day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಾರಿಗೆ ವ್ಯವಸ್ಥೆ ಶೀಘ್ರವಾಗಿ ಆರಂಭಿಸಲು–ಆಗ್ರಹ ಫಿರೋಜಖಾನ್ ಹವಾಲ್ದಾರ ಆಗ್ರಹಿಸಿದ್ದಾರೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸಾರಿಗೆ ವ್ಯವಸ್ಥೆ ಶೀಘ್ರವಾಗಿ ಆರಂಭಿಸಲು–ಆಗ್ರಹ ಫಿರೋಜಖಾನ್ ಹವಾಲ್ದಾರ ಆಗ್ರಹಿಸಿದ್ದಾರೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಾರಿಗೆ ವ್ಯವಸ್ಥೆ ಶೀಘ್ರವಾಗಿ ಆರಂಭಿಸಲು–ಆಗ್ರಹ

ಧಾರವಾಡ:—- ರಾಜ್ಯದಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಶೀಘ್ರವಾಗಿ ಆರಂಭಿಸುವ ಕುರಿತು ಜನರು ಸರಕಾರಿ ಸುಮಾರು 14 ದಿವಸಗಳಿಂದ ಸರಕಾರ ಮತ್ತು ಸಾರಿಗೆ ನೌಕರರ ಮಧ್ಯೆ ರಾಜ್ಯದ ಸುಮಾರು ಶೇ. 70 ಜನರು ತತ್ತರಿಸಿ ಹೋಗಿದ್ದಾರೆ . ರಾಜ್ಯದಲ್ಲಿ ಸುಮಾರು ಶೇ 30  ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಇದನ್ನು ಅರಿತು ರಾಜ್ಯದಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಶೀಘ್ರವಾಗಿ ಆರಂಭಿಸುವಂತೆ ಲೋಹತಾಂತ್ರಿಕ ಜನತಾದಳ ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಫಿರೋಜಮಾನ ಹವಾಲ್ದಾರ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಲು ದುಡಿಯುವ ಕಾರ್ಮಿಕ ವರ್ಗ , ಸರಕಾರಿ ಕೆಲಸಕ್ಕೆ ಹೋಗುವ ವರ್ಗ , ಸಣ್ಣ ಮತ್ತು ಅತಿ ಸಣ್ಣ ರೈತ ವರ್ಗ , ದಿನಾಲು ಕೆಲಸಕ್ಕೆ ಹಳ್ಳಿಗಳಿಂದ ಪಟ್ಟಣಕ್ಕೆ ಬರುವರು ಮತ್ತು ಅನಾರೋಗ್ಯದಿಂದ ಸಣ್ಣ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಬಸ್ಸನ್ನು ಅವಲಂಬಿಸಿಕೊಂಡಿದ್ದಾರೆ . ನೋಟ್ ಅಮಾನ್ಯಕರಣ , ಲಾಕ್‌ಡೌನ್‌ನಿಂದ , ತೈಲ ದರಗಳು ಇತರೆ ವಸ್ತುಗಳ ಬೆಲೆ ಏರಿಕೆಗಳಿಂದ ಜನರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ ಎಂದರು.

ಅಂತಹ ವರ್ಗ ಸರಕಾರ ಮತ್ತು ಮುಷ್ಕರ ನಿರತ ಸಾರಿಗೆ ನೌಕರರ ಮಧ್ಯೆ ಸಿಲುಕಿ ದುಡಿಮೆ , ವ್ಯಾಪಾರ ವಹಿವಾಟು ಇಲ್ಲದೇ ಆರ್ಥಿಕವಾಗಿ ಮತ್ತಷ್ಟು ಕುಗ್ಗುತ್ತಿದ್ದಾರೆ . ಸರಕಾರ ಮತ್ತು ಸಾರಿಗೆ ನೌಕರರ ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಯಲ್ಲಿಟ್ಟು ಶೇ.  70 ಸರಕಾರಿ ಬಸ್‌ನ್ನು ನಂಬಿರುವ ರಾಜ್ಯದ ಜನತೆಯ ಬಗ್ಗೆ ವಿಚಾರಿಸಿ ಸಾರಿಗೆ ನೌಕರರು ಮತ್ತು ಸರಕಾರ ಸೌಹಾರ್ಧತೆಯಿಂದ ಮಾತುಕತೆ ಮೂಲಕ ಶೀಘ್ರವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ . ರಾಜ್ಯದ ಜನರಿಗೆ ಸರಕಾರಿ ಸಾರಿಗೆ ವ್ಯವಸ್ಥೆಯ ಅನುಕೂಲ ಮಾಡಿಕೊಡಬೇಕು ಎಂದರು.

ಸರಕಾರ ಮುಷ್ಕರ ನಿರತ ಕಾರ್ಮಿಕರ ಮೇಲೆ ಕೊವಿಡ್ ನೆಪವೊಡ್ಡಿ , ಮೊಕದ್ದಮೆಯನ್ನು ದಾಖಲಿಸಿದ್ದು ಪ್ರಜಾಪ್ರಭತ್ವದ ಕಗ್ಗೋಲೆ . ಆದ್ದರಿಂದ ಸರಕಾರ ಇವರ ಮೇಲೆ ದಾಖಲಿಸಿದ್ದ ಮೊಕದ್ದಮೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಲೋಕತಾಂತ್ರಿಕ ಜನತಾದಳ ರಾಜ್ಯ ಯುವ ಘಟಕ ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮೈನುದ್ದೀನ್‌ ಖಾನ್ , ಎಂ.ಹೆಬ್ಬಳ್ಳಿ ಇತರರು ಉಪಸ್ಥಿತರಿದ್ದರು.

Career | job

Navachaithanya Old Age Home

About Author