day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಮನಸು ಮುದುಡಿ -ಮಾತು ಮೌನವಾಗಿ ಮನೆಯೊಳಗಿಂದಲೇ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕೈ ಮುಗಿಯುತಿದ್ದೇವೆ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಮನಸು ಮುದುಡಿ -ಮಾತು ಮೌನವಾಗಿ ಮನೆಯೊಳಗಿಂದಲೇ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕೈ ಮುಗಿಯುತಿದ್ದೇವೆ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮನಸು ಮುದುಡಿ -ಮಾತು ಮೌನವಾಗಿ ಮನೆಯೊಳಗಿಂದಲೇ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕೈ ಮುಗಿಯುತಿದ್ದೇವೆ.

ಹೂವಿನ ಮೇಲೆ ನಾವು ಮಲಗಿದರೆ ಅದು ಮೊದಲ ರಾತ್ರಿ,
ನಮ್ಮ ಮೇಲೆ ಹೂವು ಮಲಗಿದರೆ ಅದು ಕೊನೆಯ ರಾತ್ರಿ*

ಇಂತಹ ಬದುಕಿನ ನಿಗೂಢಗಳನ್ನು ಅರ್ಥತುಂಬಿ, ರೂಪಕಗಳ ಮೂಲಕ ಹನಿಗವನಗಳ ಇತಿಹಾಸಕ್ಕೆ ಒಂದು ಭಾವಪೂರ್ಣ ಬುನಾದಿ ಹಾಕಿದ್ದ ಸಾಹಿತಿ 72ವರ್ಷದ ಕನ್ನಡದ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಅವರನ್ನು ಇಂದು ಕೊರೊನದ ಕಾರಣ ಕೊಟ್ಟು ಕಳೆದುಕೊಂಡಿದ್ದೇವೆ,

ಜರಗನಹಳ್ಳಿ ಸರ್ ಗೆ ಲಂಕೇಶ್, ಚಂಪಾ, ಎಚ್ಚಸ್ವಿ ಅಂತಹ ಧೀಮಂತರು ಆಪ್ತರಾಗಿದ್ದರು, ಆದರೆ ನನಗೆ ಅವರ ಕವಿತೆಗಳು ಅಷ್ಟೆ ಆಪ್ತವಾಗಿದ್ದಾವೆ, ಅವರ ಕವಿತೆಗಳು ಇಂದಿಗೂ ನನ್ನನ್ನು, ನನ್ನಂತವರನ್ನು ಹಗುರ ಮಾಡಿ ಜೀವಕಾರುಣ್ಯದ ಪ್ರೀತಿ ತೋರಿಸುತ್ತವೆ,

ಜರಗನಹಳ್ಳಿ ಸರ್ ಅವರು ಶರಣ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಯಾಗಿ ಮಾತ್ರವಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಅದ ಪುಸ್ತಕ ಪ್ರಕಾಶನದ ಮೂಲಕ 40ಕ್ಕೂ ಹೆಚ್ಚು ಕವನ ಸಂಕಲನ ಹೊರತಂದು ಕಾವ್ಯದ ಮೇಲೆ ಅವರಿಗಿದ್ದ ಬದ್ಧತೆಯನ್ನು ಈ ಮೂಲಕ ತೋರಿಸಿಕೊಟ್ಟಿದ್ದರು,

ಇವರ ಸಾಹಿತ್ಯ ಸೇವೆ ಪರಿಗಣಿಸಿ ಹಲವರು ಪ್ರಶಸ್ತಿ, ಸನ್ಮಾನ, ಗೌರವ ಇವರ ಕೊರಳಿಗೆ ಹುಡುಕಿಕೊಂಡು ಬಂದು ಲಭಿಸಿದ್ದವು,

ಇದು ಇವರನ್ನುಕೊರೊನ ಕಾರಣ ಕಳೆದುಕೊಳ್ಳಬೇಕಾಯಿತು , ಇವರ ಮೂಡಿಸಿದ ಹೆಜ್ಜೆ ಗುರುತುಗಳು, ಅವರ ಕವಿತೆಯ ಘಮ ಘಮದ ಗಾಟು ಸಾವಿನಲ್ಲೂ ನನ್ನನ್ನು ಬಡಿದೆಬ್ಬಿಸುತಿದೆ,

ಅಗಲಿದ ಕನ್ನಡದ ಈ ಹಿರಿಯ ಭಾವಜೀವಿಗೆ,,,,,,,,,,

ಕನ್ನಡ ಸಾಹಿತ್ಯ ಪರಿಷತ್ತು,
ಶರಣ ಸಾಹಿತ್ಯ ಪರಿಷತ್ತು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿಕ್ಕಮಗಳೂರು ಜಿಲ್ಲಾ ಘಟಕಗಳ ಪರವಾಗಿ ನುಡಿನಮನ ಸಮರ್ಪಿಸುತ್ತಿದ್ದೇನೆ,

ಹೋಗಿ ಬನ್ನಿ, ಅಂತಿಮ ವಿದಾಯ,
ಹೃದಯ ತುಂಬಿದ ನಮನಗಳು,
====================
🌹 🙏🙏🙏 🌹
==================== ನುಡಿ ಸಮರ್ಪಣೆ :-
ಡಿ, ಎಂ, ಮಂಜುನಾಥಸ್ವಾಮಿ,
ದಿಣ್ಣೆಕೆರೆ,
ಚಿಕ್ಕಮಗಳೂರು…
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author