೂಪಿಯಾಗುತ್ತಾನೆ, ಈ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಹೊಸ ಸಂಕಲ್ಪಮಾಡಬೇಕಾಗಿದೆ,

ಈ ದೃಷ್ಟಿಯಿಂದ, ಕೊರೊನದ ಈ ದಿನಮಾನದಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ನಮ್ಮ ನಮ್ಮ ಮನೆಯಲ್ಲೇ ಇದ್ದು, ಆಚರಿಸಿಕೊಂಡು ಮಾತೃ ಭಾಷೆಯನ್ನೆ ಬದುಕಿನ ಒಂದು ಬಾಗವಾಗಿ ಬರಮಾಡಿಕೊಂಡು,ಅ ಮೂಲಕ ಸಾಹಿತ್ಯ, ಕಲೆ, ಸಂಸ್ಕೃತಿ,, ಕೃಷಿ, ನೆಲ, ಜಲ, ಪರಿಸರವನ್ನು ಸಂರಕ್ಷಿಸಿ, ಜಾತ್ಯತೀತ ನೆಲೆಗಟ್ಟಿನ ಮೇಲೆ ವಿಶ್ವಮಾನವರಾಗೋಣ , ಮಾನವ ಕುಲ ತಾವೊಂದೆ ವಲಂ ಎನ್ನೋಣ,

ಮತ್ತೊಮ್ಮೆ ಸಾಹಿತ್ಯ ಸೇನಾನಿಗಳಿಗೆಲ್ಲ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪರವಾಗಿ ಶುಭ ಕೋರುತ್ತಿದ್ದೇನೆ, 👏

ನಿಮ್ಮ,,,
ಡಿ, ಎಂ, ಮಂಜುನಾಥಸ್ವಾಮಿ
ಗೌ, ಕಾರ್ಯದರ್ಶಿ,

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author